<p><strong>ಬಂಗಾರಪೇಟೆ</strong>: ಮುರಿದ ಕಿಟಕಿ, ಬಾಗಿಲು, ಉದುರುತ್ತಿರುವ ಚಾವಣಿ ಸಿಮೆಂಟ್, ಬಿರುಕು ಬಿಟ್ಟ ಗೋಡೆ.. ಇದು ದೋಣಿಮಡಗು ಗ್ರಾಮ ಪಂಚಾಯಿತಿಯ ಸಾಕರಸನಹಳ್ಳಿ, ಕುಂದರಸನಹಳ್ಳಿ, ತಳೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ.</p>.<p>ಶಾಲಾ ಕಟ್ಟಡಗಳು ಸುಣ್ಣ, ಬಣ್ಣ ಕಂಡು ವರ್ಷಗಳು ಕಳೆದಿದ್ದು, ಮಳೆ ಬಂದರೆ ಚಾವಣಿಯಿಂದ ನೀರು ಸೋರುತ್ತಿದೆ. ಬಿರುಕು ಬಿಟ್ಟಿರುವ ಗೋಡೆಗಳು, ಕುಸಿಯುವ ಹಂತದಲ್ಲಿ ಶಾಲಾ ಕೊಠಡಿಗಳಿವೆ. ಹಾಗಾಗಿ ಶಾಲಾ ಮಕ್ಕಳು ಭಯದಿಂದ ಪಾಠ ಕೇಳುವಂತಾಗಿದೆ.</p>.<p>ಕಟ್ಟಡ ನೋಡಿದರೆ ಇದು ಶಾಲೆಯೋ ಅಥವಾ ಪಾಳು ಬಿದ್ದಿರುವ ಕಟ್ಟಡವೋ ಎಂಬ ಅನುಮಾನ ಮೂಡುವಂತಿದೆ. ಶೌಚಾಲಯಗಳು ಹೆಸರಿಗಿದ್ದರೂ, ಬಳಸಲು ಯೋಗ್ಯವಾಗಿಲ್ಲ. ಜತೆಗೆ ಸ್ವಚ್ಛಗೊಳಿಸದ ಕಾರಣ ದುರ್ವಾಸನೆಯಿಂದ ಕೂಡಿವೆ.</p>.<p>ತಾಲ್ಲೂಕಿನ ದೊಡ್ಡಪನ್ನಾಂಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಸಮರ್ಪಕವಾಗಿಲ್ಲದ್ದಕ್ಕೆ ಮಕ್ಕಳು ಬಯಲನ್ನು ಆಶ್ರಯಿಸುವಂತಾಗಿದೆ.</p>.<p><strong>ಶಾಲೆ ದುರಸ್ತಿಗೊಳಿಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಾವಣಿ ಉದುರುತ್ತಿದ್ದು ಮಕ್ಕಳು ಆತಂಕದಿಂದ ಪಾಠ ಕೇಳುವಂತಾಗಿದೆ. ಹಾಗಾಗಿ ಕೂಡಲೇ ದುರಸ್ತಿಗೊಳಿಸಬೇಕು</strong></p><p><strong>- ಸಂಪಂಗಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ</strong> </p><p><strong>ಶಿಕ್ಷಕರ ನೇಮಕಾತಿಯಾಗಲಿ ಗ್ರಾಮೀಣ ಭಾಗದ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದರ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರವು ಶಿಕ್ಷಕರ ನೇಮಕಾತಿ ಮಾಡಬೇಕು</strong></p><p><strong>- ಸುರೇಶ್ ಬಾಬು ಪೋಷಕ</strong> </p><p><strong>ತಾಲ್ಲೂಕಿನ ಗ್ರಾಮೀಣ ಪ್ರದೇಶದ ಶಿಥಿಲಾವ್ಯವಸ್ಥೆಯಲ್ಲಿರುವ ಎಲ್ಲಾ ಶಾಲೆಗಳಿಗೆ ಶೀಘ್ರದಲ್ಲೇ ಹೊಸ ಶಾಲಾ ಕಟ್ಟಡ ನಿರ್ಮಿಸಲು ಸೂಕ್ತ ಕ್ರಮ ವಹಿಸುತ್ತೇವೆ.