<p><strong>ಮಡಿಕೇರಿ:</strong> ಕೊಡಗಿನಲ್ಲಿ ಈ ವರ್ಷ ಸಮರ್ಪಕವಾಗಿ ಮುಂಗಾರು ಪೂರ್ವ ಮಳೆಯಾಗದೇ ಕಾಫಿ ಬೆಳೆಗಾರರು ಆತಂಕದಲ್ಲಿದ್ದಾರೆ. ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಿದ್ದು, ಕೊಳವೆಬಾವಿ, ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನೀರಿನ ಸೌಕರ್ಯ ಹೊಂದಿರುವ ಬೆಳೆಗಾರರೂ ಚಿಂತಿತರಾಗಿದ್ದಾರೆ.</p>.<p>ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಮಳೆಯಾಗಬೇಕಿತ್ತು. ಕೆಲ ದಿನಗಳ ಹಿಂದೆ ಸುಂಟಿಕೊಪ್ಪ, ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಮಾತ್ರವೇ ಆಲಿಕಲ್ಲು ಮಳೆ ಸುರಿದಿತ್ತು. ಇನ್ನುಳಿದ ಬಹಳಷ್ಟು ಭಾಗಗಳಲ್ಲಿ ಮಳೆ ಬಿದ್ದಿಲ್ಲ.</p>.<p>ಕೆರೆ, ಕೊಳವೆಬಾವಿ ಸೇರಿದಂತೆ ಉತ್ತಮ ನೀರಿನ ಸೌಕರ್ಯ ಹೊಂದಿರುವ ಬೆಳೆಗಾರರು ಪರ್ಯಾಯವಾಗಿ ತುಂತುರು ಹನಿ ನೀರಾವರಿ ಪದ್ಧತಿಯಲ್ಲಿ (ಸ್ಪ್ರಿಂಕ್ಲರ್) ಕಾಫಿಗೆ ನೀರು ಸಿಂಪಡಿಸಿದ್ದಾರೆ. ಎಲ್ಲೆಲ್ಲಿ ಈ ಬಗೆಯಲ್ಲಿ ನೀರು ಸಿಂಪಡಿಸಲಾಗಿದೆಯೋ ಅಲ್ಲೆಲ್ಲ ಈಗ ಕಾಫಿ ಹೂ ಸಮೃದ್ಧವಾಗಿ ಅರಳಿದೆ. ಆದರೆ, ಇನ್ನುಳಿದ ಬೆಳೆಗಾರರು ಹಾಗೂ ಅರೇಬಿಕಾ ಕಾಫಿ ಬೆಳೆಯುವ ಹೆಚ್ಚಿನ ಮಂದಿ ಮಳೆಯ ನಿರೀಕ್ಷೆಯಲ್ಲಿದ್ದಾರೆ.</p>.<p>ಸ್ಪ್ರಿಂಕ್ಲರ್ ಮೂಲಕ ನೀರು ಒದಗಿಸಿದವರ ಕಾಫಿ ತೋಟದಲ್ಲಿ ಹೂ ಅರಳಿದ್ದರೂ ಉಷ್ಣಾಂಶ ದಿನೇ ದಿನೇ ಹೆಚ್ಚುತ್ತಿರುವುದರಿಂದ ಹೂ ಕಾಳುಗಟ್ಟುವುದಕ್ಕೂ ತೊಂದರೆಯಾಗಲಿದೆ. ಹಾಗಾಗಿ, ಅವರೂ ಆಕಾಶದತ್ತ ನೋಡು<br />ವಂತಾಗಿದೆ.</p>.<p>ಶ್ರೀಮಂಗಲದ ಕಾಫಿ ಬೆಳೆಗಾರ ಹರೀಶ್ ಮಾದಪ್ಪ ಪ್ರತಿಕ್ರಿಯಿಸಿ, ‘ಕೊಡಗಿನಲ್ಲಿ ಇಷ್ಟು ಬಿಸಿಲು, ಉಷ್ಣಾಂಶ ಇತ್ತೀಚಿನ ವರ್ಷಗಳಲ್ಲಿ ಕಂಡಿರಲಿಲ್ಲ. ಕೆರೆ, ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿವೆ. ನೀರಿನ ಸೌಕರ್ಯ ಹೊಂದಿರುವ ಕಾಫಿ ಬೆಳೆಗಾರರೂ ಕಂಗಾಲಾಗಿದ್ದಾರೆ. ಸದ್ಯ, ಉತ್ತಮ ಮಳೆ ಸುರಿಯಬೇಕಿದೆ’ ಎಂದು ಹೇಳಿದರು.</p>.