ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಒಂದುಗೂಡಿಸುವರು, ವಿಭಜಿಸುವವರ ನಡುವೆ ಮುಂದಿನ ಚುನಾವಣೆ: ಶ್ರೀನಿವಾಸಪೂಜಾರಿ

Published 2 ಫೆಬ್ರುವರಿ 2024, 8:00 IST
Last Updated 2 ಫೆಬ್ರುವರಿ 2024, 8:00 IST
ಅಕ್ಷರ ಗಾತ್ರ

ಮಡಿಕೇರಿ: ಮುಂದಿನ ಚುನಾವಣೆಯು ದೇಶವನ್ನು ಒಂದುಗೂಡಿಸುವವರಿಗೂ, ದೇಶವನ್ನು ವಿಭಜಿಸುವವರಿಗೂ ನಡುವೆ ನಡೆಯುತ್ತದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸಪೂಜಾರಿ ಹೇಳಿದರು.

ಇಲ್ಲಿ ಶುಕ್ರವಾರ ನಡೆದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಹಾಗೂ ಜಿಲ್ಲಾ ವಿಶೇಷ ಕಾರ್ಯಕಾರಿಣಿಯಲ್ಲಿ ಮಾತನಾಡಿದರು.

ಹಿಂದೆ ಕೇವಲ ಉಗ್ರಗಾಮಿಗಳು ಮಾತ್ರವೇ ದೇಶ ತುಂಡು ಮಾಡುವ ಮಾತುಗಳನ್ನಾಡುತ್ತಿದ್ದರು. ಆದರೆ ಈಗ ಸಂಸದ ಡಿ.ಕೆ.ಸುರೇಶ್ ಅವರು ದೇಶ ತುಂಡು ಮಾಡುವ ಮಾತನಾಡಿದ್ದಾರೆ. ಆನಂತರ. ಸಿದ್ದರಾಮಯ್ಯ ಅವರಿಗೆ ಬುದ್ದಿ ಹೇಳುತ್ತಾರೆ ಎಂದು ಭಾವಿಸಿದ್ದೆ. ಅವರು ಆ ಕಾರ್ಯ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆರಗೋಡಿನಲ್ಲಿ ಸರ್ಕಾರ ಹನುಮ ಧ್ವಜವನ್ನು ತೆರವು ಮಾಡಿತು. ಮುಂದಿನ ಚುನಾವಣೆ ಹನುಮ ಭಕ್ತರಿಗೂ ಟಿಪ್ಪು ಭಕ್ತರಿಗೂ ನಡುವೆ ನಡೆಯುತ್ತದೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT