<p>ಮಡಿಕೇರಿ: ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳು ಆರಂಭವಾಗಿದ್ದು, ಮತದಾರರ ಪಟ್ಟಿ, ಮತಗಟ್ಟೆ ವಿವರ, ಸಿಬ್ಬಂದಿ ನಿಯೋಜನೆ ಮತ್ತಿತರ ಕಾರ್ಯಚಟುವಟಿಕೆಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು ತಿಳಿಸಿದರು. <br /> <br /> ನಗರದ ಕೋಟೆ ಹಳೇ ವಿಧಾನ ಸಭಾಮಗಣದಲ್ಲಿ ಗುರುವಾರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. <br /> <br /> 2014ರ ಜನವರಿ 1ಕ್ಕೆ ಜಿಲ್ಲೆಯಲ್ಲಿ 4,11,581 ಮತದಾರರಿದ್ದು, ಇವರಲ್ಲಿ ಪುರುಷರು 2,04,941, ಮಹಿಳಾ ಮತದಾರರ ಸಂಖ್ಯೆ 2,06,640 ಇದ್ದಾರೆ ಎಂದರು.<br /> <br /> 9452 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಈ ಪೈಕಿ ಪುರುಷರು 4,636, ಮಹಿಳಾ ಮತದಾರರ ಸಂಖ್ಯೆ 4,916 ಆಗಿದೆ. 4.2 ಲಕ್ಷ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ ಎಂದರು.<br /> <br /> ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 526 ಮತಗಟ್ಟೆ ಕೇಂದ್ರಗಳಲ್ಲಿ 526 ಮತಯಂತ್ರಗಳು, ಹೆಚ್ಚುವರಿಯಾಗಿ 78 ಮತಯಂತ್ರಗಳನ್ನು ಮೀಸಲಿಡಲಾಗುತ್ತದೆ. ಮತಗಟ್ಟೆ ಕೇಂದ್ರಗಳಿಗೆ 17 ಪ್ಲೈಯಿಂಗ್ ಸ್ಕ್ವಾಡ್, 15 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.<br /> <br /> ಮತದಾನ ಮಾಡಲು ಮತದಾರರ ಗುರುತಿನ ಚೀಟಿಯ ಜೊತೆಗೆ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಯೋಗದ ವೆಬ್ಸೈಟ್: ceokarnataka.kar.nic.in ಅಥವಾ ಮೊಬೈಲ್ನಲ್ಲಿ karepic<space> ಎಂದು ಟೈಪ್ ಮಾಡಿ ಮತದಾರರ ಗುರುತು ಚೀಟಿ ಸಂಖ್ಯೆ ನಮೂದಿಸಿ 9243355223ಕ್ಕೆ ಎಸ್ಎಂಎಸ್ ಕಳುಹಿಸಿದರೆ ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬ ಮಾಹಿತಿ ಲಭ್ಯವಾಗುತ್ತದೆ ಎಂದರು.<br /> <br /> ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಆರಂಭಿಸಿದ್ದು, 1950ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು.<br /> ಮಾಹಿತಿಗೆ ಜಿಲ್ಲಾ ಚುನಾವಣೆ ಶಾಖೆ: 08272-225932, ನಗರಸಭೆ ಕಚೇರಿ:08272-228323, ತಾಲ್ಲೂಕು ಕಚೇರಿ (ಮಡಿಕೇರಿ):08272-228396, ತಾಲ್ಲೂಕು ಕಚೇರಿ (ವಿರಾಜಪೇಟೆ):08274-257328, ತಾಲ್ಲೂಕು ಕಚೇರಿ (ಸೋಮವಾರಪೇಟೆ): 08276-282045 ಹಾಗೂ ಉಪ ವಿಭಾಗಾಧಿಕಾರಿ-08272-225469 ಸಂಪರ್ಕಿಸಬಹುದು.<br /> <br /> ಸಹಾಯಕ ಚುನಾವಣಾಧಿಕಾರಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿರಾಮ್ ಜಿ.ಶಂಕರ್ (8971275071), ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಲ್ಲಿಕಾರ್ಜುನಯ್ಯ (9739601935) ಕಾರ್ಯನಿರ್ವಹಿಸಲಿದ್ದಾರೆ. <br /> <br /> <strong>ನಿಯಂತ್ರಣ ಕೊಠಡಿ ಪ್ರಕ್ರಿಯೆ ಆರಂಭ</strong><br /> ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ದೂರುಗಳಿಗೆ ದಿನದ 24 ಗಂಟೆಯೂ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ (ನಿಯಂತ್ರಣ ಕೊಠಡಿ) ತೆರೆಯಲಾಗಿದೆ. ದೂರವಾಣಿ ಸಂಖ್ಯೆ 08272-220302 ಕರೆ ಮಾಡಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳು ಆರಂಭವಾಗಿದ್ದು, ಮತದಾರರ ಪಟ್ಟಿ, ಮತಗಟ್ಟೆ ವಿವರ, ಸಿಬ್ಬಂದಿ ನಿಯೋಜನೆ ಮತ್ತಿತರ ಕಾರ್ಯಚಟುವಟಿಕೆಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು ತಿಳಿಸಿದರು. <br /> <br /> ನಗರದ ಕೋಟೆ ಹಳೇ ವಿಧಾನ ಸಭಾಮಗಣದಲ್ಲಿ ಗುರುವಾರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. <br /> <br /> 2014ರ ಜನವರಿ 1ಕ್ಕೆ ಜಿಲ್ಲೆಯಲ್ಲಿ 4,11,581 ಮತದಾರರಿದ್ದು, ಇವರಲ್ಲಿ ಪುರುಷರು 2,04,941, ಮಹಿಳಾ ಮತದಾರರ ಸಂಖ್ಯೆ 2,06,640 ಇದ್ದಾರೆ ಎಂದರು.<br /> <br /> 9452 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಈ ಪೈಕಿ ಪುರುಷರು 4,636, ಮಹಿಳಾ ಮತದಾರರ ಸಂಖ್ಯೆ 4,916 ಆಗಿದೆ. 4.2 ಲಕ್ಷ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ ಎಂದರು.<br /> <br /> ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 526 ಮತಗಟ್ಟೆ ಕೇಂದ್ರಗಳಲ್ಲಿ 526 ಮತಯಂತ್ರಗಳು, ಹೆಚ್ಚುವರಿಯಾಗಿ 78 ಮತಯಂತ್ರಗಳನ್ನು ಮೀಸಲಿಡಲಾಗುತ್ತದೆ. ಮತಗಟ್ಟೆ ಕೇಂದ್ರಗಳಿಗೆ 17 ಪ್ಲೈಯಿಂಗ್ ಸ್ಕ್ವಾಡ್, 15 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.<br /> <br /> ಮತದಾನ ಮಾಡಲು ಮತದಾರರ ಗುರುತಿನ ಚೀಟಿಯ ಜೊತೆಗೆ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಯೋಗದ ವೆಬ್ಸೈಟ್: ceokarnataka.kar.nic.in ಅಥವಾ ಮೊಬೈಲ್ನಲ್ಲಿ karepic<space> ಎಂದು ಟೈಪ್ ಮಾಡಿ ಮತದಾರರ ಗುರುತು ಚೀಟಿ ಸಂಖ್ಯೆ ನಮೂದಿಸಿ 9243355223ಕ್ಕೆ ಎಸ್ಎಂಎಸ್ ಕಳುಹಿಸಿದರೆ ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬ ಮಾಹಿತಿ ಲಭ್ಯವಾಗುತ್ತದೆ ಎಂದರು.<br /> <br /> ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಆರಂಭಿಸಿದ್ದು, 1950ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು.<br /> ಮಾಹಿತಿಗೆ ಜಿಲ್ಲಾ ಚುನಾವಣೆ ಶಾಖೆ: 08272-225932, ನಗರಸಭೆ ಕಚೇರಿ:08272-228323, ತಾಲ್ಲೂಕು ಕಚೇರಿ (ಮಡಿಕೇರಿ):08272-228396, ತಾಲ್ಲೂಕು ಕಚೇರಿ (ವಿರಾಜಪೇಟೆ):08274-257328, ತಾಲ್ಲೂಕು ಕಚೇರಿ (ಸೋಮವಾರಪೇಟೆ): 08276-282045 ಹಾಗೂ ಉಪ ವಿಭಾಗಾಧಿಕಾರಿ-08272-225469 ಸಂಪರ್ಕಿಸಬಹುದು.<br /> <br /> ಸಹಾಯಕ ಚುನಾವಣಾಧಿಕಾರಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿರಾಮ್ ಜಿ.ಶಂಕರ್ (8971275071), ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಲ್ಲಿಕಾರ್ಜುನಯ್ಯ (9739601935) ಕಾರ್ಯನಿರ್ವಹಿಸಲಿದ್ದಾರೆ. <br /> <br /> <strong>ನಿಯಂತ್ರಣ ಕೊಠಡಿ ಪ್ರಕ್ರಿಯೆ ಆರಂಭ</strong><br /> ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ದೂರುಗಳಿಗೆ ದಿನದ 24 ಗಂಟೆಯೂ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ (ನಿಯಂತ್ರಣ ಕೊಠಡಿ) ತೆರೆಯಲಾಗಿದೆ. ದೂರವಾಣಿ ಸಂಖ್ಯೆ 08272-220302 ಕರೆ ಮಾಡಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>