<p><strong>ಶ್ರೀನಿವಾಸಪುರ:</strong> ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡಾರೆಡ್ಡಿ ಚೆರುವು ಸಮೀಪದ ಇಸ್ಪೀಟ್ ಅಡ್ಡೆ ಮೇಲೆ ಬುಧವಾರ ಸಂಜೆ ಪೊಲೀಸರು ದಾಳಿ ನಡೆಸಿದಾಗ ಭೀತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬರು ಗುಡಸವಾರಪಲ್ಲಿ ಕೆರೆಗೆ ಜಿಗಿದು ಸಾವನ್ನಪ್ಪಿದ್ದಾರೆ.</p>.<p>ತಾಲ್ಲೂಕಿನ ಗುರುವಲೊಳ್ಳಗಡ್ಡ ಗ್ರಾಮದ ನಿವಾಸಿ ನರಸಿಂಹ (45) ಮೃತ ವ್ಯಕ್ತಿ. ಗುರುವಾರ ಮೃತದೇಹ ಪತ್ತೆಯಾಗಿದೆ.</p>.<p>ಕೊಂಡಾರೆಡ್ಡಿ ಚೆರುವು ಸಮೀಪ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಯೊಂದರಲ್ಲಿ ಅಂದರ್ ಬಾಹರ್ ಆಟ ನಡೆಯುತಿತ್ತು ಎಂಬುದು ಗೊತ್ತಾಗಿದೆ. ಈ ಅಡ್ಡೆಗೆ ಸಮೀಪದ ಮೂಲ ಗೊಲ್ಲಪಲ್ಲಿ ಊರಹಬ್ಬದ ಬಂದೋಬಸ್ತ್ಗಾಗಿ ಪೊಲೀಸರು ಬಂದಿದ್ದರು. ಜಾತ್ರೆಗೆ ಬಂದ ಪೊಲೀಸರು ಮಾಹಿತಿ ತಿಳಿದು ಕೊಂಡಾರೆಡ್ಡಿ ಚೆರುವು ಗ್ರಾಮಕ್ಕೂ ಬಂದಿದ್ದಾರೆ.</p>.<p>ಪೊಲೀಸರ ದಾಳಿ ಹೆದರಿದ ಆರೋಪಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಈ ಪೈಕಿ ನರಸಿಂಹ ಎಂಬುವರು ಕೆರೆಗೆ ಜಿಗಿದಿದ್ದಾರೆ. ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.</p>.<p>ಮನೆಯಿಂದ ತೆರಳಿದ್ದ ನರಸಿಂಹ ವಾಪಸ್ ಬಾರದ ಕಾರಣ ಪತ್ನಿ ಸುಶೀಲಮ್ಮ ಹಾಗೂ ಕುಟುಂಬದವರು ಗಾಬರಿಯಾಗಿದ್ದಾರೆ. ನರಸಿಂಹ ಕೆರೆಯಲ್ಲಿ ಮುಳುಗಿ ಮೃತರಾಗಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ಬುಧವಾರ ರಾತ್ರಿಯೇ ಮೃತದೇಹ ಶೋಧಕ್ಕೆ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್, ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಕಾರ್ಯಾಚರಣೆ ಆರಂಭಿಸಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಗೆ ಮೃತ ದೇಹ ಪತ್ತೆಯಾಗಿದೆ. ಕೆರೆ ಪಕ್ಕ ದ್ವಿಚಕ್ರ ವಾಹನ ಇರುವುದು ಕಂಡುಬಂದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ:</strong> ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡಾರೆಡ್ಡಿ ಚೆರುವು ಸಮೀಪದ ಇಸ್ಪೀಟ್ ಅಡ್ಡೆ ಮೇಲೆ ಬುಧವಾರ ಸಂಜೆ ಪೊಲೀಸರು ದಾಳಿ ನಡೆಸಿದಾಗ ಭೀತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬರು ಗುಡಸವಾರಪಲ್ಲಿ ಕೆರೆಗೆ ಜಿಗಿದು ಸಾವನ್ನಪ್ಪಿದ್ದಾರೆ.</p>.<p>ತಾಲ್ಲೂಕಿನ ಗುರುವಲೊಳ್ಳಗಡ್ಡ ಗ್ರಾಮದ ನಿವಾಸಿ ನರಸಿಂಹ (45) ಮೃತ ವ್ಯಕ್ತಿ. ಗುರುವಾರ ಮೃತದೇಹ ಪತ್ತೆಯಾಗಿದೆ.</p>.<p>ಕೊಂಡಾರೆಡ್ಡಿ ಚೆರುವು ಸಮೀಪ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಯೊಂದರಲ್ಲಿ ಅಂದರ್ ಬಾಹರ್ ಆಟ ನಡೆಯುತಿತ್ತು ಎಂಬುದು ಗೊತ್ತಾಗಿದೆ. ಈ ಅಡ್ಡೆಗೆ ಸಮೀಪದ ಮೂಲ ಗೊಲ್ಲಪಲ್ಲಿ ಊರಹಬ್ಬದ ಬಂದೋಬಸ್ತ್ಗಾಗಿ ಪೊಲೀಸರು ಬಂದಿದ್ದರು. ಜಾತ್ರೆಗೆ ಬಂದ ಪೊಲೀಸರು ಮಾಹಿತಿ ತಿಳಿದು ಕೊಂಡಾರೆಡ್ಡಿ ಚೆರುವು ಗ್ರಾಮಕ್ಕೂ ಬಂದಿದ್ದಾರೆ.</p>.<p>ಪೊಲೀಸರ ದಾಳಿ ಹೆದರಿದ ಆರೋಪಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಈ ಪೈಕಿ ನರಸಿಂಹ ಎಂಬುವರು ಕೆರೆಗೆ ಜಿಗಿದಿದ್ದಾರೆ. ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.</p>.<p>ಮನೆಯಿಂದ ತೆರಳಿದ್ದ ನರಸಿಂಹ ವಾಪಸ್ ಬಾರದ ಕಾರಣ ಪತ್ನಿ ಸುಶೀಲಮ್ಮ ಹಾಗೂ ಕುಟುಂಬದವರು ಗಾಬರಿಯಾಗಿದ್ದಾರೆ. ನರಸಿಂಹ ಕೆರೆಯಲ್ಲಿ ಮುಳುಗಿ ಮೃತರಾಗಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ಬುಧವಾರ ರಾತ್ರಿಯೇ ಮೃತದೇಹ ಶೋಧಕ್ಕೆ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್, ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಕಾರ್ಯಾಚರಣೆ ಆರಂಭಿಸಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಗೆ ಮೃತ ದೇಹ ಪತ್ತೆಯಾಗಿದೆ. ಕೆರೆ ಪಕ್ಕ ದ್ವಿಚಕ್ರ ವಾಹನ ಇರುವುದು ಕಂಡುಬಂದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>