ರುದ್ರಮ್ಮರನ್ನು ಮದುವೆಯಾಗಲು ನಿರ್ಧರಿಸಿದ ಸಂಗಮೇಶ್ ಆ ಸಂಗತಿಯನ್ನು ಸಂಬಂಧಿ ಬಸವರಾಜುಗೆ ತಿಳಿಸಿದ್ದರು. ಬಳಿಕ ಬಸವರಾಜು, ಸ್ನೇಹಿತರಾದ ಗೆಳೆಯರ ಬಳಗದ ರವಿ ಜತೆ ಈ ವಿಷಯ ಪ್ರಸ್ತಾಪಿಸಿದ್ದರು. ನಂತರ ರವಿ ಅವರು ಮಾಲೂರು ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರೊಂದಿಗೆ ಚರ್ಚಿಸಿ ರುದ್ರಮ್ಮರ ಪೋಷಕರನ್ನು ಭೇಟಿಯಾಗಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದರು.