ಶ್ರೀನಿವಾಸಪುರ: ಸೌತೆಕಾಯಿ ಬೆಳೆಗಾರರಿಗೆ ಬೆಲೆ ಕುಸಿತದ ಬಿಸಿ ತಟ್ಟಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.
ತಾಲ್ಲೂಕಿನಲ್ಲಿ ನೂರಾರು ಎಕರೆಗಳಲ್ಲಿ ಸೌತೆ ಕಾಯಿ ಬೆಲೆಯಲಾಗಿದೆ. ಟೊಮೆಟೊ ಬೆಳೆ ಮುಗಿದ ಮೇಲೆ, ಅದೆ ಆಧಾರದ ಕಡ್ಡಿಗಳಿಗೆ ಸೌತೆ ಬಳ್ಳಿ ಹಬ್ಬಿಸಿ ಬೆಳೆಯುವುದು ಇಲ್ಲಿನ ರೈತರ ಪರಿಪಾಠ. ಈ ಬಾರಿ ಉತ್ತಮ ಫಸಲು ಕಾಣಿಸಿಕೊಂಡಿದೆ. ಆದರೆ ಬೆಲೆ ಕುಸಿತ ಬೆಳೆಗಾರ ನಿದ್ದೆಗೆಡಿಸಿದೆ.