ಭಾನುವಾರ ರಾತ್ರಿ ಸಾಕರಸನಹಳ್ಳಿಯಲ್ಲಿ ಕಾಡಾನೆ ದಾಳಿ ನಡೆಸಿದ್ದು, ಮುನಿಸ್ವಾಮಪ್ಪ ಎಂಬುವರ ಹೊಲದಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ನಾಶಪಡಿಸಿದೆ. ಜತೆಗೆ ಸೀತ ಭೈರಪ್ಪನವರ ತೆಂಗಿನ ಗಡಿ ಹಾಗೂ ಮುರಳಿ, ರಾಜಪ್ಪ ಅವರ ಹುಲ್ಲು ಬೆಳೆಯನ್ನೂ ನಾಶಪಡಿಸಿದೆ. ಇದರಿಂದ ಬರಗಾಲದಲ್ಲಿ ಬೆಳೆದಿದ್ದ ಬೆಳೆ ಫಸಲು ಬರುವ ಮುನ್ನಾವೇ ನಾಶವಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.