ಗ್ರಾಮದ ಟೀಕ್ ವುಡ್ ಎಸ್ಟೇಟ್, ಕರಡಿಕಾಡು ಎಸ್ಟೇಟ್, ಕೆಸವಿನಹಳ್ಳ ಸೇರಿ ಸುತ್ತಮುತ್ತಲ ವ್ಯಾಪ್ತಿ ಕಾಫಿ ತೋಟದಲ್ಲಿ ಕಾಡಾನೆಗಳು ನಿರಂತರ ಬೀಡುಬಿಟ್ಟಿದ್ದು, ಫಸಲು ನಾಶ ಮಾಡುತ್ತಿವೆ. ಮತ್ತೊಂದೆಡೆ ಕಾರ್ಮಿಕರು ಭಯದಿಂದ ಕೆಲಸ ನಿರ್ವಹಿಸುವ ಸ್ಥಿತಿ ಎದುರಾಗಿದೆ. ಕಾಫಿ, ಅಡಿಕೆ ಫಸಲು ಪ್ರತಿ ದಿನವೂ ನಾಶವಾಗುತ್ತಿದ್ದು, ಕಾಡಾನೆ ಹಾವಳಿಯಿಂದ ರೈತರು ಹಾಗೂ ಬೆಳೆಗಾರರು ಹೈರಾಣಾಗಿದ್ದಾರೆ.