</strong></p><p><strong>- ಸುಕನ್ಯಾ ಕ್ಷೇತ್ರ ಶಿಕ್ಷಣಾಧಿಕಾರಿ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ</strong>: ಮುರಿದ ಕಿಟಕಿ, ಬಾಗಿಲು, ಉದುರುತ್ತಿರುವ ಚಾವಣಿ ಸಿಮೆಂಟ್, ಬಿರುಕು ಬಿಟ್ಟ ಗೋಡೆ.. ಇದು ದೋಣಿಮಡಗು ಗ್ರಾಮ ಪಂಚಾಯಿತಿಯ ಸಾಕರಸನಹಳ್ಳಿ, ಕುಂದರಸನಹಳ್ಳಿ, ತಳೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ.</p>.<p>ಶಾಲಾ ಕಟ್ಟಡಗಳು ಸುಣ್ಣ, ಬಣ್ಣ ಕಂಡು ವರ್ಷಗಳು ಕಳೆದಿದ್ದು, ಮಳೆ ಬಂದರೆ ಚಾವಣಿಯಿಂದ ನೀರು ಸೋರುತ್ತಿದೆ. ಬಿರುಕು ಬಿಟ್ಟಿರುವ ಗೋಡೆಗಳು, ಕುಸಿಯುವ ಹಂತದಲ್ಲಿ ಶಾಲಾ ಕೊಠಡಿಗಳಿವೆ. ಹಾಗಾಗಿ ಶಾಲಾ ಮಕ್ಕಳು ಭಯದಿಂದ ಪಾಠ ಕೇಳುವಂತಾಗಿದೆ.</p>.<p>ಕಟ್ಟಡ ನೋಡಿದರೆ ಇದು ಶಾಲೆಯೋ ಅಥವಾ ಪಾಳು ಬಿದ್ದಿರುವ ಕಟ್ಟಡವೋ ಎಂಬ ಅನುಮಾನ ಮೂಡುವಂತಿದೆ. ಶೌಚಾಲಯಗಳು ಹೆಸರಿಗಿದ್ದರೂ, ಬಳಸಲು ಯೋಗ್ಯವಾಗಿಲ್ಲ. ಜತೆಗೆ ಸ್ವಚ್ಛಗೊಳಿಸದ ಕಾರಣ ದುರ್ವಾಸನೆಯಿಂದ ಕೂಡಿವೆ.</p>.<p>ತಾಲ್ಲೂಕಿನ ದೊಡ್ಡಪನ್ನಾಂಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಸಮರ್ಪಕವಾಗಿಲ್ಲದ್ದಕ್ಕೆ ಮಕ್ಕಳು ಬಯಲನ್ನು ಆಶ್ರಯಿಸುವಂತಾಗಿದೆ.</p>.<p><strong>ಶಾಲೆ ದುರಸ್ತಿಗೊಳಿಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಾವಣಿ ಉದುರುತ್ತಿದ್ದು ಮಕ್ಕಳು ಆತಂಕದಿಂದ ಪಾಠ ಕೇಳುವಂತಾಗಿದೆ. ಹಾಗಾಗಿ ಕೂಡಲೇ ದುರಸ್ತಿಗೊಳಿಸಬೇಕು</strong></p><p><strong>- ಸಂಪಂಗಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ</strong> </p><p><strong>ಶಿಕ್ಷಕರ ನೇಮಕಾತಿಯಾಗಲಿ ಗ್ರಾಮೀಣ ಭಾಗದ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದರ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರವು ಶಿಕ್ಷಕರ ನೇಮಕಾತಿ ಮಾಡಬೇಕು</strong></p><p><strong>- ಸುರೇಶ್ ಬಾಬು ಪೋಷಕ</strong> </p><p><strong>ತಾಲ್ಲೂಕಿನ ಗ್ರಾಮೀಣ ಪ್ರದೇಶದ ಶಿಥಿಲಾವ್ಯವಸ್ಥೆಯಲ್ಲಿರುವ ಎಲ್ಲಾ ಶಾಲೆಗಳಿಗೆ ಶೀಘ್ರದಲ್ಲೇ ಹೊಸ ಶಾಲಾ ಕಟ್ಟಡ ನಿರ್ಮಿಸಲು ಸೂಕ್ತ ಕ್ರಮ ವಹಿಸುತ್ತೇವೆ.</strong></p><p><strong>- ಸುಕನ್ಯಾ ಕ್ಷೇತ್ರ ಶಿಕ್ಷಣಾಧಿಕಾರಿ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>