<p>ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಉಪ ನಿರ್ದೇಶಕ ಚಂದ್ರಶೇಖರ್, ‘ಮಾರ್ಚ್ ತಿಂಗಳಿನಲ್ಲಿ ಈವರೆಗೆ ಮಳೆಯಾಗಬೇಕಿತ್ತು. ಕಾಫಿ ತೋಟಗಳಿಗೆ ಈಗ ಮಳೆಯಾಗದೇ ಹೋದರೆ ಕಾಫಿ ಹೂ ಅರಳುವುದಕ್ಕೆ ಸಮಸ್ಯೆಯಾಗಲಿದೆ. ಬಿಸಿಲಿನ ತಾಪವೂ ಏರುತ್ತಿದ್ದು, ಸದ್ಯ ಮಳೆ ಬೇಕಿದೆ’ ಎಂದು ಹೇಳಿದರು.</p>.<p>ಏ. 5ರವರೆಗೂ ಮಳೆ ನಿರೀಕ್ಷೆ ಇಲ್ಲ: ‘ಈ ತಿಂಗಳಿನಲ್ಲಿ ಮಳೆ ಬೀಳಬೇಕಿತ್ತು. ಆದರೆ, ನಿರೀಕ್ಷೆ ಫಲಿಸಲಿಲ್ಲ. ಏ. 5ರವರೆಗೂ ಮಳೆಯ ಮುನ್ಸೂಚನೆ ಇಲ್ಲ’ ಎಂದು ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ವಿಷಯ ತಜ್ಞ ಹರೀಶ್ ಮಾಹಿತಿ ನೀಡಿದರು.</p>.<p>ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಕಳೆದ ವರ್ಷ ಮಾರ್ಚ್ 27ರಂದು 2,848.71 ಅಡಿಗಳಷ್ಟು ನೀರಿತ್ತು. ಈ ಬಾರಿ 2,822.80 ಅಡಿಗಳಷ್ಟು ನೀರಿದೆ. ನದಿ ಮೂಲಗಳೂ ಬತ್ತುತ್ತಿವೆ.</p>.<p>‘ಮಾರ್ಚ್ ತಿಂಗಳಿನಲ್ಲಿ ಶೇ 88ರಷ್ಟು ಮಳೆ ಕೊರತೆಯಾಗಿದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕೊಡಗಿನಲ್ಲಿ ಈ ವರ್ಷ ಸಮರ್ಪಕವಾಗಿ ಮುಂಗಾರು ಪೂರ್ವ ಮಳೆಯಾಗದೇ ಕಾಫಿ ಬೆಳೆಗಾರರು ಆತಂಕದಲ್ಲಿದ್ದಾರೆ. ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಿದ್ದು, ಕೊಳವೆಬಾವಿ, ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನೀರಿನ ಸೌಕರ್ಯ ಹೊಂದಿರುವ ಬೆಳೆಗಾರರೂ ಚಿಂತಿತರಾಗಿದ್ದಾರೆ.</p>.<p>ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಮಳೆಯಾಗಬೇಕಿತ್ತು. ಕೆಲ ದಿನಗಳ ಹಿಂದೆ ಸುಂಟಿಕೊಪ್ಪ, ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಮಾತ್ರವೇ ಆಲಿಕಲ್ಲು ಮಳೆ ಸುರಿದಿತ್ತು. ಇನ್ನುಳಿದ ಬಹಳಷ್ಟು ಭಾಗಗಳಲ್ಲಿ ಮಳೆ ಬಿದ್ದಿಲ್ಲ.</p>.<p>ಕೆರೆ, ಕೊಳವೆಬಾವಿ ಸೇರಿದಂತೆ ಉತ್ತಮ ನೀರಿನ ಸೌಕರ್ಯ ಹೊಂದಿರುವ ಬೆಳೆಗಾರರು ಪರ್ಯಾಯವಾಗಿ ತುಂತುರು ಹನಿ ನೀರಾವರಿ ಪದ್ಧತಿಯಲ್ಲಿ (ಸ್ಪ್ರಿಂಕ್ಲರ್) ಕಾಫಿಗೆ ನೀರು ಸಿಂಪಡಿಸಿದ್ದಾರೆ. ಎಲ್ಲೆಲ್ಲಿ ಈ ಬಗೆಯಲ್ಲಿ ನೀರು ಸಿಂಪಡಿಸಲಾಗಿದೆಯೋ ಅಲ್ಲೆಲ್ಲ ಈಗ ಕಾಫಿ ಹೂ ಸಮೃದ್ಧವಾಗಿ ಅರಳಿದೆ. ಆದರೆ, ಇನ್ನುಳಿದ ಬೆಳೆಗಾರರು ಹಾಗೂ ಅರೇಬಿಕಾ ಕಾಫಿ ಬೆಳೆಯುವ ಹೆಚ್ಚಿನ ಮಂದಿ ಮಳೆಯ ನಿರೀಕ್ಷೆಯಲ್ಲಿದ್ದಾರೆ.