<p><strong>ಕೋಲಾರ: </strong>‘ತಾಲ್ಲೂಕಿನ ಎಸ್.ಅಗ್ರಹಾರ ಕೆರೆ ಬಳಿ ಮಾನವ ನಿರ್ಮಿತ ಅರಣ್ಯ ನಿರ್ಮಿಸುವ ನಿಟ್ಟಿನಲ್ಲಿ ನ.8ರಂದು 3 ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬೆಂಗಳೂರಿನ ಯುವ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಸಂದೇಶ್ ರಾಯ್ಕರ್ ತಿಳಿಸಿದರು.</p>.<p>ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎಸ್.ಅಗ್ರಹಾರ ಕೆರೆ ಬಳಿಯಿರುವ ಸರ್ಕಾರಕ್ಕೆ ಸೇರಿದ 1 ಎಕರೆ ಜಾಗದಲ್ಲಿ ಮ್ಯಾರಥಾನ್ ಮಾದರಿಯಲ್ಲಿ ಪ್ಲಾಂಟ್ ಅಥಾನ್ ಎಂಬ ಯೋಜನೆಯಡಿ ಒಂದೇ ದಿನ ಸಸಿ ನೆಡಲಾಗುತ್ತದೆ. ಸಂಸದ ಎಸ್.ಮುನಿಸ್ವಾಮಿ ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟಿಸುತ್ತಾರೆ’ ಎಂದರು.</p>.<p>‘ಜಿಲ್ಲಾಧಿಕಾರಿ ಸತ್ಯಭಾಮ ಹಾಗೂ ಲಯನ್ ಸಂಸ್ಥೆ ಪ್ರತಿನಿಧಿ ಮಮತಾ ಅತಿಥಿಗಳಾಗಿ ಭಾಗವಹಿಸುತ್ತಾರೆ. ಬೆಂಗಳೂರು ಮತ್ತು ಮೈಸೂರಿನ ಸುಮಾರು 200 ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಸಿ ನೆಡುತ್ತಾರೆ’ ಎಂದು ಮಾಹಿತಿ ನೀಡಿದರು.</p>.<p>‘ಜಪಾನ್ನ ಮಿಯಾವಾಕಿ ಪದ್ಧತಿ ಸಹಾಯದಿಂದ ಜಿಲ್ಲೆಯಲ್ಲಿ ಮುಂದೆ 10 ಸಾವಿರ ಸಸಿ ನೆಡುವ ಗುರಿಯಿದೆ. ಅರಣ್ಯ ಬೆಳೆಸುವಲ್ಲಿ ಮಿಯಾವಾಕಿ ಪದ್ಧತಿ ಪ್ರಮುಖವಾದದ್ದು. ಜಪಾನ್ನ ಸಸ್ಯ ತಜ್ಞ ಅಕಿರಾ ಮಿಯಾವಾಕಿ ಕಂಡು ಹಿಡಿದಿರುವ ಈ ಪದ್ಧತಿಯಲ್ಲಿ ಸಾಧಾರಣ ಅರಣ್ಯಗಳಿಗಿಂತ ಮರಗಳು 10 ಪಟ್ಟು ಹೆಚ್ಚು ವೇಗವಾಗಿ ಮತ್ತು 30 ಪಟ್ಟು ಹೆಚ್ಚು ದಟ್ಟವಾಗಿ ಬೆಳೆಯುತ್ತವೆ. ಮೊದಲ 3 ವರ್ಷಗಳ ನಂತರ ಗಿಡಗಳ ನಿರ್ವಹಣೆಯ ಅವಶ್ಯಕತೆ ಸಹ ಇರುವುದಿಲ್ಲ’ ಎಂದು ವಿವರಿಸಿದರು.</p>.<p>‘ಪರಿಸರದ ಸಮತೋಲನಕ್ಕೆ ಗಿಡಗಳನ್ನು ಬೆಳೆಸುವುದು ಅತ್ಯಗತ್ಯ. ಪ್ರವಾಹಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಹಸಿರು ಕವಚದ ಅಭಾವವೇ ಕಾರಣ. ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಸಿರು ಸಂಪತ್ತು ಹೆಚ್ಚಿಸಲು ಒತ್ತು ನೀಡುತ್ತಿದ್ದೇವೆ’ ಎಂದು ಸಂಘಟನೆ ಸದಸ್ಯೆ ಭಾವನಾ ಹೇಳಿದರು.</p>.<p>ಸಂಘಟನೆಯ ಸ್ವಯಂ ಸೇವಕರಾದ ಸಂಕೇತ್, ಭರತ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>‘ತಾಲ್ಲೂಕಿನ ಎಸ್.