<p><strong>ಕೆಜಿಎಫ್:</strong> ರಾಬರ್ಟ್ಸನ್ ಪೇಟೆಯಲ್ಲಿ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು. </p>.<p>ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ‘ಎತ್ತಿನಹೊಳೆ ಯೋಜನೆಯನ್ನು ಜೆಡಿಎಸ್ ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿದೆ. ಈ ಯೋಜನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಬದಲಿಗೆ ಕೃಷ್ಣಾ ನದಿ ನೀರನ್ನು ಕೋಲಾರ ಜಿಲ್ಲೆಗೆ ತರುವುದು ಉತ್ತಮ’ ಎಂದು ಪ್ರತಿಪಾದಿಸಿದರು. </p>.<p>ಎತ್ತಿನಹೊಳೆ ಯೋಜನೆ ಮೂಲಕ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯ ಭಾಗಗಳಿಗೆ ಕುಡಿಯುವ ನೀರು ಹರಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಇದೀಗ ಈ ಯೋಜನೆಯಡಿ ನೀರು ಬರುತ್ತದೆಯೊ ಇಲ್ಲವೊ ಎಂಬ ಭಾವನೆ ಈ ಮೂರು ಜಿಲ್ಲೆಗಳ ಜನರಲ್ಲಿ ಮೂಡಿದೆ. ₹12 ಸಾವಿರ ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನಾ ವೆಚ್ಚವು ಇದೀಗ ₹40 ಸಾವಿರ ಕೋಟಿ ವೆಚ್ಚಕ್ಕೆ ತಲುಪಿದೆ. ಇಷ್ಟಾಗಿಯೂ, ನೀರು ಹರಿಯಲಿದೆ ಎಂಬ ಖಾತ್ರಿ ಇನ್ನೂ ಇಲ್ಲ ಎಂದು ಹೇಳಿದರು. </p>.<p>ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಸದನದಲ್ಲಿ ಸುಳ್ಳು ಹೇಳಿದ್ದಾರೆ. ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. </p>.<p>‘ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಅಕ್ರಮವಾಗಿ ಬಳಸಲಾಗುತ್ತಿದೆ. ಹಣದ ದುರುಪಯೋಗ ಆಗಿದೆ. ಜನಸಾಮಾನ್ಯರಿಗೆ ಸರ್ಕಾರವು ಗ್ಯಾರಂಟಿ ಕೊಡಲಿ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಪರಿಶಿಷ್ಟರ ಹಣ ಬಳಸುವುದು ಸರಿಯಲ್ಲ’ ಎಂದರು. </p>.<p>ಬಿಜಿಎಂಎಲ್ ಸಮಸ್ಯೆಯನ್ನು ಬಗೆಹರಿಸಲು ಅಂದಿನ ಸಂಸದ ಕೆ.ಎಚ್.ಮುನಿಯಪ್ಪ ಯತ್ನಿಸಲಿಲ್ಲ. ಇಂದು ಅವರ ಕುಡಿ ಇಲ್ಲಿ ಶಾಸಕರಾಗಿದ್ದಾರೆ. ಅವರಿಗೆ ಸಮಸ್ಯೆ ಬಗೆಹರಿಸುವ ಮನಸ್ಸೇ ಇಲ್ಲ ಎಂಬಂತೆ ಕಾಣುತ್ತಿದೆ ಎಂದು ಮುಖಂಡ ರಮೇಶಬಾಬು ದೂರಿದರು. </p>.<p>ಈ ಮುನ್ನ ಜೆಡಿಎಸ್ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.</p>
<p><strong>ಕೆಜಿಎಫ್:</strong> ರಾಬರ್ಟ್ಸನ್ ಪೇಟೆಯಲ್ಲಿ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು. </p>.<p>ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ‘ಎತ್ತಿನಹೊಳೆ ಯೋಜನೆಯನ್ನು ಜೆಡಿಎಸ್ ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿದೆ. ಈ ಯೋಜನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಬದಲಿಗೆ ಕೃಷ್ಣಾ ನದಿ ನೀರನ್ನು ಕೋಲಾರ ಜಿಲ್ಲೆಗೆ ತರುವುದು ಉತ್ತಮ’ ಎಂದು ಪ್ರತಿಪಾದಿಸಿದರು. </p>.<p>ಎತ್ತಿನಹೊಳೆ ಯೋಜನೆ ಮೂಲಕ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯ ಭಾಗಗಳಿಗೆ ಕುಡಿಯುವ ನೀರು ಹರಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಇದೀಗ ಈ ಯೋಜನೆಯಡಿ ನೀರು ಬರುತ್ತದೆಯೊ ಇಲ್ಲವೊ ಎಂಬ ಭಾವನೆ ಈ ಮೂರು ಜಿಲ್ಲೆಗಳ ಜನರಲ್ಲಿ ಮೂಡಿದೆ. ₹12 ಸಾವಿರ ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನಾ ವೆಚ್ಚವು ಇದೀಗ ₹40 ಸಾವಿರ ಕೋಟಿ ವೆಚ್ಚಕ್ಕೆ ತಲುಪಿದೆ. ಇಷ್ಟಾಗಿಯೂ, ನೀರು ಹರಿಯಲಿದೆ ಎಂಬ ಖಾತ್ರಿ ಇನ್ನೂ ಇಲ್ಲ ಎಂದು ಹೇಳಿದರು. </p>.<p>ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಸದನದಲ್ಲಿ ಸುಳ್ಳು ಹೇಳಿದ್ದಾರೆ. ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. </p>.<p>‘ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಅಕ್ರಮವಾಗಿ ಬಳಸಲಾಗುತ್ತಿದೆ. ಹಣದ ದುರುಪಯೋಗ ಆಗಿದೆ. ಜನಸಾಮಾನ್ಯರಿಗೆ ಸರ್ಕಾರವು ಗ್ಯಾರಂಟಿ ಕೊಡಲಿ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಪರಿಶಿಷ್ಟರ ಹಣ ಬಳಸುವುದು ಸರಿಯಲ್ಲ’ ಎಂದರು. </p>.<p>ಬಿಜಿಎಂಎಲ್ ಸಮಸ್ಯೆಯನ್ನು ಬಗೆಹರಿಸಲು ಅಂದಿನ ಸಂಸದ ಕೆ.ಎಚ್.ಮುನಿಯಪ್ಪ ಯತ್ನಿಸಲಿಲ್ಲ. ಇಂದು ಅವರ ಕುಡಿ ಇಲ್ಲಿ ಶಾಸಕರಾಗಿದ್ದಾರೆ. ಅವರಿಗೆ ಸಮಸ್ಯೆ ಬಗೆಹರಿಸುವ ಮನಸ್ಸೇ ಇಲ್ಲ ಎಂಬಂತೆ ಕಾಣುತ್ತಿದೆ ಎಂದು ಮುಖಂಡ ರಮೇಶಬಾಬು ದೂರಿದರು. </p>.<p>ಈ ಮುನ್ನ ಜೆಡಿಎಸ್ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.</p>