ಕೆಲ ವರ್ಷಗಳ ಹಿಂದೆ ಪಟ್ಟಣ ಸಮೀಪದ ಕಾವೇರಿ ನದಿ ತೀರದ ಚೆರಿಯಪರಂಬು ನೆಡುತೋಪು ಬೆಳ್ಳಕ್ಕಿ ಸಂತಾನೋತ್ಪತ್ತಿಗೆ ಪ್ರಸಿದ್ಧಿಯಾಗಿತ್ತು. ಇವುಗಳೊಂದಿಗೆ ಪಟ್ಟಣ ವ್ಯಾಪ್ತಿಯ ಅಡಿಕೆ ಮರಗಳೂ ಅವುಗಳ ವಾಸಸ್ಥಾನ ವಾಗಿದ್ದವು. ಆದರೆ, ಅರಣ್ಯ ಇಲಾಖೆ ನೆಡುತೋಪಿನ ಮರಗಳಿಗೆ ಕೊಡಲಿ ಹಾಕಿದ ಬಳಿಕ, ಪಟ್ಟಣ ವ್ಯಾಪ್ತಿಯ ಮರಗಳು ಬೆಳ್ಳಕ್ಕಿಗಳಿಗೆ ಆಶ್ರಯ ನೀಡಿವೆ.