<p>ಸಿದ್ದಾಪುರ: ಕರಡಿಗೋಡು ಗ್ರಾಮದಲ್ಲಿ ಕಾಡಾನೆ ಉಪಟಳ ಮಿತಿಮೀರಿದ್ದು, ಇವುಗಳನ್ನು ಕಾಡಿಗೆ ಅಟ್ಟಬೇಕೆಂದು ಬೆಳೆಗಾರರು ಒತ್ತಾಯಿಸಿದರು.</p>.<p> ಗ್ರಾಮದ ಟೀಕ್ ವುಡ್ ಎಸ್ಟೇಟ್, ಕರಡಿಕಾಡು ಎಸ್ಟೇಟ್, ಕೆಸವಿನಹಳ್ಳ ಸೇರಿ ಸುತ್ತಮುತ್ತಲ ವ್ಯಾಪ್ತಿ ಕಾಫಿ ತೋಟದಲ್ಲಿ ಕಾಡಾನೆಗಳು ನಿರಂತರ ಬೀಡುಬಿಟ್ಟಿದ್ದು, ಫಸಲು ನಾಶ ಮಾಡುತ್ತಿವೆ. ಮತ್ತೊಂದೆಡೆ ಕಾರ್ಮಿಕರು ಭಯದಿಂದ ಕೆಲಸ ನಿರ್ವಹಿಸುವ ಸ್ಥಿತಿ ಎದುರಾಗಿದೆ. ಕಾಫಿ, ಅಡಿಕೆ ಫಸಲು ಪ್ರತಿ ದಿನವೂ ನಾಶವಾಗುತ್ತಿದ್ದು, ಕಾಡಾನೆ ಹಾವಳಿಯಿಂದ ರೈತರು ಹಾಗೂ ಬೆಳೆಗಾರರು ಹೈರಾಣಾಗಿದ್ದಾರೆ.</p>.<p>ಭಾನುವಾರ ರಾತ್ರಿ ಕೆಸವಿನಹಳ್ಳ ಸಮೀಪದ ಟೀಕ್ ವುಡ್ ತೋಟದ ಮನೆಯ ಸಮೀಪಕ್ಕೆ ರೇಡಿಯೋ ಕಾಲರ್ ಅಳವಡಿಸಿರುವ ಸಲಗವೊಂದು ಆಗಮಿಸಿದ್ದು, ಹಲಸು ಸೇರಿದಂತೆ ಹಣ್ಣುಗಳನ್ನು ತಿಂದಿದ್ದು, ರಾತ್ರಿ ವೇಳೆ ಮನೆಯ ಸಮೀಪದಲ್ಲೇ ಬೀಡುಬಿಟ್ಟಿದೆ. ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಲೈನ್ ಮನೆಗಳ ಸಮೀಪದಲ್ಲೇ ಇದ್ದು, ತೋಟದ ಕಾರ್ಮಿಕರು ಕೂಡ ಭಯಭೀತರಾಗಿದ್ದಾರೆ. ಇವುಗಳನ್ನು ಕಾಡಿಗೆ ಅಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿದ್ದಾಪುರ: ಕರಡಿಗೋಡು ಗ್ರಾಮದಲ್ಲಿ ಕಾಡಾನೆ ಉಪಟಳ ಮಿತಿಮೀರಿದ್ದು, ಇವುಗಳನ್ನು ಕಾಡಿಗೆ ಅಟ್ಟಬೇಕೆಂದು ಬೆಳೆಗಾರರು ಒತ್ತಾಯಿಸಿದರು.</p>.<p> ಗ್ರಾಮದ ಟೀಕ್ ವುಡ್ ಎಸ್ಟೇಟ್, ಕರಡಿಕಾಡು ಎಸ್ಟೇಟ್, ಕೆಸವಿನಹಳ್ಳ ಸೇರಿ ಸುತ್ತಮುತ್ತಲ ವ್ಯಾಪ್ತಿ ಕಾಫಿ ತೋಟದಲ್ಲಿ ಕಾಡಾನೆಗಳು ನಿರಂತರ ಬೀಡುಬಿಟ್ಟಿದ್ದು, ಫಸಲು ನಾಶ ಮಾಡುತ್ತಿವೆ. ಮತ್ತೊಂದೆಡೆ ಕಾರ್ಮಿಕರು ಭಯದಿಂದ ಕೆಲಸ ನಿರ್ವಹಿಸುವ ಸ್ಥಿತಿ ಎದುರಾಗಿದೆ. ಕಾಫಿ, ಅಡಿಕೆ ಫಸಲು ಪ್ರತಿ ದಿನವೂ ನಾಶವಾಗುತ್ತಿದ್ದು, ಕಾಡಾನೆ ಹಾವಳಿಯಿಂದ ರೈತರು ಹಾಗೂ ಬೆಳೆಗಾರರು ಹೈರಾಣಾಗಿದ್ದಾರೆ.</p>.<p>ಭಾನುವಾರ ರಾತ್ರಿ ಕೆಸವಿನಹಳ್ಳ ಸಮೀಪದ ಟೀಕ್ ವುಡ್ ತೋಟದ ಮನೆಯ ಸಮೀಪಕ್ಕೆ ರೇಡಿಯೋ ಕಾಲರ್ ಅಳವಡಿಸಿರುವ ಸಲಗವೊಂದು ಆಗಮಿಸಿದ್ದು, ಹಲಸು ಸೇರಿದಂತೆ ಹಣ್ಣುಗಳನ್ನು ತಿಂದಿದ್ದು, ರಾತ್ರಿ ವೇಳೆ ಮನೆಯ ಸಮೀಪದಲ್ಲೇ ಬೀಡುಬಿಟ್ಟಿದೆ. ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಲೈನ್ ಮನೆಗಳ ಸಮೀಪದಲ್ಲೇ ಇದ್ದು, ತೋಟದ ಕಾರ್ಮಿಕರು ಕೂಡ ಭಯಭೀತರಾಗಿದ್ದಾರೆ. ಇವುಗಳನ್ನು ಕಾಡಿಗೆ ಅಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>