<p class="rtejustify"><strong>ಕೋಲಾರ: </strong>‘ಕೃಷಿ ಭೂಮಿಯ ಫಲವತ್ತತೆಗಾಗಿ ಕೆರೆಯ ಮಣ್ಣು ಕೊಂಡೊಯ್ದ ರೈತನಿಗೆ ಕೆಜಿಎಫ್ ತಹಶೀಲ್ದಾರ್ ₹ 72 ಸಾವಿರ ದಂಡ ವಿಧಿಸಿ ಅವರ ಸಾವಿಗೆ ಕಾರಣರಾಗಿದ್ದಾರೆ. ಹೀಗಾಗಿ ತಹಶೀಲ್ದಾರ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಶಾಸಕಿ ಎಂ.ರೂಪಕಲಾ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.</p>.<p class="rtejustify">ಇಲ್ಲಿ ಬುಧವಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರನ್ನು ಭೇಟಿಯಾದ ಶಾಸಕಿ, ‘ತಹಶೀಲ್ದಾರ್ ಸುಜಾತಾ ಅವರ ಅಮಾನವೀಯ ವರ್ತನೆ ರೈತ ಚಂಗಾರೆಡ್ಡಿ ಅವರನ್ನು ಬಲಿ ಪಡೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p class="rtejustify">‘ಕೆಜಿಎಫ್ ತಾಲ್ಲೂಕಿನ ಚಕ್ರಬಂಡೆ ಗ್ರಾಮದ ರೈತ ಚಂಗಾರೆಡ್ಡಿ ಅವರು ಅದೇ ಗ್ರಾಮದ ದೊಡ್ಡ ಕೆರೆಯಿಂದ ತಮ್ಮ ಜಮೀನಿಗಾಗಿ ಮಣ್ಣು ತೆಗೆಯುತ್ತಿದ್ದರು. ಆಗ ಸ್ಥಳಕ್ಕೆ ಹೋದ ತಹಶೀಲ್ದಾರ್ ಸುಜಾತಾ ಅವರು 2 ಟ್ರ್ಯಾಕ್ಟರ್ ಹಾಗೂ ಜೆಸಿಬಿ ವಾಹನವನ್ನು ವಶಕ್ಕೆ ಪಡೆದು ಪೊಲೀಸರಿಗೆ ದೂರು ನೀಡಿದ್ದರು. ಚಂಗಾರೆಡ್ಡಿ ಅವರು ವಾಹನಗಳನ್ನು ಬಿಡಿಸಿಕೊಳ್ಳಲು ದಲ್ಲಾಳಿ ಮೂಲಕ ತಹಶೀಲ್ದಾರ್ಗೆ ₹ 11 ಸಾವಿರ ಲಂಚ ಕೊಟ್ಟಿದ್ದರು’ ಎಂದು ಹೇಳಿದರು.</p>.<p class="rtejustify">‘ಆದರೂ ಸುಜಾತಾ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಕ ಚಂಗಾರೆಡ್ಡಿ ಅವರಿಗೆ ₹ 72 ಸಾವಿರ ದಂಡ ಹಾಕಿಸಿದ್ದರು. ದಂಡದ ಮೊತ್ತ ಕೇಳಿ ಆಘಾತಗೊಂಡ ಚಂಗಾರೆಡ್ಡಿ ಅವರು ಹೃದಯಾಘಾತದಿಂದ ಮೃತಪಟ್ಟರು. ಬಳಿಕ ಅವರ ಭಾಮೈದ ಅಶೋಕ್ರೆಡ್ಡಿ ಮೀಟರ್ ಬಡ್ಡಿಗೆ ಸಾಲ ಪಡೆದು ದಂಡ ಕಟ್ಟಿ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.</p>.<p class="rtejustify">‘ಚಂಗಾರೆಡ್ಡಿ ಅವರ ಸಾವಿಗೆ ತಹಶೀಲ್ದಾರ್ರ ಅಮಾನವೀಯ ವರ್ತನೆಯೇ ಕಾರಣ. ಮೃತ ರೈತನ ಕುಟುಂಬ ಸದಸ್ಯರು ಪಾವತಿಸಿರುವ ದಂಡದ ಮೊತ್ತವನ್ನು ವಾಪಸ್ ಕೊಡಬೇಕು ಮತ್ತು ಸುಜಾತಾ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.