<p><strong>ಕೋಲಾರ:</strong> ‘ಕಲಿಕೆಯಲ್ಲಿ ಹಿಂದುಳಿದ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕಲಿಕಾ ಮಟ್ಟ ಉತ್ತಮಗೊಳಿಸಲು ‘ಓದು ಕರ್ನಾಟಕ‘ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಅನುಷ್ಠಾನಕ್ಕೆ ತಂದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರೇವಣಸಿದ್ದಪ್ಪ ತಿಳಿಸಿದರು.</p>.<p>ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕ್ಷೇತ್ರ ಸಿಬ್ಬಂದಿಗೆ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ, ಸರಳ ಗಣಿತ, ಪರಿಸರ ವಿಷಯದ ಕೌಶಲ ಅಭಿವೃದ್ಧಿಪಡಿಸಲಾಗಿದೆ’ ಎಂದರು.</p>.<p>‘ಮುಖ್ಯವಾಗಿ ಕಾಗುಣಿತ, ಒತ್ತಕ್ಷರ, ಪದ, ವಾಕ್ಯ ರಚನೆ, ಕಥೆ ಓದುವಿಕೆ ವಿಭಾಗ ಒಳಗೊಂಡಿದೆ. ಶಿಕ್ಷಕರು ಇಲಾಖೆ ನೀಡಿರುವ ಪರಿಕರಗಳನ್ನು ಬಳಸಿಕೊಂಡು ಕಲಿಕೆಯಲ್ಲಿ ಬಹಳ ಹಿಂದುಳಿದ ಮಕ್ಕಳನ್ನು ಗುರುತಿಸಿ ಕಲಿಕಾ ಮಟ್ಟ ಸುಧಾರಿಸಬೇಕು’ ಎಂದು ಹೇಳಿದರು.</p>.<p>‘60 ದಿನಗಳ ಓದು ಕರ್ನಾಟಕ ನೂರು ದಿನಗಳ ಓದು ಅಭಿಯಾನ ಕಾರ್ಯಕ್ರಮಗಳಿದ್ದು, ಇಲಾಖೆಯ ಎಲ್ಲಾ ಅಧಿಕಾರಿಗಳು ಒಳಗೊಂಡಂತೆ ಅನುಷ್ಠಾನಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ವಿವರಿಸಿದರು.</p>.<p>‘ವಿವಿಧ ಕಾರಣಗಳಿಂದ ಕೆಲ ಪ್ರದೇಶಗಳಲ್ಲಿ ಭಾಷೆ ಸಮಸ್ಯೆ ಇದ್ದರೂ ಸಹ ಓದು ಕರ್ನಾಟಕ ಬಹಳ ಉಪಯುಕ್ತವಾಗಿದೆ, ಸಿಬ್ಬಂದಿ ತರಬೇತಿಯ ನಂತರ ಶಾಲೆಗಳಲ್ಲಿ ಯಥಾವತ್ತಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸುವುದು ಕಾಲಕಾಲಕ್ಕೆ ಪ್ರಗತಿ ಗುರುತಿಸುವಂತಾಗಬೇಕು. ಮೇಲಾಧಿಕಾರಿಗಳಿಗೆ ಮಾಹಿತಿ ಕೊಡಬೇಕು’ ಎಂದು ಸೂಚಿಸಿದರು.</p>.<p>ಶಿಕ್ಷಣ ಸಂಯೋಜಕರಾದ ಆರ್ ಶ್ರೀನಿವಾಸನ್, ಮುನಿರತ್ನಯ್ಯ ಶೆಟ್ಟಿ, ವೆಂಕಟಾಚಲಪತಿ, ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ್, ನಾಗರಾಜ್, ಸವಿತಾ, ಮಂಜುಳಾ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ‘ಕಲಿಕೆಯಲ್ಲಿ ಹಿಂದುಳಿದ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕಲಿಕಾ ಮಟ್ಟ ಉತ್ತಮಗೊಳಿಸಲು ‘ಓದು ಕರ್ನಾಟಕ‘ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಅನುಷ್ಠಾನಕ್ಕೆ ತಂದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರೇವಣಸಿದ್ದಪ್ಪ ತಿಳಿಸಿದರು.</p>.<p>ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕ್ಷೇತ್ರ ಸಿಬ್ಬಂದಿಗೆ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ, ಸರಳ ಗಣಿತ, ಪರಿಸರ ವಿಷಯದ ಕೌಶಲ ಅಭಿವೃದ್ಧಿಪಡಿಸಲಾಗಿದೆ’ ಎಂದರು.</p>.<p>‘ಮುಖ್ಯವಾಗಿ ಕಾಗುಣಿತ, ಒತ್ತಕ್ಷರ, ಪದ, ವಾಕ್ಯ ರಚನೆ, ಕಥೆ ಓದುವಿಕೆ ವಿಭಾಗ ಒಳಗೊಂಡಿದೆ. ಶಿಕ್ಷಕರು ಇಲಾಖೆ ನೀಡಿರುವ ಪರಿಕರಗಳನ್ನು ಬಳಸಿಕೊಂಡು ಕಲಿಕೆಯಲ್ಲಿ ಬಹಳ ಹಿಂದುಳಿದ ಮಕ್ಕಳನ್ನು ಗುರುತಿಸಿ ಕಲಿಕಾ ಮಟ್ಟ ಸುಧಾರಿಸಬೇಕು’ ಎಂದು ಹೇಳಿದರು.</p>.<p>‘60 ದಿನಗಳ ಓದು ಕರ್ನಾಟಕ ನೂರು ದಿನಗಳ ಓದು ಅಭಿಯಾನ ಕಾರ್ಯಕ್ರಮಗಳಿದ್ದು, ಇಲಾಖೆಯ ಎಲ್ಲಾ ಅಧಿಕಾರಿಗಳು ಒಳಗೊಂಡಂತೆ ಅನುಷ್ಠಾನಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ವಿವರಿಸಿದರು.</p>.<p>‘ವಿವಿಧ ಕಾರಣಗಳಿಂದ ಕೆಲ ಪ್ರದೇಶಗಳಲ್ಲಿ ಭಾಷೆ ಸಮಸ್ಯೆ ಇದ್ದರೂ ಸಹ ಓದು ಕರ್ನಾಟಕ ಬಹಳ ಉಪಯುಕ್ತವಾಗಿದೆ, ಸಿಬ್ಬಂದಿ ತರಬೇತಿಯ ನಂತರ ಶಾಲೆಗಳಲ್ಲಿ ಯಥಾವತ್ತಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸುವುದು ಕಾಲಕಾಲಕ್ಕೆ ಪ್ರಗತಿ ಗುರುತಿಸುವಂತಾಗಬೇಕು. ಮೇಲಾಧಿಕಾರಿಗಳಿಗೆ ಮಾಹಿತಿ ಕೊಡಬೇಕು’ ಎಂದು ಸೂಚಿಸಿದರು.</p>.<p>ಶಿಕ್ಷಣ ಸಂಯೋಜಕರಾದ ಆರ್ ಶ್ರೀನಿವಾಸನ್, ಮುನಿರತ್ನಯ್ಯ ಶೆಟ್ಟಿ, ವೆಂಕಟಾಚಲಪತಿ, ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ್, ನಾಗರಾಜ್, ಸವಿತಾ, ಮಂಜುಳಾ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>