<p>ಬೇತಮಂಗಲ: ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಪೋಷಕರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬೇತಮಂಗಲ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಬ್ಬರು ವಿವಾಹ ಮಾಡಿಕೊಂಡಿದ್ದಾರೆ.</p>.<p>ನಗರದಲ್ಲಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಬುಧವಾರ ಸಾಂತ್ವನ ಕೇಂದ್ರದ ಅಧಿಕಾರಿಗಳ ಸಮ್ಮುಖದಲ್ಲಿ ಸ್ವಇಚ್ಛೆಯಿಂದ ಪ್ರೇಮಿಗಳು ವಿವಾಹವಾದರು.</p>.<p>ಬಂಗಾರಪೇಟೆ ತಾಲ್ಲೂಕಿನ ಬೋಯಿಸೋಣ್ಣೇನಹಳ್ಳಿ ನಿವಾಸಿಯಾದ ವೆಂಕಟೇಶಪ್ಪ ಅವರ ಪುತ್ರ ಪವನ್ ಕುಮಾರ್ (28) ಮತ್ತು ಕೆಜಿಎಫ್ ತಾಲ್ಲೂಕಿನ ಘಟ್ಟಕಾಮದೇನಹಳ್ಳಿಯ ಲೇಟ್ ಮುನಿಯಪ್ಪ ಅವರ ಪುತ್ರಿ ವೇದಾವತಿ (29) ವಿವಾಹವಾದವರು. ಇಬ್ಬರು ಕೆಲಸಕ್ಕೆ ಹೋಗುವಾಗ ಪರಿಚಯವಾಗಿದೆ.</p>.<p>ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಪೋಷಕರ ವಿರೋಧದಿಂದ ಸಾಂತ್ವನ ಕೇಂದ್ರದಲ್ಲಿ ವಿವಾಹವಾದರು.</p>.<p>‘ಈ ಇಬ್ಬರೂ ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವರ ಪೋಷಕರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಮ್ಮ ಕೇಂದ್ರಕ್ಕೆ ಭೇಟಿ ನೀಡಿ ಪ್ರೀತಿಯ ವಿಷಯ ತಿಳಿಸಿದ್ದಾರೆ. ಅವರನ್ನು ಈ ವಿಷಯದ ಬಗ್ಗೆ ಸಮಾಲೋಚನೆ ಮಾಡಿ ನಂತರ ಈ ಸಾಂತ್ವನ ಕೇಂದ್ರದಲ್ಲಿ ವಿವಾಹ ಮಾಡಿಸಲಾಯಿತು’ ಎಂದು ಸಿಡಿಪಿಒ ನಾಗರತ್ನಮ್ಮ ತಿಳಿಸಿದರು.</p>.<p>ಸಾಂತ್ವನ ಕೇಂದ್ರದ ಕಾರ್ಯದರ್ಶಿ ಡಾ.ಎಂ. ಗೋಪಾಲ್, ಆಪ್ತ ಸಮಾಲೋಚಕಿ ಪವಿತ್ರಾ, ಪ್ರೇಮಿಗಳ ಬಂಧುಗಳಾದ ಚೀಮಲಬಂಡಹಳ್ಳಿ ಗೋವಿಂದರಾಜು, ಮುರಳಿ, ಕಮ್ಮಸಂದ್ರ ಆನಂದ, ನಾಗಶೆಟ್ಟಹಳ್ಳಿ ಚಂದು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇತಮಂಗಲ: ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಪೋಷಕರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬೇತಮಂಗಲ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಬ್ಬರು ವಿವಾಹ ಮಾಡಿಕೊಂಡಿದ್ದಾರೆ.</p>.<p>ನಗರದಲ್ಲಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಬುಧವಾರ ಸಾಂತ್ವನ ಕೇಂದ್ರದ ಅಧಿಕಾರಿಗಳ ಸಮ್ಮುಖದಲ್ಲಿ ಸ್ವಇಚ್ಛೆಯಿಂದ ಪ್ರೇಮಿಗಳು ವಿವಾಹವಾದರು.</p>.<p>ಬಂಗಾರಪೇಟೆ ತಾಲ್ಲೂಕಿನ ಬೋಯಿಸೋಣ್ಣೇನಹಳ್ಳಿ ನಿವಾಸಿಯಾದ ವೆಂಕಟೇಶಪ್ಪ ಅವರ ಪುತ್ರ ಪವನ್ ಕುಮಾರ್ (28) ಮತ್ತು ಕೆಜಿಎಫ್ ತಾಲ್ಲೂಕಿನ ಘಟ್ಟಕಾಮದೇನಹಳ್ಳಿಯ ಲೇಟ್ ಮುನಿಯಪ್ಪ ಅವರ ಪುತ್ರಿ ವೇದಾವತಿ (29) ವಿವಾಹವಾದವರು. ಇಬ್ಬರು ಕೆಲಸಕ್ಕೆ ಹೋಗುವಾಗ ಪರಿಚಯವಾಗಿದೆ.</p>.<p>ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಪೋಷಕರ ವಿರೋಧದಿಂದ ಸಾಂತ್ವನ ಕೇಂದ್ರದಲ್ಲಿ ವಿವಾಹವಾದರು.</p>.<p>‘ಈ ಇಬ್ಬರೂ ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವರ ಪೋಷಕರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಮ್ಮ ಕೇಂದ್ರಕ್ಕೆ ಭೇಟಿ ನೀಡಿ ಪ್ರೀತಿಯ ವಿಷಯ ತಿಳಿಸಿದ್ದಾರೆ. ಅವರನ್ನು ಈ ವಿಷಯದ ಬಗ್ಗೆ ಸಮಾಲೋಚನೆ ಮಾಡಿ ನಂತರ ಈ ಸಾಂತ್ವನ ಕೇಂದ್ರದಲ್ಲಿ ವಿವಾಹ ಮಾಡಿಸಲಾಯಿತು’ ಎಂದು ಸಿಡಿಪಿಒ ನಾಗರತ್ನಮ್ಮ ತಿಳಿಸಿದರು.</p>.<p>ಸಾಂತ್ವನ ಕೇಂದ್ರದ ಕಾರ್ಯದರ್ಶಿ ಡಾ.ಎಂ. ಗೋಪಾಲ್, ಆಪ್ತ ಸಮಾಲೋಚಕಿ ಪವಿತ್ರಾ, ಪ್ರೇಮಿಗಳ ಬಂಧುಗಳಾದ ಚೀಮಲಬಂಡಹಳ್ಳಿ ಗೋವಿಂದರಾಜು, ಮುರಳಿ, ಕಮ್ಮಸಂದ್ರ ಆನಂದ, ನಾಗಶೆಟ್ಟಹಳ್ಳಿ ಚಂದು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>