</p>.<p class="rtejustify">ಬೇಜವಾಬ್ದಾರಿ ವರ್ತನೆ: ‘ಕೆರೆಯಲ್ಲಿ ಮಣ್ಣು ತೆಗೆಯುವುದಕ್ಕೆ ಅನುಮತಿ ಪಡೆಯುವ ಬಗ್ಗೆ ಮಾಹಿತಿ ಇಲ್ಲದೆ ಚಂಗಾರೆಡ್ಡಿ ಅವರು ಕೃಷಿ ಜಮೀನಿಗಾಗಿ ಮಣ್ಣು ಕೊಂಡೊಯ್ಯಲು ಬಂದಿದ್ದರು. ಆಗ ತಹಶೀಲ್ದಾರ್ ಅವರು ದಾಳಿ ನಡೆಸಿ ವಾಸ್ತವಾಂಶ ತಿಳಿಯದೆ ಈ ರೀತಿ ತೊಂದರೆ ಉಂಟು ಮಾಡಿದ್ದಾರೆ. ತಹಶೀಲ್ದಾರ್ ಬೇಜವಾಬ್ದಾರಿ ವರ್ತನೆಯಿಂದ ಚಂಗಾರೆಡ್ಡಿ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ’ ಎಂದು ಆರೋಪಿಸಿದರು.</p>.<p class="rtejustify">‘ಮುಂಗಾರು ಮಳೆ ಆರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜಮೀನಿನ ಫಲವತ್ತತೆ ಕಾಪಾಡುವ ದೃಷ್ಟಿಯಿಂದ ಕೆರೆಯ ಮಣ್ಣನ್ನು ತೋಟಕ್ಕೆ ಸಾಗಿಸುವುದು ತಪ್ಪೇ?’ ಎಂದು ಪ್ರಶ್ನಿಸಿದರು.</p>.<p class="rtejustify">ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕೆರೆಗಳಲ್ಲಿ ಮಣ್ಣು ತೆಗೆಯುವುದಕ್ಕೆ ಗ್ರಾಮ ಪಂಚಾಯಿತಿಗಳಿಂದ ಅನುಮತಿ ನೀಡುವಂತಿಲ್ಲ. ಪಿಡಿಒಗಳು ಅನುಮತಿ ನೀಡಿದ್ದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದರು.</p>.<p class="rtejustify">ಹಣ ಕಟ್ಟುವಂತಿಲ್ಲ: ‘ರೈತರು ತಮ್ಮ ಕೃಷಿ ಜಮೀನುಗಳಿಗೆ ಮಣ್ಣು ಪಡೆಯಲು ಹಣ ಕಟ್ಟುವಂತಿಲ್ಲ. ಬದಲಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಟ್ಟಿಗೆ ಕಾರ್ಖಾನೆ ಸೇರಿದಂತೆ ವಾಣಿಜ್ಯ ಉದ್ದೇಶಕ್ಕೆ ಮಣ್ಣು ಬೇಕಿದ್ದರೆ ಪ್ರತಿ ಟನ್ಗೆ ₹ 90 ಶುಲ್ಕ ಪಾವತಿಸಬೇಕು’ ಎಂದು ಜಿಲ್ಲಾಧಿಕಾರಿ ವಿವರಿಸಿದರು.</p>.<p class="rtejustify">‘ರೈತ ಮೃತಪಟ್ಟಿರುವುದರಿಂದ ಮಾನವೀಯತೆ ದೃಷ್ಟಿಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಚಂಗಾರೆಡ್ಡಿ ಅವರ ಕುಟುಂಬಕ್ಕೆ ₹ 72 ಸಾವಿರ ವಾಪಸ್ ಕೊಡಿಸುತ್ತೇನೆ. ರೈತರ ವಿಷಯದಲ್ಲಿ ಇಂತಹ ಅಮಾನವೀಯ ವರ್ತನೆಗೆ ಅವಕಾಶವಿಲ್ಲದಂತೆ ಆದೇಶ ಹೊರಡಿಸುತ್ತೇವೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.