ಎಂ.ಜಿ.ಮಾರುಕಟ್ಟೆಯಲ್ಲಿ ಮಂಗಳವಾರ ಮಾರುಕಟ್ಟೆಯ ವರ್ತಕರ ಸಂಘ ಮತ್ತು ತರಕಾರಿ ಅಂಗಡಿ ಮಾಲೀಕರ ಜತೆ ಮಾತನಾಡಿದ ಶಾಸಕಿ ಎಂ.ರೂಪಕಲಾ, ಮಲೆಯಾಳಿ ಮೈದಾನದಲ್ಲಿಯೇ ಸಗಟು ವ್ಯಾಪಾರ ಮಾಡಬೇಕು. ಚಿಲ್ಲರೆ ವ್ಯಾಪಾರವನ್ನು ಮಾತ್ರ ಎಂ.ಜಿ.ಮಾರುಕಟ್ಟೆಯಲ್ಲಿ ಮಾರಬೇಕು. ಕೊರೊನಾ ವೈರಸ್ ಹರಡದಂತೆ ಎಲ್ಲ ಮುಂಜಾಗ್ರತೆ ವಹಿಸಿದರೆ ಅವಕಾಶ ನೀಡುವುದಾಗಿ ಹೇಳಿದರು.