<p><strong>ಕೋಲಾರ: ‘</strong>ಬಡತನ, ಜಾತಿಯನ್ನು ಬಂಡವಾಳವಾಗಿಸಿಕೊಂಡು ಓಟು ಗಿಟ್ಟಿಸುವ ಜಾಯಮಾನ ನನ್ನದಲ್ಲ. ಬಡತನದ ವಿರುದ್ದ ಸಮರ ಸಾರಿ ಸ್ವಾವಲಂಬನೆಯ ಬದುಕು ಕಲ್ಪಿಸುವ ಸಂಕಲ್ಪದೊಂದಿಗೆ ಡಿಸಿಸಿ ಬ್ಯಾಂಕ್ ಆರ್ಥಿಕ ನೆರವು ಒದಗಿಸುತ್ತಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.</p>.<p>ನಗರದ ಶನಿವಾರ ಬೀದಿ ಬದಿಯ ಸಣ್ಣ ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ‘ಬೀದಿಬದಿ ವ್ಯಾಪಾರ ಮಾಡಿ ಜೀವನ ನಡೆಸುವ ಬಡವರರನ್ನು ಬಡ್ಡಿ ಶೋಷಣೆಯಿಂದ ಮುಕ್ತಿಗೊಳಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಹೇಳಿದರು.</p>.<p>‘ಬಡವರಿಗೂ ಸ್ವಾಭಿಮಾನದ ಬದುಕುವ ಅವಕಾಶ ಕಲ್ಪಿಸುವ ದಿಸೆಯಲ್ಲಿ ಬಡ್ಡಿರಹಿತವಾಗಿ ₨ ೧೦ ಸಾವಿರ ಸಾಲ ನೀಡುತ್ತಿದೆ. ಮೀಟರ್ ಬಡ್ಡಿ ಶೋಷಣೆಯಿಂದ ನಿಮ್ಮನ್ನು ಪಾರು ಮಾಡಲು ಸರ್ಕಾರ ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.</p>.<p>‘ಸಾಲ ಪಡೆದುಕೊಳ್ಳುವ ಫಲಾನುಭವಿ ಡಿಸಿಸಿ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು. ವ್ಯವಹಾರಗಳನ್ನು ಬ್ಯಾಂಕಿನಲ್ಲಿ ಮುಂದುವರೆಸಿ ನೀವೇ ನಮ್ಮ ಬ್ಯಾಂಕಿನ ಆಸ್ತಿಯಾಗಬೇಕು. ಪಡೆದ ಸಾಲ ಪ್ರಾಮಾಣಿಕವಾಗಿ ಮರು ಪಾವತಿಸಿದಲ್ಲಿ ಮುಂದಿನ ಸಾಲ ಹೆಚ್ಚುವರಿಯಾಗಿ ನೀಡಲಾಗುವುದು’ ಎಂದು ಹೇಳಿದರು.</p>.<p>ಬ್ಯಾಂಕಿನ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ಬಡ್ಡಿರಹಿತ ₨ ೧೦ ಸಾವಿರ ಸಾಲದ ಜತೆಗೆ ವಾರ್ಷಿಕ ಬಡ್ಡಿ ಶೇ.೯ರ ದರದಲ್ಲಿ ₨ ೧ ಲಕ್ಷದವರೆಗೂ ಸಾಲ ನೀಡಲು ಆಡಳಿತ ಮಂಡಲಿಯಲ್ಲಿ ಚರ್ಚಿಸಿ ತೀರ್ಮಾನಿಸಿರುವುದು ಸ್ವಾಗತಾರ್ಹವಾಗಿದೆ’ ಎಂದರು.</p>.<p>‘ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಹಾಗೂ ರೈತರಿಗೆ ಬಡ್ಡಿ ರಹಿತ ಸಾಲ ಕೊಡುವ ಕೆಲಸ ಮಾಡಲಾಗುತ್ತಿದೆ. ಕೋಲಾರ ಚಿಕ್ಕಬಳ್ಳಾಪುರದಲ್ಲಿ ಸುಮಾರು ೪ ಸಾವಿರ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಕಲ್ಪಿಸಿ ಬಡ್ಡಿ ಮಾಫಿಯಾದಿಂದ ಮುಕ್ತಿ ಕಲ್ಪಿಸಲಾಗಿದೆ’ ಎಂದು ಹೇಳಿದರು.</p>.<p>ವಕೀಲ ನರೇಂದ್ರ ಬಾಬು, ನಗರಸಭೆ ಸದಸ್ಯ ಅಪ್ಸರ್, ಸಂಘದ ಅಧ್ಯಕ್ಷ ಎಚ್.