‘ತಾಲ್ಲೂಕು ಕಚೇರಿ ಆವರಣದಿಂದ ಡಿಸಿಸಿ ಬ್ಯಾಂಕ್ ತೆರಳಲು ಇದ್ದ ಬಾಗಿಲು ಮುಚ್ಚಿದ್ದರಿಂದ ಬ್ಯಾಂಕ್ಗೆ ತೆರಳುವ ಮಹಿಳೆಯರಿಗೆ ತೊಂದರೆ ಆಗುತ್ತಿದೆ. ಬಾಗಿಲು ತೆರೆದು ಅನುವು ಮಾಡಿಕೊಡಬೇಕು ಎಂದು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಲಾಗಿತ್ತು. ಆರಂಭದಲ್ಲಿ ಕೆಲವು ನಿಯಮಗಳಿಗೆ ಅಂಟಿಕೊಂಡಿದ್ದ ಅವರು ಬಳಿಕ ಷರತ್ತು ವಿಧಿಸಿ ಬಾಗಿಲು ತೆರೆಯಲು ಒಪ್ಪಿದರು’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ವಿ. ಮಹೇಶ್ ತಿಳಿಸಿದರು.