ಅಗ್ರಹಾರ ಕೆರೆ ಬಳಿ ಮಾನವ ನಿರ್ಮಿತ ಅರಣ್ಯ ನಿರ್ಮಿಸುವ ನಿಟ್ಟಿನಲ್ಲಿ ನ.8ರಂದು 3 ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬೆಂಗಳೂರಿನ ಯುವ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಸಂದೇಶ್ ರಾಯ್ಕರ್ ತಿಳಿಸಿದರು.</p>.<p>ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎಸ್.ಅಗ್ರಹಾರ ಕೆರೆ ಬಳಿಯಿರುವ ಸರ್ಕಾರಕ್ಕೆ ಸೇರಿದ 1 ಎಕರೆ ಜಾಗದಲ್ಲಿ ಮ್ಯಾರಥಾನ್ ಮಾದರಿಯಲ್ಲಿ ಪ್ಲಾಂಟ್ ಅಥಾನ್ ಎಂಬ ಯೋಜನೆಯಡಿ ಒಂದೇ ದಿನ ಸಸಿ ನೆಡಲಾಗುತ್ತದೆ. ಸಂಸದ ಎಸ್.ಮುನಿಸ್ವಾಮಿ ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟಿಸುತ್ತಾರೆ’ ಎಂದರು.</p>.<p>‘ಜಿಲ್ಲಾಧಿಕಾರಿ ಸತ್ಯಭಾಮ ಹಾಗೂ ಲಯನ್ ಸಂಸ್ಥೆ ಪ್ರತಿನಿಧಿ ಮಮತಾ ಅತಿಥಿಗಳಾಗಿ ಭಾಗವಹಿಸುತ್ತಾರೆ. ಬೆಂಗಳೂರು ಮತ್ತು ಮೈಸೂರಿನ ಸುಮಾರು 200 ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಸಿ ನೆಡುತ್ತಾರೆ’ ಎಂದು ಮಾಹಿತಿ ನೀಡಿದರು.</p>.<p>‘ಜಪಾನ್ನ ಮಿಯಾವಾಕಿ ಪದ್ಧತಿ ಸಹಾಯದಿಂದ ಜಿಲ್ಲೆಯಲ್ಲಿ ಮುಂದೆ 10 ಸಾವಿರ ಸಸಿ ನೆಡುವ ಗುರಿಯಿದೆ. ಅರಣ್ಯ ಬೆಳೆಸುವಲ್ಲಿ ಮಿಯಾವಾಕಿ ಪದ್ಧತಿ ಪ್ರಮುಖವಾದದ್ದು. ಜಪಾನ್ನ ಸಸ್ಯ ತಜ್ಞ ಅಕಿರಾ ಮಿಯಾವಾಕಿ ಕಂಡು ಹಿಡಿದಿರುವ ಈ ಪದ್ಧತಿಯಲ್ಲಿ ಸಾಧಾರಣ ಅರಣ್ಯಗಳಿಗಿಂತ ಮರಗಳು 10 ಪಟ್ಟು ಹೆಚ್ಚು ವೇಗವಾಗಿ ಮತ್ತು 30 ಪಟ್ಟು ಹೆಚ್ಚು ದಟ್ಟವಾಗಿ ಬೆಳೆಯುತ್ತವೆ. ಮೊದಲ 3 ವರ್ಷಗಳ ನಂತರ ಗಿಡಗಳ ನಿರ್ವಹಣೆಯ ಅವಶ್ಯಕತೆ ಸಹ ಇರುವುದಿಲ್ಲ’ ಎಂದು ವಿವರಿಸಿದರು.</p>.<p>‘ಪರಿಸರದ ಸಮತೋಲನಕ್ಕೆ ಗಿಡಗಳನ್ನು ಬೆಳೆಸುವುದು ಅತ್ಯಗತ್ಯ. ಪ್ರವಾಹಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಹಸಿರು ಕವಚದ ಅಭಾವವೇ ಕಾರಣ. ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಸಿರು ಸಂಪತ್ತು ಹೆಚ್ಚಿಸಲು ಒತ್ತು ನೀಡುತ್ತಿದ್ದೇವೆ’ ಎಂದು ಸಂಘಟನೆ ಸದಸ್ಯೆ ಭಾವನಾ ಹೇಳಿದರು.</p>.<p>ಸಂಘಟನೆಯ ಸ್ವಯಂ ಸೇವಕರಾದ ಸಂಕೇತ್, ಭರತ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>