ಸಾಲಗಾರರು, ಸಂಬಂಧಿಕರ ಕಿರುಕುಳದಿಂದ ಬೇಸರಗೊಂಡಿದ್ದ ನಂದಿತಾ ಮತ್ತು ಪ್ರಗತಿ ಅವರು ಮಂಗಳವಾರ ರಾತ್ರಿ ನರಸಾಪುರ ಬಳಿ ಬಂದು ಸೊಂಟಕ್ಕೆ ದುಪಟ್ಟ ಕಟ್ಟಿಕೊಂಡು ಒಟ್ಟಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಬೆಳಿಗ್ಗೆ ಕೆರೆಯಿಂದ ಮೃತರ ಶವ ಹೊರತೆಗೆದು ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.