<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯ ಬಹುತೇಕ ತೋಟಗಳಲ್ಲಿ ಈಗ ಹಲಸಿನ ಘಮಲು ಹೊರಸೂಸುತ್ತಿದೆ. ಇದರ ಸುವಾಸನೆಗೆ ಮಾರು ಹೋಗಿರುವ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೋಟಗಳತ್ತ ಬರುತ್ತಿವೆ.</p>.<p>ಹಲಸಿನ ಹಣ್ಣಿನ ಘಮಲಿನ ಗುಂಗನ್ನೇ ಹಿಡಿಯುವ ಕಾಡಾನೆಗಳು ಹಲಸನ್ನು ಅರಸಿ ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಇವುಗಳ ಪ್ರತಿ ಹೆಜ್ಜೆಗೂ ತೋಟದಲ್ಲಿರುವ ಫಲಸು ನಾಶವಾಗುವ ಆತಂಕ ರೈತರದ್ದಾಗಿದೆ.</p>.<p>ಈ ಬಾರಿ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಲಸಿನ ಹಣ್ಣುಗಳು ಮರಗಳಲ್ಲಿ ಬಂದಿವೆ. ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದ ಹಾಗೂ ಇತರೆ ಕಾರಣಗಳಿಂದ ಹಲಸಿನ ಹಣ್ಣುಗಳು ಮರಗಳಲ್ಲಿ ಹಿಗ್ಗುತ್ತಲೇ ಇವೆ. ಇದು ಆನೆಗಳನ್ನು ಸೆಳೆಯಲು ಬಹು ಮುಖ್ಯವಾದ ಕಾರಣ ಎನಿಸಿವೆ.</p>.<p>ಕೆಲವು ತೋಟಗಳಲ್ಲಿ ಬೆಳೆಗಾರರು ಹಲಸಿನ ಕಾಯಿಗಳನ್ನೇ ಕಿತ್ತೆಸೆತ್ತಿದ್ದಾರೆ. ಈ ಮೂಲಕ ಕಾಡಾನೆಗಳ ತಮ್ಮ ತೋಟಗಳತ್ತ ಬಾರದಿರಲಿ ಎಂಬುದು ಅವರು ಆಶಯ. ಆದರೆ, ಅಕ್ಕಪಕ್ಕ ಅಥವಾ ಮುಂದಿನ ತೋಟಗಳಲ್ಲಿರುವ ಹಸಲಿನ ಘಮಲು ಕಾಡಾನೆಗಳನ್ನು ಸೆಳೆಯುತ್ತಿವೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ ಎಂದು ಅರಣ್ಯ ಅಧಿಕಾರಿಗಳೇ ಹೇಳುತ್ತಾರೆ.</p>.<p>ಕಾಡಿನೊಳಗೆ ತೇಗ ಮತ್ತಿತ್ತರೇ ಹಣ್ಣು ಬಿಡದ ಮರಗಳನ್ನು ಹಾಕುವುದಕ್ಕಿಂತ ಹಲಸಿನ ಮರಗಳನ್ನು ಹಾಕಿದರೆ ಕಾಡಾನೆಗಳು ತೋಟಗಳತ್ತ ಬರುವುದು ನಿಲ್ಲುತ್ತದೆ. ಇಲ್ಲವೇ ಕಡಿಮೆಯಾಗುತ್ತದೆ ಎಂಬುದು ರೈತರ ಅಭಿಪ್ರಾಯ. </p>.<p>ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡಾನೆಗಳ ನಿಯಂತ್ರಿಸಲು ರೈತರು, ಬೆಳೆಗಾರರು, ಕಾರ್ಮಿಕರು ಪ್ರಯತ್ನ ಪಡದೇ ನೇರವಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡುತ್ತಾರೆ. </p>.<p>ಕಳೆದರಡು ವರ್ಷಗಳ ಹಿಂದೆ ಶನಿವಾರಸಂತೆ ಭಾಗದಲ್ಲಿ ಕೆಲವು ರೈತರು ಕಾಡಾನೆಗಳ ಕಾಟಕ್ಕೆ ರೋಸಿ ಹೋಗಿ ಕಾಫಿ ತೋಟಗಳಲ್ಲಿರುವ ಹಲಸಿನ ಮರಗಳಲ್ಲಿದ್ದ ಹಲಸಿನ ಹಣ್ಣುಗಳನ್ನು ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಹಾಗೂ ತಮಿಳುನಾಡಿನ ಮಾರಾಟಗಾರರಿಗೆ ಉಚಿತವಾಗಿಯೂ ಕೊಟ್ಟಿದ್ದರು. ಮತ್ತೆ ಕೆಲವರು ನಾಶಪಡಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯ ಬಹುತೇಕ ತೋಟಗಳಲ್ಲಿ ಈಗ ಹಲಸಿನ ಘಮಲು ಹೊರಸೂಸುತ್ತಿದೆ. ಇದರ ಸುವಾಸನೆಗೆ ಮಾರು ಹೋಗಿರುವ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೋಟಗಳತ್ತ ಬರುತ್ತಿವೆ.