</p>.<p class="rtejustify">ಮೃತ ರೈತ ಚಂಗಾರೆಡ್ಡಿ ಕುಟುಂಬ ಸದಸ್ಯರು, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="rtejustify"><strong>ಕೋಲಾರ: </strong>‘ಕೃಷಿ ಭೂಮಿಯ ಫಲವತ್ತತೆಗಾಗಿ ಕೆರೆಯ ಮಣ್ಣು ಕೊಂಡೊಯ್ದ ರೈತನಿಗೆ ಕೆಜಿಎಫ್ ತಹಶೀಲ್ದಾರ್ ₹ 72 ಸಾವಿರ ದಂಡ ವಿಧಿಸಿ ಅವರ ಸಾವಿಗೆ ಕಾರಣರಾಗಿದ್ದಾರೆ. ಹೀಗಾಗಿ ತಹಶೀಲ್ದಾರ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಶಾಸಕಿ ಎಂ.ರೂಪಕಲಾ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.</p>.<p class="rtejustify">ಇಲ್ಲಿ ಬುಧವಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರನ್ನು ಭೇಟಿಯಾದ ಶಾಸಕಿ, ‘ತಹಶೀಲ್ದಾರ್ ಸುಜಾತಾ ಅವರ ಅಮಾನವೀಯ ವರ್ತನೆ ರೈತ ಚಂಗಾರೆಡ್ಡಿ ಅವರನ್ನು ಬಲಿ ಪಡೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p class="rtejustify">‘ಕೆಜಿಎಫ್ ತಾಲ್ಲೂಕಿನ ಚಕ್ರಬಂಡೆ ಗ್ರಾಮದ ರೈತ ಚಂಗಾರೆಡ್ಡಿ ಅವರು ಅದೇ ಗ್ರಾಮದ ದೊಡ್ಡ ಕೆರೆಯಿಂದ ತಮ್ಮ ಜಮೀನಿಗಾಗಿ ಮಣ್ಣು ತೆಗೆಯುತ್ತಿದ್ದರು. ಆಗ ಸ್ಥಳಕ್ಕೆ ಹೋದ ತಹಶೀಲ್ದಾರ್ ಸುಜಾತಾ ಅವರು 2 ಟ್ರ್ಯಾಕ್ಟರ್ ಹಾಗೂ ಜೆಸಿಬಿ ವಾಹನವನ್ನು ವಶಕ್ಕೆ ಪಡೆದು ಪೊಲೀಸರಿಗೆ ದೂರು ನೀಡಿದ್ದರು. ಚಂಗಾರೆಡ್ಡಿ ಅವರು ವಾಹನಗಳನ್ನು ಬಿಡಿಸಿಕೊಳ್ಳಲು ದಲ್ಲಾಳಿ ಮೂಲಕ ತಹಶೀಲ್ದಾರ್ಗೆ ₹ 11 ಸಾವಿರ ಲಂಚ ಕೊಟ್ಟಿದ್ದರು’ ಎಂದು ಹೇಳಿದರು.</p>.<p class="rtejustify">‘ಆದರೂ ಸುಜಾತಾ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಕ ಚಂಗಾರೆಡ್ಡಿ ಅವರಿಗೆ ₹ 72 ಸಾವಿರ ದಂಡ ಹಾಕಿಸಿದ್ದರು. ದಂಡದ ಮೊತ್ತ ಕೇಳಿ ಆಘಾತಗೊಂಡ ಚಂಗಾರೆಡ್ಡಿ ಅವರು ಹೃದಯಾಘಾತದಿಂದ ಮೃತಪಟ್ಟರು. ಬಳಿಕ ಅವರ ಭಾಮೈದ ಅಶೋಕ್ರೆಡ್ಡಿ ಮೀಟರ್ ಬಡ್ಡಿಗೆ ಸಾಲ ಪಡೆದು ದಂಡ ಕಟ್ಟಿ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.