<p><strong>ಮಡಿಕೇರಿ</strong>: ರಾಜ್ಯದ 96 ಹೋಬಳಿಗಳಲ್ಲಿ ಹೊಸದಾಗಿ ಕಂದಾಯ ಇಲಾಖೆಯ ನಾಡಕಚೇರಿಗಳನ್ನು ಆರಂಭಿಸಲು ಇತ್ತೀಚೆಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಇದರಲ್ಲಿ ಏಳು ಹೋಬಳಿಗಳು ಕೊಡಗು ಜಿಲ್ಲೆಗೆ ಸೇರಿದ್ದಾಗಿವೆ. <br /> <br /> ಜಿಲ್ಲೆಯಲ್ಲಿ ಈಗಾಗಲೇ ಆರು ಹೋಬಳಿಗಳಲ್ಲಿ ನಾಡಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಏಳು ಹೊಸ ನಾಡಕಚೇರಿಗಳು ಆರಂಭವಾಗುವುದರೊಂದಿಗೆ ಜಿಲ್ಲೆಯ ಎಲ್ಲ ಹೋಬಳಿ ಘಟಕಗಳಲ್ಲಿ (ತಾಲ್ಲೂಕು ಕೇಂದ್ರಗಳನ್ನು ಹೊರತುಪಡಿಸಿ) ನಾಡಕಚೇರಿಗಳು ತೆರೆದಂತಾಗಲಿದೆ. <br /> <br /> ಮಡಿಕೇರಿ ತಾಲ್ಲೂಕಿನ ಸಂಪಾಜೆ, ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ, ಕೊಡ್ಲಿಪೇಟೆ ಹಾಗೂ ಶಾಂತಳ್ಳಿ, ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ, ಬಾಳೆಲೆ ಹಾಗೂ ಅಮ್ಮತ್ತಿಯಲ್ಲಿ ಹೊಸ ನಾಡಕಚೇರಿಗಳು ಆರಂಭಗೊಳ್ಳಲಿವೆ.<br /> <br /> ಪ್ರಸ್ತುತ ಜಿಲ್ಲೆಯ ಆರು ಹೋಬಳಿಗಳಲ್ಲಿ ನಾಡಕಚೇರಿಗಳಿವೆ. ನಾಪೋಕ್ಲು, ಭಾಗಮಂಡಲ, ಶ್ರೀಮಂಗಲ, ಕುಶಾಲನಗರ, ಶನಿವಾರಸಂತೆ ಹಾಗೂ ಪೊನ್ನಂಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. <br /> <br /> ಕಂದಾಯ ಇಲಾಖೆ ನೀಡುವ ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಆರ್ಟಿಸಿ ಸೇರಿದಂತೆ ಇತರೆ ಸುಮಾರು 44 ವಿವಿಧ ಸೇವೆಗಳನ್ನು ನಾಡಕಚೇರಿಯಲ್ಲಿ ನೀಡಲಾಗುತ್ತದೆ.<br /> <br /> ಜಿಲ್ಲೆಯಲ್ಲಿ ಒಟ್ಟು 16 ಹೋಬಳಿಗಳಿದ್ದು, ಇವುಗಳಲ್ಲಿ ಮೂರು ತಾಲ್ಲೂಕು ಕೇಂದ್ರಗಳ ಹೋಬಳಿಗಳನ್ನು ಹೊರತುಪಡಿಸಿದರೆ, ಇನ್ನುಳಿಯುವ 13 ಹೋಬಳಿಗಳಲ್ಲಿಯೂ ನಾಡಕಚೇರಿ ತೆರೆದಂತಾಗುವುದು. <br /> <br /> ಅಧಿಕಾರ ವಿಕೇಂದ್ರೀಕರಣವಾಗಬೇಕು ಹಾಗೂ ಹಳ್ಳಿಗಾಡಿನ ಜನರಿಗೆ ತಾವಿರುವ ಸ್ಥಳದ ಆಸುಪಾಸಿನಲ್ಲಿಯೇ ಸರ್ಕಾರ ನೀಡುವ ಸೇವೆಗಳು ಲಭ್ಯವಾಗಬೇಕು ಎನ್ನುವ ಉದ್ದೇಶದೊಂದಿಗೆ ನಾಡಕಚೇರಿಗಳನ್ನು ತೆರೆಯಲಾಗುತ್ತಿದೆ. <br /> <br /> ಗ್ರಾಮಸ್ಥರಿಗೆ ತಾವಿರುವ ಸ್ಥಳದಲ್ಲಿ ಅಥವಾ ಅತ್ಯಂತ ಹತ್ತಿರದಲ್ಲಿಯೇ ತಮಗೆ ಬೇಕಾದ ಸರ್ಕಾರಿ ಸೇವೆಗಳು ದೊರೆತರೆ ದೂರದ ತಾಲ್ಲೂಕು ಕೇಂದ್ರಗಳಿಗೆ ತೆರಳಬೇಕಾದ ಕಷ್ಟ ತಪ್ಪಲಿದೆ. ಇದರಿಂದ ಸಮಯ ಹಾಗೂ ಓಡಾಟದ ವೆಚ್ಚ ಗ್ರಾಮಸ್ಥರಿಗೆ ಉಳಿತಾಯವಾಗಲಿದೆ. <br /> <br /> <strong>ಸ್ಥಳೀಯರ ನೇಮಕ</strong><br /> ಹೊಸದಾಗಿ ಸೃಷ್ಟಿಯಾಗುವ ನಾಡಕಚೇರಿಗಳಲ್ಲಿ ಅವಶ್ಯಕತೆ ಇರುವ ಹುದ್ದೆಗಳನ್ನು ನಿರ್ವಹಿಸಲು ಬೇಕಾಗುವ ಜನರನ್ನು ಸ್ಥಳೀಯವಾಗಿಯೇ ನೇಮಕ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. <br /> <br /> ಮುಖ್ಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರುವ ಯುವಕ-ಯುವತಿಯರಿಗೆ ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. <br /> <br /> ಇದರೊಂದಿಗೆ ಪ್ರತಿಯೊಂದು ನಾಡಕಚೇರಿಗೆ ಶಿರಸ್ತೇದಾರ್/ ಉಪತಹಶೀಲ್ದಾರ್ ಹುದ್ದೆಗಳನ್ನು ಸಹ ಸೃಷ್ಟಿಸಲಾಗಿದ್ದು, ಇದನ್ನು ಭರ್ತಿ ಮಾಡಲು ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ರಾಜ್ಯದ 96 ಹೋಬಳಿಗಳಲ್ಲಿ ಹೊಸದಾಗಿ ಕಂದಾಯ ಇಲಾಖೆಯ ನಾಡಕಚೇರಿಗಳನ್ನು ಆರಂಭಿಸಲು ಇತ್ತೀಚೆಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಇದರಲ್ಲಿ ಏಳು ಹೋಬಳಿಗಳು ಕೊಡಗು ಜಿಲ್ಲೆಗೆ ಸೇರಿದ್ದಾಗಿವೆ. <br /> <br /> ಜಿಲ್ಲೆಯಲ್ಲಿ ಈಗಾಗಲೇ ಆರು ಹೋಬಳಿಗಳಲ್ಲಿ ನಾಡಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಏಳು ಹೊಸ ನಾಡಕಚೇರಿಗಳು ಆರಂಭವಾಗುವುದರೊಂದಿಗೆ ಜಿಲ್ಲೆಯ ಎಲ್ಲ ಹೋಬಳಿ ಘಟಕಗಳಲ್ಲಿ (ತಾಲ್ಲೂಕು ಕೇಂದ್ರಗಳನ್ನು ಹೊರತುಪಡಿಸಿ) ನಾಡಕಚೇರಿಗಳು ತೆರೆದಂತಾಗಲಿದೆ. <br /> <br /> ಮಡಿಕೇರಿ ತಾಲ್ಲೂಕಿನ ಸಂಪಾಜೆ, ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ, ಕೊಡ್ಲಿಪೇಟೆ ಹಾಗೂ ಶಾಂತಳ್ಳಿ, ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ, ಬಾಳೆಲೆ ಹಾಗೂ ಅಮ್ಮತ್ತಿಯಲ್ಲಿ ಹೊಸ ನಾಡಕಚೇರಿಗಳು ಆರಂಭಗೊಳ್ಳಲಿವೆ.