</p>.<p>ಸ್ಪ್ರಿಂಕ್ಲರ್ ಮೂಲಕ ನೀರು ಒದಗಿಸಿದವರ ಕಾಫಿ ತೋಟದಲ್ಲಿ ಹೂ ಅರಳಿದ್ದರೂ ಉಷ್ಣಾಂಶ ದಿನೇ ದಿನೇ ಹೆಚ್ಚುತ್ತಿರುವುದರಿಂದ ಹೂ ಕಾಳುಗಟ್ಟುವುದಕ್ಕೂ ತೊಂದರೆಯಾಗಲಿದೆ. ಹಾಗಾಗಿ, ಅವರೂ ಆಕಾಶದತ್ತ ನೋಡು<br />ವಂತಾಗಿದೆ.</p>.<p>ಶ್ರೀಮಂಗಲದ ಕಾಫಿ ಬೆಳೆಗಾರ ಹರೀಶ್ ಮಾದಪ್ಪ ಪ್ರತಿಕ್ರಿಯಿಸಿ, ‘ಕೊಡಗಿನಲ್ಲಿ ಇಷ್ಟು ಬಿಸಿಲು, ಉಷ್ಣಾಂಶ ಇತ್ತೀಚಿನ ವರ್ಷಗಳಲ್ಲಿ ಕಂಡಿರಲಿಲ್ಲ. ಕೆರೆ, ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿವೆ. ನೀರಿನ ಸೌಕರ್ಯ ಹೊಂದಿರುವ ಕಾಫಿ ಬೆಳೆಗಾರರೂ ಕಂಗಾಲಾಗಿದ್ದಾರೆ. ಸದ್ಯ, ಉತ್ತಮ ಮಳೆ ಸುರಿಯಬೇಕಿದೆ’ ಎಂದು ಹೇಳಿದರು.</p>.<p>ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಉಪ ನಿರ್ದೇಶಕ ಚಂದ್ರಶೇಖರ್, ‘ಮಾರ್ಚ್ ತಿಂಗಳಿನಲ್ಲಿ ಈವರೆಗೆ ಮಳೆಯಾಗಬೇಕಿತ್ತು. ಕಾಫಿ ತೋಟಗಳಿಗೆ ಈಗ ಮಳೆಯಾಗದೇ ಹೋದರೆ ಕಾಫಿ ಹೂ ಅರಳುವುದಕ್ಕೆ ಸಮಸ್ಯೆಯಾಗಲಿದೆ. ಬಿಸಿಲಿನ ತಾಪವೂ ಏರುತ್ತಿದ್ದು, ಸದ್ಯ ಮಳೆ ಬೇಕಿದೆ’ ಎಂದು ಹೇಳಿದರು.</p>.<p>ಏ. 5ರವರೆಗೂ ಮಳೆ ನಿರೀಕ್ಷೆ ಇಲ್ಲ: ‘ಈ ತಿಂಗಳಿನಲ್ಲಿ ಮಳೆ ಬೀಳಬೇಕಿತ್ತು. ಆದರೆ, ನಿರೀಕ್ಷೆ ಫಲಿಸಲಿಲ್ಲ. ಏ. 5ರವರೆಗೂ ಮಳೆಯ ಮುನ್ಸೂಚನೆ ಇಲ್ಲ’ ಎಂದು ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ವಿಷಯ ತಜ್ಞ ಹರೀಶ್ ಮಾಹಿತಿ ನೀಡಿದರು.</p>.<p>ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಕಳೆದ ವರ್ಷ ಮಾರ್ಚ್ 27ರಂದು 2,848.71 ಅಡಿಗಳಷ್ಟು ನೀರಿತ್ತು. ಈ ಬಾರಿ 2,822.80 ಅಡಿಗಳಷ್ಟು ನೀರಿದೆ. ನದಿ ಮೂಲಗಳೂ ಬತ್ತುತ್ತಿವೆ.</p>.<p>‘ಮಾರ್ಚ್ ತಿಂಗಳಿನಲ್ಲಿ ಶೇ 88ರಷ್ಟು ಮಳೆ ಕೊರತೆಯಾಗಿದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>