‘ಸಂಘದ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತೇವೆ. ಪ್ರತಿ ತಿಂಗಳು ಎಲ್ಲಾ ಕಲಾವಿದರಿಗೆ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ನೀಡುತ್ತೇವೆ. ಗ್ರಾಮೀಣ ಭಾಗದ ಭಜನೆ ಕಲಾವಿದರು, ತತ್ವಪದಕಾರರು, ತಮಟೆ ಕಲಾವಿದರು, ಭರತನಾಟ್ಯ, ವೀರಗಾಸೆ ಕಲಾವಿದರನ್ನು ಸಂಘದ ವತಿಯಿಂದ ಸನ್ಮಾನಿಸುತ್ತೇವೆ. ಅವರಿಗೆ ಗೌರವ ಸಂಭಾವನೆ ಹಾಗೂ ಪ್ರಶಸ್ತಿಪತ್ರ ನೀಡುತ್ತೇವೆ’ ಎಂದು ಹೇಳಿದರು.