ಚನ್ನಯ್ಯ ಪ್ರತಿಮೆ ನಿರ್ಮಿಸಬೇಕು
ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿ ಅವರಿಗೆ ನೀಡುವಷ್ಟೇ ಗೌರವ ಮನ್ನಣೆ ಟಿ.ಚನ್ನಯ್ಯ ಅವರಿಗೂ ನೀಡಬೇಕು. ಅವರ ಪ್ರತಿಮೆಯನ್ನು ರಂಗಮಂದಿರ ಆವರಣದಲ್ಲಿ ನಿರ್ಮಿಸಬೇಕು. ಅವರ ನೆನಪು ಸದಾ ಉಳಿಯುವಂತಹ ಕಾರ್ಯಕ್ರಮಗಳನ್ನು ಸರ್ಕಾರದಿಂದಲೇ ಮಾಡಬೇಕು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಒತ್ತಾಯಿಸಿದರು.