</p>.<p>ಹಲಸಿನ ಹಣ್ಣಿನ ಘಮಲಿನ ಗುಂಗನ್ನೇ ಹಿಡಿಯುವ ಕಾಡಾನೆಗಳು ಹಲಸನ್ನು ಅರಸಿ ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಇವುಗಳ ಪ್ರತಿ ಹೆಜ್ಜೆಗೂ ತೋಟದಲ್ಲಿರುವ ಫಲಸು ನಾಶವಾಗುವ ಆತಂಕ ರೈತರದ್ದಾಗಿದೆ.</p>.<p>ಈ ಬಾರಿ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಲಸಿನ ಹಣ್ಣುಗಳು ಮರಗಳಲ್ಲಿ ಬಂದಿವೆ. ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದ ಹಾಗೂ ಇತರೆ ಕಾರಣಗಳಿಂದ ಹಲಸಿನ ಹಣ್ಣುಗಳು ಮರಗಳಲ್ಲಿ ಹಿಗ್ಗುತ್ತಲೇ ಇವೆ. ಇದು ಆನೆಗಳನ್ನು ಸೆಳೆಯಲು ಬಹು ಮುಖ್ಯವಾದ ಕಾರಣ ಎನಿಸಿವೆ.</p>.<p>ಕೆಲವು ತೋಟಗಳಲ್ಲಿ ಬೆಳೆಗಾರರು ಹಲಸಿನ ಕಾಯಿಗಳನ್ನೇ ಕಿತ್ತೆಸೆತ್ತಿದ್ದಾರೆ. ಈ ಮೂಲಕ ಕಾಡಾನೆಗಳ ತಮ್ಮ ತೋಟಗಳತ್ತ ಬಾರದಿರಲಿ ಎಂಬುದು ಅವರು ಆಶಯ. ಆದರೆ, ಅಕ್ಕಪಕ್ಕ ಅಥವಾ ಮುಂದಿನ ತೋಟಗಳಲ್ಲಿರುವ ಹಸಲಿನ ಘಮಲು ಕಾಡಾನೆಗಳನ್ನು ಸೆಳೆಯುತ್ತಿವೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ ಎಂದು ಅರಣ್ಯ ಅಧಿಕಾರಿಗಳೇ ಹೇಳುತ್ತಾರೆ.</p>.<p>ಕಾಡಿನೊಳಗೆ ತೇಗ ಮತ್ತಿತ್ತರೇ ಹಣ್ಣು ಬಿಡದ ಮರಗಳನ್ನು ಹಾಕುವುದಕ್ಕಿಂತ ಹಲಸಿನ ಮರಗಳನ್ನು ಹಾಕಿದರೆ ಕಾಡಾನೆಗಳು ತೋಟಗಳತ್ತ ಬರುವುದು ನಿಲ್ಲುತ್ತದೆ. ಇಲ್ಲವೇ ಕಡಿಮೆಯಾಗುತ್ತದೆ ಎಂಬುದು ರೈತರ ಅಭಿಪ್ರಾಯ. </p>.<p>ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡಾನೆಗಳ ನಿಯಂತ್ರಿಸಲು ರೈತರು, ಬೆಳೆಗಾರರು, ಕಾರ್ಮಿಕರು ಪ್ರಯತ್ನ ಪಡದೇ ನೇರವಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡುತ್ತಾರೆ. </p>.<p>ಕಳೆದರಡು ವರ್ಷಗಳ ಹಿಂದೆ ಶನಿವಾರಸಂತೆ ಭಾಗದಲ್ಲಿ ಕೆಲವು ರೈತರು ಕಾಡಾನೆಗಳ ಕಾಟಕ್ಕೆ ರೋಸಿ ಹೋಗಿ ಕಾಫಿ ತೋಟಗಳಲ್ಲಿರುವ ಹಲಸಿನ ಮರಗಳಲ್ಲಿದ್ದ ಹಲಸಿನ ಹಣ್ಣುಗಳನ್ನು ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಹಾಗೂ ತಮಿಳುನಾಡಿನ ಮಾರಾಟಗಾರರಿಗೆ ಉಚಿತವಾಗಿಯೂ ಕೊಟ್ಟಿದ್ದರು. ಮತ್ತೆ ಕೆಲವರು ನಾಶಪಡಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>