ತಿಪ್ಪೇನಹಳ್ಳಿ ಗ್ರಾಮದ ರೈತರಾದ ಸೀತಾರಾಮ, ಮಂಜುನಾಥ್, ಶಿವಾನಂದ, ರಮೇಶ್, ನಾಗರಾಜ್ ಮತ್ತು ಎಂ.ರಮೇಶ್ ಅವರ ಹಿಪ್ಪು ನೇರಳೆ ತೋಟಕ್ಕೆ ವಿರೋಧಿಗಳು ವಿಷ ಸಿಂಪಡಣೆ ಮಾಡಿದ್ದರು. ಈ ಸಂಗತಿ ತಿಳಿಯದ ರೈತರು ಹಿಪ್ಪುನೇರಳೆ ಸೊಪ್ಪ ಕತ್ತರಿಸಿಕೊಂಡು ಬಂದು ರೇಷ್ಮೆ ಹುಳುಗಳಿಗೆ ಹಾಕಿದ್ದರು. ಈ ಸೊಪ್ಪು ತಿಂದ ಹುಳುಗಳು ಕ್ಷಣ ಮಾತ್ರದಲ್ಲಿ ಮೃತಪಟ್ಟಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.