ಶ್ವೇತಪತ್ರ ಹೊರಡಿಸಿ: ‘ಬಂಬೂ ಬಜಾರ್ ಹಾಗೂ ಕ್ಲಾಕ್ಟವರ್ ಬಳಿಯ ಕುಂಟೆ, ಕಠಾರಿಪಾಳ್ಯದ ಬಿಂದುಮಾಳ್ಯಂ ಕಲ್ಯಾಣ ಮಂಟಪದ ಬಳಿಯಿದ್ದ ಹುಲ್ಲು ಮತ್ತು ಸೌದೆ ಮಾರುಕಟ್ಟೆ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡಿರುವುದು ಸಮಂಜಸವಲ್ಲ. ನಗರಸಭೆ ಆಸ್ತಿಗಳು ಒತ್ತುವರಿಯಾದರೂ ಕೇಳುವವರು ಇಲ್ಲ. ಸರ್ಕಾರಿ ಹಾಗೂ ನಗರಸಭೆ ಆಸ್ತಿಗಳನ್ನು ಗುರುತಿಸಿ ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.