<p><strong>ಮಾಲೂರು</strong>: ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಾಪಾಡಬೇಕು. ಜೊತೆಗೆ ಪ್ರವಾಸಿ ಕೇಂದ್ರವಾಗಿ ಮಾಡಬೇಕೆಂದು ಒತ್ತಾಯಿಸಿ ಡಾ.ವಿಷ್ಣು ಸೇನಾ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಧರಣಿ ನಡೆಸಿದರು.</p>.<p>ಕನ್ನಡಿಗರ ಮನಗೆದ್ದ ಸಾಹಸಸಿಂಹ ವಿಷ್ಣುವರ್ಧನ್ ತಮ್ಮ ಚಿತ್ರಗಳ ಮೂಲಕ ದೇಶಾದ್ಯಂತ ಪ್ರಖ್ಯಾತಿಯಾಗಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಕೆಲವರು ತಮ್ಮ ಭೂಮಿಯೆಂದು ರಾತ್ರೋರಾತ್ರಿ ಧ್ವಂಸ ಮಾಡಿರುವುದು ಅಭಿಮಾನಿಗಳಿಗೆ ನೋವು ತಂದಿದೆ ಎಂದು ಕಿಡಿಕಾರಿದರು.</p>.<p>ನಂತರ ಶಿರಸ್ತೆದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಹನುಮಂತಯ್ಯ, ವಿನಯ್ ಕುಮಾರ್, ಸುರೇಶ್, ಕೆ.ವೇಣು, ಸ್ವಾಮಿ, ಚಿಕ್ಕಾಪುರ ನಾರಾಯಣಸ್ವಾಮಿ, ಶಿವಯ್ಯ, ದಯಾನಂದ್, ನಾಣಿ, ರಾಜು, ಆಟೊ ಶ್ರೀನಿವಾಸ್, ಶ್ರೀಕಾಂತ್, ಪ್ರೇಮ್ ಕುಮಾರ್, ಎಸ್.ಎಂ.ವೆಂಕಟೇಶ್, ಸುದೀಪ್, ಅಶೋಕ್, ಮುನಿರಾಜು, ವಾಸು, ಜ್ವಾಲಾಮುಖಿ ಸತೀಶ್, ವಿ.ಶ್ರೀನಿವಾಸ್, ಶಿವಯ್ಯ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು</strong>: ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಾಪಾಡಬೇಕು. ಜೊತೆಗೆ ಪ್ರವಾಸಿ ಕೇಂದ್ರವಾಗಿ ಮಾಡಬೇಕೆಂದು ಒತ್ತಾಯಿಸಿ ಡಾ.ವಿಷ್ಣು ಸೇನಾ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಧರಣಿ ನಡೆಸಿದರು.</p>.<p>ಕನ್ನಡಿಗರ ಮನಗೆದ್ದ ಸಾಹಸಸಿಂಹ ವಿಷ್ಣುವರ್ಧನ್ ತಮ್ಮ ಚಿತ್ರಗಳ ಮೂಲಕ ದೇಶಾದ್ಯಂತ ಪ್ರಖ್ಯಾತಿಯಾಗಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಕೆಲವರು ತಮ್ಮ ಭೂಮಿಯೆಂದು ರಾತ್ರೋರಾತ್ರಿ ಧ್ವಂಸ ಮಾಡಿರುವುದು ಅಭಿಮಾನಿಗಳಿಗೆ ನೋವು ತಂದಿದೆ ಎಂದು ಕಿಡಿಕಾರಿದರು.</p>.<p>ನಂತರ ಶಿರಸ್ತೆದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಹನುಮಂತಯ್ಯ, ವಿನಯ್ ಕುಮಾರ್, ಸುರೇಶ್, ಕೆ.ವೇಣು, ಸ್ವಾಮಿ, ಚಿಕ್ಕಾಪುರ ನಾರಾಯಣಸ್ವಾಮಿ, ಶಿವಯ್ಯ, ದಯಾನಂದ್, ನಾಣಿ, ರಾಜು, ಆಟೊ ಶ್ರೀನಿವಾಸ್, ಶ್ರೀಕಾಂತ್, ಪ್ರೇಮ್ ಕುಮಾರ್, ಎಸ್.ಎಂ.ವೆಂಕಟೇಶ್, ಸುದೀಪ್, ಅಶೋಕ್, ಮುನಿರಾಜು, ವಾಸು, ಜ್ವಾಲಾಮುಖಿ ಸತೀಶ್, ವಿ.ಶ್ರೀನಿವಾಸ್, ಶಿವಯ್ಯ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>