<p><strong>ಮುಳಬಾಗಿಲು:</strong> ತಾಲ್ಲೂಕಿನ ಆವಣಿಯಲ್ಲಿ ಫೆಬ್ರುವರಿ 11ರ ಬುಧವಾರ ಆದಿಜಾಂಬವಂತ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಪ್ರಥಮ ಪೂಜಾ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ನಡೆಯಲಿವೆ.</p>.<p>ಜಾತ್ರೆಗೆ ಜನಸಾಮಾನ್ಯರು ಮತ್ತು ಭಕ್ತರು ಆಗಮಿಸಬೇಕು ಎಂದು ಆದಿಜಾಂಬವಂತ ದೇವಾಲಯ ಮತ್ತು ಮಠದ ಅಭಿವೃದ್ಧಿ ಸೇವಾ ಸಮಿತಿ ಟ್ರಸ್ಟ್ ಸಮಿತಿ ತಿಳಿಸಿದೆ. </p>.<p>ನಗರದ ಪ್ರವಾಸಿ ಮಂದಿರದಲ್ಲಿ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಸಮಿತಿಯವರು, ಆವಣಿಯ ಕಾಶಿ ವಿಶ್ವೇಶ್ವರಸ್ವಾಮಿ ರಥೋತ್ಸವಕ್ಕೂ ಮುನ್ನ ಆದಿ ಜಾಂಬವಂತ ಸ್ವಾಮಿ ಜಾತ್ರೆ ಹಾಗೂ ಪ್ರಥಮ ಪೂಜೆ ನಡೆಸುವುದು ವಾಡಿಕೆ. ಈ ಪ್ರಕಾರ ಬುಧವಾರ ನಡೆಯಲಿರುವ ಜಾತ್ರೆ ಹಾಗೂ ಪ್ರಥಮ ಪೂಜೆಗೆ ಹೆಚ್ಚಿನ ಸಂಖ್ಯೆ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು. </p>.<p>ಟ್ರಸ್ಟ್ ಅಧ್ಯಕ್ಷ ಕಗ್ಗಿನಹಳ್ಳಿ ಶ್ರೀನಿವಾಸ್, ಎಂ.ಎಸ್.ನಾರಾಯಣ ಸ್ವಾಮಿ, ಸಿ.ಆರ್.ಪಿ.ವೆಂಕಟೇಶ್, ಬಿ.ಮುನಿಯಪ್ಪ, ಎಂ.ವಿ.ನಾಗರಾಜ್, ಚಿಕ್ಕವೆಂಕಟಸ್ವಾಮಿ, ಚಂದ್ರಪ್ಪ, ಶೇಷಪ್ಪ, ಶ್ರೀನಿವಾಸ್, ನಟರಾಜ್, ಜಯಪ್ಪ, ಹನುಮಪ್ಪ, ನರಸಿ, ಚಲಪತಿ, ವೆಂಕಟರಾಮಪ್ಪ, ಸುರೇಶ್, ರೆಡ್ಡೆಪ್ಪ, ವೆಂಕಟೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ತಾಲ್ಲೂಕಿನ ಆವಣಿಯಲ್ಲಿ ಫೆಬ್ರುವರಿ 11ರ ಬುಧವಾರ ಆದಿಜಾಂಬವಂತ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಪ್ರಥಮ ಪೂಜಾ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ನಡೆಯಲಿವೆ.</p>.<p>ಜಾತ್ರೆಗೆ ಜನಸಾಮಾನ್ಯರು ಮತ್ತು ಭಕ್ತರು ಆಗಮಿಸಬೇಕು ಎಂದು ಆದಿಜಾಂಬವಂತ ದೇವಾಲಯ ಮತ್ತು ಮಠದ ಅಭಿವೃದ್ಧಿ ಸೇವಾ ಸಮಿತಿ ಟ್ರಸ್ಟ್ ಸಮಿತಿ ತಿಳಿಸಿದೆ. </p>.<p>ನಗರದ ಪ್ರವಾಸಿ ಮಂದಿರದಲ್ಲಿ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಸಮಿತಿಯವರು, ಆವಣಿಯ ಕಾಶಿ ವಿಶ್ವೇಶ್ವರಸ್ವಾಮಿ ರಥೋತ್ಸವಕ್ಕೂ ಮುನ್ನ ಆದಿ ಜಾಂಬವಂತ ಸ್ವಾಮಿ ಜಾತ್ರೆ ಹಾಗೂ ಪ್ರಥಮ ಪೂಜೆ ನಡೆಸುವುದು ವಾಡಿಕೆ. ಈ ಪ್ರಕಾರ ಬುಧವಾರ ನಡೆಯಲಿರುವ ಜಾತ್ರೆ ಹಾಗೂ ಪ್ರಥಮ ಪೂಜೆಗೆ ಹೆಚ್ಚಿನ ಸಂಖ್ಯೆ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು. </p>.<p>ಟ್ರಸ್ಟ್ ಅಧ್ಯಕ್ಷ ಕಗ್ಗಿನಹಳ್ಳಿ ಶ್ರೀನಿವಾಸ್, ಎಂ.ಎಸ್.ನಾರಾಯಣ ಸ್ವಾಮಿ, ಸಿ.ಆರ್.ಪಿ.ವೆಂಕಟೇಶ್, ಬಿ.ಮುನಿಯಪ್ಪ, ಎಂ.ವಿ.ನಾಗರಾಜ್, ಚಿಕ್ಕವೆಂಕಟಸ್ವಾಮಿ, ಚಂದ್ರಪ್ಪ, ಶೇಷಪ್ಪ, ಶ್ರೀನಿವಾಸ್, ನಟರಾಜ್, ಜಯಪ್ಪ, ಹನುಮಪ್ಪ, ನರಸಿ, ಚಲಪತಿ, ವೆಂಕಟರಾಮಪ್ಪ, ಸುರೇಶ್, ರೆಡ್ಡೆಪ್ಪ, ವೆಂಕಟೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>