<p>ಕೋಲಾರ: ‘ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಅನುದಾನದಲ್ಲಿ ಕಿಯೋನಿಕ್ಸ್ ಸಂಸ್ಥೆಗೆ ನೀಡಿರುವ ಕಾರ್ಯಾದೇಶವನ್ನು ಕೂಡಲೇ ರದ್ದುಪಡಿಸಬೇಕು’ ಎಂದು ನಗರಸಭೆಯ ಕೆಲ ಸದಸ್ಯರು ಆಗ್ರಹಿಸಿದರು.</p>.<p>ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ವಿಚಾರವಾಗಿ ಚರ್ಚಿಸಿ ಕೊನೆಗೆ ರದ್ದತಿಗೆ ಸಮ್ಮತಿ ಸೂಚಿಸಿದರು.</p>.<p>ಸದಸ್ಯ ಎಸ್.ಆರ್.ಮುರಳಿಗೌಡ ವಿಷಯ ಪ್ರಸ್ತಾಪಿಸಿ, ‘ನಗರ ವ್ಯಾಪ್ತಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಖರೀದಿಸಿ ಅಳವಡಿಸುವುದು, ಸ್ಮಾರ್ಟ್ ಕ್ಲಾಸ್ಗಳಿಗೆ ಸಂಬಂಧಿಸಿದ ಉಪಕರಣ ಖರೀದಿಸಿ ಅಳವಡಿಸುವುದು, ಲ್ಯಾಪ್ಟಾಪ್ಗಳನ್ನು ಸರಬರಾಜು ಮಾಡುವುದುಸೇರಿ ₹ 2 ಕೋಟಿಗೂ ಹೆಚ್ಚಿನ ಅನುದಾನವನ್ನು ಟೆಂಡರ್ ಮಾಡದೆ ಕಾನೂನು ಬಾಹಿರವಾಗಿ ಕಿಯೋನಿಕ್ಸ್ ಸಂಸ್ಥೆಗೆ ಕಾರ್ಯಾದೇಶ ನೀಡಿದ್ದು, ಹೆಚ್ಚಿನ ದರಗಳಿಗೆ ವಸ್ತುಗಳನ್ನು ಖರೀದಿಸಲಾಗಿದೆ. ಉಪಕರಣಗಳು ಕಳಪೆಯಾಗಿವೆ’ ಎಂದು ದೂರಿದರು.</p>.<p>ಸದಸ್ಯ ಮುಬಾರಕ್ ಮಾತನಾಡಿ, ‘ಹಿಂದಿನ ಪೌರಾಯುಕ್ತರು ಒತ್ತಡಕ್ಕೆ ಮಣಿದು ಕಾರ್ಯಾದೇಶ ನೀಡಿದ್ದು, ಕೂಡಲೇ ಕಾರ್ಯಾದೇಶ ರದ್ದುಪಡಿಸಬೇಕು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಾರ್ಯಾದೇಶ ನೀಡುವಂತೆ ಪತ್ರ ಬರೆಯಬೇಕು’ ಎಂದು ಆಗ್ರಹಿಸಿದರು.</p>.<p>ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್, ‘ಈ ಸಂಬಂಧ ಕ್ರಮ ವಹಿಸಲಾಗುವುದು. ಪೂರೈಕೆಯಾಗಿರುವ ವಸ್ತುಗಳನ್ನು ವಾಪಸ್ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು’ ಎಂದರು.</p>.<p>ಪ್ರತಿಧ್ವನಿಸಿದ ಖಾತೆ ವಿವಾದ: ಅಕ್ರಮವಾಗಿ ಖಾತೆ ಮಾಡಿಕೊಡಲಾಗುತ್ತಿದೆ ಎಂಬ ಮುರಳಿಗೌಡ ಅವರ ಪ್ರಸ್ತಾವಕ್ಕೆ ಸಂಬಂಧಿಸಿ ದಂತೆ ವಾಗ್ವಾದ ನಡೆಯಿತು. ಮುರಳಿಗೌಡ, ಪ್ರಸಾದ್ಬಾಬು ಹಾಗೂ ಮುಬಾರಕ್ ಅವರು ನಕಲಿ ಖಾತೆ ನೀಡಿರುವ ಬಗ್ಗೆ ಪರಿಶೀಲನೆ ನಡೆಸು ವಂತೆ ಆಯುಕ್ತರನ್ನು ಒತ್ತಾಯಿಸಿದರು.