<br /> <br /> ಪ್ರಸ್ತುತ ಜಿಲ್ಲೆಯ ಆರು ಹೋಬಳಿಗಳಲ್ಲಿ ನಾಡಕಚೇರಿಗಳಿವೆ. ನಾಪೋಕ್ಲು, ಭಾಗಮಂಡಲ, ಶ್ರೀಮಂಗಲ, ಕುಶಾಲನಗರ, ಶನಿವಾರಸಂತೆ ಹಾಗೂ ಪೊನ್ನಂಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. <br /> <br /> ಕಂದಾಯ ಇಲಾಖೆ ನೀಡುವ ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಆರ್ಟಿಸಿ ಸೇರಿದಂತೆ ಇತರೆ ಸುಮಾರು 44 ವಿವಿಧ ಸೇವೆಗಳನ್ನು ನಾಡಕಚೇರಿಯಲ್ಲಿ ನೀಡಲಾಗುತ್ತದೆ.<br /> <br /> ಜಿಲ್ಲೆಯಲ್ಲಿ ಒಟ್ಟು 16 ಹೋಬಳಿಗಳಿದ್ದು, ಇವುಗಳಲ್ಲಿ ಮೂರು ತಾಲ್ಲೂಕು ಕೇಂದ್ರಗಳ ಹೋಬಳಿಗಳನ್ನು ಹೊರತುಪಡಿಸಿದರೆ, ಇನ್ನುಳಿಯುವ 13 ಹೋಬಳಿಗಳಲ್ಲಿಯೂ ನಾಡಕಚೇರಿ ತೆರೆದಂತಾಗುವುದು. <br /> <br /> ಅಧಿಕಾರ ವಿಕೇಂದ್ರೀಕರಣವಾಗಬೇಕು ಹಾಗೂ ಹಳ್ಳಿಗಾಡಿನ ಜನರಿಗೆ ತಾವಿರುವ ಸ್ಥಳದ ಆಸುಪಾಸಿನಲ್ಲಿಯೇ ಸರ್ಕಾರ ನೀಡುವ ಸೇವೆಗಳು ಲಭ್ಯವಾಗಬೇಕು ಎನ್ನುವ ಉದ್ದೇಶದೊಂದಿಗೆ ನಾಡಕಚೇರಿಗಳನ್ನು ತೆರೆಯಲಾಗುತ್ತಿದೆ. <br /> <br /> ಗ್ರಾಮಸ್ಥರಿಗೆ ತಾವಿರುವ ಸ್ಥಳದಲ್ಲಿ ಅಥವಾ ಅತ್ಯಂತ ಹತ್ತಿರದಲ್ಲಿಯೇ ತಮಗೆ ಬೇಕಾದ ಸರ್ಕಾರಿ ಸೇವೆಗಳು ದೊರೆತರೆ ದೂರದ ತಾಲ್ಲೂಕು ಕೇಂದ್ರಗಳಿಗೆ ತೆರಳಬೇಕಾದ ಕಷ್ಟ ತಪ್ಪಲಿದೆ. ಇದರಿಂದ ಸಮಯ ಹಾಗೂ ಓಡಾಟದ ವೆಚ್ಚ ಗ್ರಾಮಸ್ಥರಿಗೆ ಉಳಿತಾಯವಾಗಲಿದೆ. <br /> <br /> <strong>ಸ್ಥಳೀಯರ ನೇಮಕ</strong><br /> ಹೊಸದಾಗಿ ಸೃಷ್ಟಿಯಾಗುವ ನಾಡಕಚೇರಿಗಳಲ್ಲಿ ಅವಶ್ಯಕತೆ ಇರುವ ಹುದ್ದೆಗಳನ್ನು ನಿರ್ವಹಿಸಲು ಬೇಕಾಗುವ ಜನರನ್ನು ಸ್ಥಳೀಯವಾಗಿಯೇ ನೇಮಕ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. <br /> <br /> ಮುಖ್ಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರುವ ಯುವಕ-ಯುವತಿಯರಿಗೆ ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. <br /> <br /> ಇದರೊಂದಿಗೆ ಪ್ರತಿಯೊಂದು ನಾಡಕಚೇರಿಗೆ ಶಿರಸ್ತೇದಾರ್/ ಉಪತಹಶೀಲ್ದಾರ್ ಹುದ್ದೆಗಳನ್ನು ಸಹ ಸೃಷ್ಟಿಸಲಾಗಿದ್ದು, ಇದನ್ನು ಭರ್ತಿ ಮಾಡಲು ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>