ಬೈಕನ್ನು ರಸ್ತೆಯಲ್ಲೇ ಬಿಟ್ಟು ಸಿಬ್ಬಂದಿ ಓಡಿ ತಪ್ಪಿಸಿಕೊಂಡಿದ್ದಾರೆ. ಸಲಗ ಬೈಕ್ ಹಾಗೂ ಎಸ್ಟೇಟ್ ಗೇಟ್ ಮುರಿದು ಮೀಸಲು ಅರಣ್ಯ ಪ್ರವೇಶಿಸಿದೆ. ತಾಲ್ಲೂಕಿನ ಅರಣ್ಯದಂಚಿನ ಯಡವನಾಡು, ಬಾಣವಾರ, ಮಾಲಂಬಿ, ಕೊಡ್ಲಿಪೇಟೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಬೀಡುಬಿಟ್ಟಿವೆ. ವಾಹನ ಸವಾರರು ಸಂಚರಿಸಲು ಭಯಪಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.