ಶೇಕ್ ಖದೀರ್, ಉಪಾಧ್ಯಕ್ಷ ಸಲಿಂಪಾಷ ಕಾರ್ಯದರ್ಶಿ ಅನ್ವರ್ ಪಾಷ, ಖಜಾಂಚಿ ಮಹಮ್ಮದ್ ಹಫೀಜ್, ಪ್ರಧಾನ ಕಾರ್ಯದರ್ಶಿ ದಾಮೋದರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: ‘</strong>ಬಡತನ, ಜಾತಿಯನ್ನು ಬಂಡವಾಳವಾಗಿಸಿಕೊಂಡು ಓಟು ಗಿಟ್ಟಿಸುವ ಜಾಯಮಾನ ನನ್ನದಲ್ಲ. ಬಡತನದ ವಿರುದ್ದ ಸಮರ ಸಾರಿ ಸ್ವಾವಲಂಬನೆಯ ಬದುಕು ಕಲ್ಪಿಸುವ ಸಂಕಲ್ಪದೊಂದಿಗೆ ಡಿಸಿಸಿ ಬ್ಯಾಂಕ್ ಆರ್ಥಿಕ ನೆರವು ಒದಗಿಸುತ್ತಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.</p>.<p>ನಗರದ ಶನಿವಾರ ಬೀದಿ ಬದಿಯ ಸಣ್ಣ ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ‘ಬೀದಿಬದಿ ವ್ಯಾಪಾರ ಮಾಡಿ ಜೀವನ ನಡೆಸುವ ಬಡವರರನ್ನು ಬಡ್ಡಿ ಶೋಷಣೆಯಿಂದ ಮುಕ್ತಿಗೊಳಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಹೇಳಿದರು.</p>.<p>‘ಬಡವರಿಗೂ ಸ್ವಾಭಿಮಾನದ ಬದುಕುವ ಅವಕಾಶ ಕಲ್ಪಿಸುವ ದಿಸೆಯಲ್ಲಿ ಬಡ್ಡಿರಹಿತವಾಗಿ ₨ ೧೦ ಸಾವಿರ ಸಾಲ ನೀಡುತ್ತಿದೆ. ಮೀಟರ್ ಬಡ್ಡಿ ಶೋಷಣೆಯಿಂದ ನಿಮ್ಮನ್ನು ಪಾರು ಮಾಡಲು ಸರ್ಕಾರ ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.</p>.<p>‘ಸಾಲ ಪಡೆದುಕೊಳ್ಳುವ ಫಲಾನುಭವಿ ಡಿಸಿಸಿ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು. ವ್ಯವಹಾರಗಳನ್ನು ಬ್ಯಾಂಕಿನಲ್ಲಿ ಮುಂದುವರೆಸಿ ನೀವೇ ನಮ್ಮ ಬ್ಯಾಂಕಿನ ಆಸ್ತಿಯಾಗಬೇಕು. ಪಡೆದ ಸಾಲ ಪ್ರಾಮಾಣಿಕವಾಗಿ ಮರು ಪಾವತಿಸಿದಲ್ಲಿ ಮುಂದಿನ ಸಾಲ ಹೆಚ್ಚುವರಿಯಾಗಿ ನೀಡಲಾಗುವುದು’ ಎಂದು ಹೇಳಿದರು.</p>.<p>ಬ್ಯಾಂಕಿನ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ಬಡ್ಡಿರಹಿತ ₨ ೧೦ ಸಾವಿರ ಸಾಲದ ಜತೆಗೆ ವಾರ್ಷಿಕ ಬಡ್ಡಿ ಶೇ.೯ರ ದರದಲ್ಲಿ ₨ ೧ ಲಕ್ಷದವರೆಗೂ ಸಾಲ ನೀಡಲು ಆಡಳಿತ ಮಂಡಲಿಯಲ್ಲಿ ಚರ್ಚಿಸಿ ತೀರ್ಮಾನಿಸಿರುವುದು ಸ್ವಾಗತಾರ್ಹವಾಗಿದೆ’ ಎಂದರು.</p>.<p>‘ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಹಾಗೂ ರೈತರಿಗೆ ಬಡ್ಡಿ ರಹಿತ ಸಾಲ ಕೊಡುವ ಕೆಲಸ ಮಾಡಲಾಗುತ್ತಿದೆ. ಕೋಲಾರ ಚಿಕ್ಕಬಳ್ಳಾಪುರದಲ್ಲಿ ಸುಮಾರು ೪ ಸಾವಿರ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಕಲ್ಪಿಸಿ ಬಡ್ಡಿ ಮಾಫಿಯಾದಿಂದ ಮುಕ್ತಿ ಕಲ್ಪಿಸಲಾಗಿದೆ’ ಎಂದು ಹೇಳಿದರು.</p>.<p>ವಕೀಲ ನರೇಂದ್ರ ಬಾಬು, ನಗರಸಭೆ ಸದಸ್ಯ ಅಪ್ಸರ್, ಸಂಘದ ಅಧ್ಯಕ್ಷ ಎಚ್.ಶೇಕ್ ಖದೀರ್, ಉಪಾಧ್ಯಕ್ಷ ಸಲಿಂಪಾಷ ಕಾರ್ಯದರ್ಶಿ ಅನ್ವರ್ ಪಾಷ, ಖಜಾಂಚಿ ಮಹಮ್ಮದ್ ಹಫೀಜ್, ಪ್ರಧಾನ ಕಾರ್ಯದರ್ಶಿ ದಾಮೋದರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>