</p>.<p>‘ಅಮೃತ್ ಯೋಜನೆಯಡಿ ಯುಜಿಡಿ ಕಾಮಗಾರಿ ವಿಚಾರವಾಗಿ ಗುಜರಾತಿನ ಜಯಂತಿ ಸೂಪರ್ ಕನ್ಸ್ಟ್ರಕ್ಷನ್ಗೆ ₹ 72 ಕೋಟಿಗೆ ನೀಡಲಾಗಿತ್ತು. ಕೆಲಸ ಅವೈಜ್ಞಾನಿಕವಾಗಿದೆ. ಅಲ್ಲದೇ, 2016ರಲ್ಲಿ ಕಾರ್ಯಾದೇಶ ನೀಡಿದ್ದು, ಕೆಲ ಮುಗಿದ ಮೇಲೆ 5 ವರ್ಷ ನಿರ್ವಹಣೆ ಮಾಡಬೇಕಿತ್ತು. ಅದನ್ನೂ ಮಾಡಿಲ್ಲ’ ಎಂದು ಮುರಳಿಗೌಡ ಹೇಳಿದ್ದೂ ವಾಗ್ವಾದಕ್ಕೆ<br />ಕಾರಣವಾಯಿತು.</p>.<p>ಯರಗೋಳ್ ಜಲಾಶಯದಲ್ಲಿ ಬಾಗಿನ ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಜಲಾಶಯ ನಿರ್ಮಾಣದಲ್ಲಿ ನಗರಸಭೆಯ ಹಣವೂ ಇದ್ದು, ಅಧ್ಯಕ್ಷರನ್ನೇ ಆಹ್ವಾನಿಸಿಲ್ಲ ಎಂದು ಮುಬಾರಕ್ ತರಾಟೆಗೆ ತೆಗೆದುಕೊಂಡರು.</p>.<p>ಯರಗೋಳ್ ಯೋಜನೆಗೆ ಹಿಂದೆ ಪೈಪ್ಲೈನ್ ಹಾಕಿಸಿದ್ದ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರನ್ನು ಪಕ್ಷಾತೀತವಾಗಿ ಶ್ಲಾಘಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ‘ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಅನುದಾನದಲ್ಲಿ ಕಿಯೋನಿಕ್ಸ್ ಸಂಸ್ಥೆಗೆ ನೀಡಿರುವ ಕಾರ್ಯಾದೇಶವನ್ನು ಕೂಡಲೇ ರದ್ದುಪಡಿಸಬೇಕು’ ಎಂದು ನಗರಸಭೆಯ ಕೆಲ ಸದಸ್ಯರು ಆಗ್ರಹಿಸಿದರು.</p>.<p>ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ವಿಚಾರವಾಗಿ ಚರ್ಚಿಸಿ ಕೊನೆಗೆ ರದ್ದತಿಗೆ ಸಮ್ಮತಿ ಸೂಚಿಸಿದರು.</p>.<p>ಸದಸ್ಯ ಎಸ್.ಆರ್.ಮುರಳಿಗೌಡ ವಿಷಯ ಪ್ರಸ್ತಾಪಿಸಿ, ‘ನಗರ ವ್ಯಾಪ್ತಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಖರೀದಿಸಿ ಅಳವಡಿಸುವುದು, ಸ್ಮಾರ್ಟ್ ಕ್ಲಾಸ್ಗಳಿಗೆ ಸಂಬಂಧಿಸಿದ ಉಪಕರಣ ಖರೀದಿಸಿ ಅಳವಡಿಸುವುದು, ಲ್ಯಾಪ್ಟಾಪ್ಗಳನ್ನು ಸರಬರಾಜು ಮಾಡುವುದುಸೇರಿ ₹ 2 ಕೋಟಿಗೂ ಹೆಚ್ಚಿನ ಅನುದಾನವನ್ನು ಟೆಂಡರ್ ಮಾಡದೆ ಕಾನೂನು ಬಾಹಿರವಾಗಿ ಕಿಯೋನಿಕ್ಸ್ ಸಂಸ್ಥೆಗೆ ಕಾರ್ಯಾದೇಶ ನೀಡಿದ್ದು, ಹೆಚ್ಚಿನ ದರಗಳಿಗೆ ವಸ್ತುಗಳನ್ನು ಖರೀದಿಸಲಾಗಿದೆ. ಉಪಕರಣಗಳು ಕಳಪೆಯಾಗಿವೆ’ ಎಂದು ದೂರಿದರು.