ಕಸಾಪ ಜಿಲ್ಲಾ ಘಟಕದಿಂದ ಗಡಿನಾಡು ರತ್ನ ಪ್ರಶಸ್ತಿ, ನಮ್ಮ ನಾಡು ಫೌಂಡೇಷನ್ ಹೊಯ್ಸಳ ರತ್ನ ಪ್ರಶಸ್ತಿ, ಕರುನಾಡು ಸೇವಕ ಮಯೂರ ರತ್ನ, ಕನ್ನಡ ರಣಧೀರ ಪಡೆಯಿಂದ ರಣಧೀರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ ಪರಿಸರ ಸಂರಕ್ಷಣೆ, ಉಳಿವಿಗೆ ಕೈಜೋಡಿಸಿದ್ದಾರೆ. ಇದುವರೆಗೂ 6 ಸಾವಿರ ಗಿಡ ವಿತರಿಸಿದ್ದಾರೆ. ಪುರಾತನ ಬಾವಿ, ಕಲ್ಯಾಣಿಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸಿದ್ದಾರೆ.