ಚರ್ಮ ಗಂಟು ಕಾಯಿಲೆ ಬಗ್ಗೆ ರೈತರಿಗೆ ಸರಿಯಾದ ಮಾಹಿತಿಯಿಲ್ಲ. ರೋಗಕ್ಕೆ ತುತ್ತಾಗಿರುವ ಜಾನುವಾರುಗಳ ಮೈ ಮೇಲೆ ದೊಡ್ಡ ಗಂಟುಗಳಾಗಿದ್ದು, ಇದಕ್ಕೆ ಔಷಧ ಏನೆಂದು ಗೊತ್ತಿಲ್ಲ. ರೋಗಪೀಡಿತ ರಾಸುಗಳು ಮೃತಪಡುವ ಸಾಧ್ಯತೆ ಇರುವುದರಿಂದ ರೈತರಲ್ಲಿ ಭಯ ಹೆಚ್ಚಿದೆ. ಪಶು ವೈದಾಧಿಕಾರಿಗಳು ತಡ ಮಾಡದೆ ರಾಸುಗಳಿಗೆ ಚಿಕಿತ್ಸೆ ನೀಡಿ ರೈತರ ಆತಂಕ ದೂರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.