</p>.<p>ಸದಸ್ಯ ಮುಬಾರಕ್ ಮಾತನಾಡಿ, ‘ಹಿಂದಿನ ಪೌರಾಯುಕ್ತರು ಒತ್ತಡಕ್ಕೆ ಮಣಿದು ಕಾರ್ಯಾದೇಶ ನೀಡಿದ್ದು, ಕೂಡಲೇ ಕಾರ್ಯಾದೇಶ ರದ್ದುಪಡಿಸಬೇಕು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಾರ್ಯಾದೇಶ ನೀಡುವಂತೆ ಪತ್ರ ಬರೆಯಬೇಕು’ ಎಂದು ಆಗ್ರಹಿಸಿದರು.</p>.<p>ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್, ‘ಈ ಸಂಬಂಧ ಕ್ರಮ ವಹಿಸಲಾಗುವುದು. ಪೂರೈಕೆಯಾಗಿರುವ ವಸ್ತುಗಳನ್ನು ವಾಪಸ್ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು’ ಎಂದರು.</p>.<p>ಪ್ರತಿಧ್ವನಿಸಿದ ಖಾತೆ ವಿವಾದ: ಅಕ್ರಮವಾಗಿ ಖಾತೆ ಮಾಡಿಕೊಡಲಾಗುತ್ತಿದೆ ಎಂಬ ಮುರಳಿಗೌಡ ಅವರ ಪ್ರಸ್ತಾವಕ್ಕೆ ಸಂಬಂಧಿಸಿ ದಂತೆ ವಾಗ್ವಾದ ನಡೆಯಿತು. ಮುರಳಿಗೌಡ, ಪ್ರಸಾದ್ಬಾಬು ಹಾಗೂ ಮುಬಾರಕ್ ಅವರು ನಕಲಿ ಖಾತೆ ನೀಡಿರುವ ಬಗ್ಗೆ ಪರಿಶೀಲನೆ ನಡೆಸು ವಂತೆ ಆಯುಕ್ತರನ್ನು ಒತ್ತಾಯಿಸಿದರು.</p>.<p>‘ಅಮೃತ್ ಯೋಜನೆಯಡಿ ಯುಜಿಡಿ ಕಾಮಗಾರಿ ವಿಚಾರವಾಗಿ ಗುಜರಾತಿನ ಜಯಂತಿ ಸೂಪರ್ ಕನ್ಸ್ಟ್ರಕ್ಷನ್ಗೆ ₹ 72 ಕೋಟಿಗೆ ನೀಡಲಾಗಿತ್ತು. ಕೆಲಸ ಅವೈಜ್ಞಾನಿಕವಾಗಿದೆ. ಅಲ್ಲದೇ, 2016ರಲ್ಲಿ ಕಾರ್ಯಾದೇಶ ನೀಡಿದ್ದು, ಕೆಲ ಮುಗಿದ ಮೇಲೆ 5 ವರ್ಷ ನಿರ್ವಹಣೆ ಮಾಡಬೇಕಿತ್ತು. ಅದನ್ನೂ ಮಾಡಿಲ್ಲ’ ಎಂದು ಮುರಳಿಗೌಡ ಹೇಳಿದ್ದೂ ವಾಗ್ವಾದಕ್ಕೆ<br />ಕಾರಣವಾಯಿತು.</p>.<p>ಯರಗೋಳ್ ಜಲಾಶಯದಲ್ಲಿ ಬಾಗಿನ ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಜಲಾಶಯ ನಿರ್ಮಾಣದಲ್ಲಿ ನಗರಸಭೆಯ ಹಣವೂ ಇದ್ದು, ಅಧ್ಯಕ್ಷರನ್ನೇ ಆಹ್ವಾನಿಸಿಲ್ಲ ಎಂದು ಮುಬಾರಕ್ ತರಾಟೆಗೆ ತೆಗೆದುಕೊಂಡರು.</p>.<p>ಯರಗೋಳ್ ಯೋಜನೆಗೆ ಹಿಂದೆ ಪೈಪ್ಲೈನ್ ಹಾಕಿಸಿದ್ದ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರನ್ನು ಪಕ್ಷಾತೀತವಾಗಿ ಶ್ಲಾಘಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>