<p><strong>ಶ್ರೀನಿವಾಸಪುರ: </strong>ತಾಲ್ಲೂಕಿನ ವೈ.ಹೊಸಕೋಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮಂಗಳವಾರ ರಾತ್ರಿ ಮರಕ್ಕೆ ನೇಣು ಹಾಕಿ ಕೊಂಡು ನಾರಾಯಣಸ್ವಾಮಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.</p>.<p>ನಾರಾಯಣಸ್ವಾಮಿ ಅವರಿಗೆ ಇಬ್ಬರು ಪತ್ನಿಯರಿದ್ದು, ಎರಡನೇ ಪತ್ನಿಯ ಮಗಳು ಕೆಲವು ದಿನಗಳ ಹಿಂದೆ ಪ್ರಿಯಕರನ ಜತೆ ಪರಾರಿಯಾಗಿದ್ದಳು. ಇದರಿಂದ ಬೇಸರಗೊಂಡ ತಾಯಿ ಮಂಗಳವಾರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.</p>.<p>ತಡ ರಾತ್ರಿ ಗ್ರಾಮಕ್ಕೆ ಬಂದ ನಾರಾಯಣಸ್ವಾಮಿ, ಗ್ರಾಮದ ಸಮೀಪ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<p>----</p>.<p><strong>ಆನೆ ದಾಳಿ</strong></p>.<p>ಕೆಜಿಎಫ್: ಕಾಡಾನೆಗಳ ಹಿಂಡು ಬುಧವಾರ ನಗರದ ಹೊರಭಾಗದ ಮೂರು ಗ್ರಾಮಗಳ ಮೇಲೆ ಹಾದು ಹೋಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.</p>.<p>ನಗರದ ಹೊರವಲಯದ ಚೆನ್ನಾಗನಹಳ್ಳಿ, ಕಂಬಳಿ, ಮೂಗನೂರು ಮೇಲೆ ಹಾದು ಹೋಗಿರುವ ಆರು ಆನೆಗಳ ಹಿಂಡು ದಾರಿಯಲ್ಲಿ ಸಿಕ್ಕಿದ ಬಾಳೆ ಮತ್ತು ಮಾವು ಹಾಗೂ ಸಪೋಟ ತೋಟಗಳನ್ನು ನಾಶಮಾಡಿವೆ.</p>.<p>ದೊಡ್ಡ ಕಂಬಳಿ ಗ್ರಾಮದ ರವೀಂದ್ರ ಅವರ ಬಾಳೆ ತೋಟ, ಅದೇ ಗ್ರಾಮದ ಕಾಶಿನಾಥ್ ಅವರ ಮಾವಿನ ತೋಟ, ಚಿನ್ನಾಗನಹಳ್ಳಿಯ ಏಕಾಂತ ರೆಡ್ಡಿ ಅವರ ಟೊಮೆಟೊ ಮತ್ತು ದೊಡ್ಡ ಕಂಬಳಿಯ ಲತಾ ರಮೇಶ್ ಅವರ ಸಪೋಟ ಹಣ್ಣಿನ ತೋಟ ಆನೆ ದಾಳಿಗೆ ಸಿಕ್ಕಿ<br />ನಷ್ಟವುಂಟಾಗಿದೆ.</p>.<p>ಕಾಮಸಮುದ್ರದಿಂದ ಬಂದಿರುವ ಆನೆಗಳು ಎರಡು ತಿಂಗಳ ಹಿಂದೆ ಕೂಡ ಇದೇ ಮಾರ್ಗದಲ್ಲಿ ಬಂದಿದ್ದವು. ಸಂಜೆ ವೇಳೆಗೆ ಹಿಂಡು ಬೋಡುಗುರ್ಕಿ ಗ್ರಾಮದತ್ತ ತೆರಳಿದೆ. ರಾತ್ರಿ ವೇಳೆಗೆ ತೊಪ್ಪನಹಳ್ಳಿ ಮಾರ್ಗವಾಗಿ ತಮಿಳುನಾಡಿಗೆ ಹೋಗಬಹುದು ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ: </strong>ತಾಲ್ಲೂಕಿನ ವೈ.ಹೊಸಕೋಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮಂಗಳವಾರ ರಾತ್ರಿ ಮರಕ್ಕೆ ನೇಣು ಹಾಕಿ ಕೊಂಡು ನಾರಾಯಣಸ್ವಾಮಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.</p>.<p>ನಾರಾಯಣಸ್ವಾಮಿ ಅವರಿಗೆ ಇಬ್ಬರು ಪತ್ನಿಯರಿದ್ದು, ಎರಡನೇ ಪತ್ನಿಯ ಮಗಳು ಕೆಲವು ದಿನಗಳ ಹಿಂದೆ ಪ್ರಿಯಕರನ ಜತೆ ಪರಾರಿಯಾಗಿದ್ದಳು. ಇದರಿಂದ ಬೇಸರಗೊಂಡ ತಾಯಿ ಮಂಗಳವಾರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.</p>.<p>ತಡ ರಾತ್ರಿ ಗ್ರಾಮಕ್ಕೆ ಬಂದ ನಾರಾಯಣಸ್ವಾಮಿ, ಗ್ರಾಮದ ಸಮೀಪ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<p>----</p>.<p><strong>ಆನೆ ದಾಳಿ</strong></p>.<p>ಕೆಜಿಎಫ್: ಕಾಡಾನೆಗಳ ಹಿಂಡು ಬುಧವಾರ ನಗರದ ಹೊರಭಾಗದ ಮೂರು ಗ್ರಾಮಗಳ ಮೇಲೆ ಹಾದು ಹೋಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.</p>.<p>ನಗರದ ಹೊರವಲಯದ ಚೆನ್ನಾಗನಹಳ್ಳಿ, ಕಂಬಳಿ, ಮೂಗನೂರು ಮೇಲೆ ಹಾದು ಹೋಗಿರುವ ಆರು ಆನೆಗಳ ಹಿಂಡು ದಾರಿಯಲ್ಲಿ ಸಿಕ್ಕಿದ ಬಾಳೆ ಮತ್ತು ಮಾವು ಹಾಗೂ ಸಪೋಟ ತೋಟಗಳನ್ನು ನಾಶಮಾಡಿವೆ.</p>.<p>ದೊಡ್ಡ ಕಂಬಳಿ ಗ್ರಾಮದ ರವೀಂದ್ರ ಅವರ ಬಾಳೆ ತೋಟ, ಅದೇ ಗ್ರಾಮದ ಕಾಶಿನಾಥ್ ಅವರ ಮಾವಿನ ತೋಟ, ಚಿನ್ನಾಗನಹಳ್ಳಿಯ ಏಕಾಂತ ರೆಡ್ಡಿ ಅವರ ಟೊಮೆಟೊ ಮತ್ತು ದೊಡ್ಡ ಕಂಬಳಿಯ ಲತಾ ರಮೇಶ್ ಅವರ ಸಪೋಟ ಹಣ್ಣಿನ ತೋಟ ಆನೆ ದಾಳಿಗೆ ಸಿಕ್ಕಿ<br />ನಷ್ಟವುಂಟಾಗಿದೆ.</p>.<p>ಕಾಮಸಮುದ್ರದಿಂದ ಬಂದಿರುವ ಆನೆಗಳು ಎರಡು ತಿಂಗಳ ಹಿಂದೆ ಕೂಡ ಇದೇ ಮಾರ್ಗದಲ್ಲಿ ಬಂದಿದ್ದವು. ಸಂಜೆ ವೇಳೆಗೆ ಹಿಂಡು ಬೋಡುಗುರ್ಕಿ ಗ್ರಾಮದತ್ತ ತೆರಳಿದೆ. ರಾತ್ರಿ ವೇಳೆಗೆ ತೊಪ್ಪನಹಳ್ಳಿ ಮಾರ್ಗವಾಗಿ ತಮಿಳುನಾಡಿಗೆ ಹೋಗಬಹುದು ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>