</p>.<p class="rtejustify">‘ಚಂಗಾರೆಡ್ಡಿ ಅವರ ಸಾವಿಗೆ ತಹಶೀಲ್ದಾರ್ರ ಅಮಾನವೀಯ ವರ್ತನೆಯೇ ಕಾರಣ. ಮೃತ ರೈತನ ಕುಟುಂಬ ಸದಸ್ಯರು ಪಾವತಿಸಿರುವ ದಂಡದ ಮೊತ್ತವನ್ನು ವಾಪಸ್ ಕೊಡಬೇಕು ಮತ್ತು ಸುಜಾತಾ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.</p>.<p class="rtejustify">ಬೇಜವಾಬ್ದಾರಿ ವರ್ತನೆ: ‘ಕೆರೆಯಲ್ಲಿ ಮಣ್ಣು ತೆಗೆಯುವುದಕ್ಕೆ ಅನುಮತಿ ಪಡೆಯುವ ಬಗ್ಗೆ ಮಾಹಿತಿ ಇಲ್ಲದೆ ಚಂಗಾರೆಡ್ಡಿ ಅವರು ಕೃಷಿ ಜಮೀನಿಗಾಗಿ ಮಣ್ಣು ಕೊಂಡೊಯ್ಯಲು ಬಂದಿದ್ದರು. ಆಗ ತಹಶೀಲ್ದಾರ್ ಅವರು ದಾಳಿ ನಡೆಸಿ ವಾಸ್ತವಾಂಶ ತಿಳಿಯದೆ ಈ ರೀತಿ ತೊಂದರೆ ಉಂಟು ಮಾಡಿದ್ದಾರೆ. ತಹಶೀಲ್ದಾರ್ ಬೇಜವಾಬ್ದಾರಿ ವರ್ತನೆಯಿಂದ ಚಂಗಾರೆಡ್ಡಿ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ’ ಎಂದು ಆರೋಪಿಸಿದರು.</p>.<p class="rtejustify">‘ಮುಂಗಾರು ಮಳೆ ಆರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜಮೀನಿನ ಫಲವತ್ತತೆ ಕಾಪಾಡುವ ದೃಷ್ಟಿಯಿಂದ ಕೆರೆಯ ಮಣ್ಣನ್ನು ತೋಟಕ್ಕೆ ಸಾಗಿಸುವುದು ತಪ್ಪೇ?’ ಎಂದು ಪ್ರಶ್ನಿಸಿದರು.</p>.<p class="rtejustify">ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕೆರೆಗಳಲ್ಲಿ ಮಣ್ಣು ತೆಗೆಯುವುದಕ್ಕೆ ಗ್ರಾಮ ಪಂಚಾಯಿತಿಗಳಿಂದ ಅನುಮತಿ ನೀಡುವಂತಿಲ್ಲ. ಪಿಡಿಒಗಳು ಅನುಮತಿ ನೀಡಿದ್ದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದರು.</p>.<p class="rtejustify">ಹಣ ಕಟ್ಟುವಂತಿಲ್ಲ: ‘ರೈತರು ತಮ್ಮ ಕೃಷಿ ಜಮೀನುಗಳಿಗೆ ಮಣ್ಣು ಪಡೆಯಲು ಹಣ ಕಟ್ಟುವಂತಿಲ್ಲ. ಬದಲಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಟ್ಟಿಗೆ ಕಾರ್ಖಾನೆ ಸೇರಿದಂತೆ ವಾಣಿಜ್ಯ ಉದ್ದೇಶಕ್ಕೆ ಮಣ್ಣು ಬೇಕಿದ್ದರೆ ಪ್ರತಿ ಟನ್ಗೆ ₹ 90 ಶುಲ್ಕ ಪಾವತಿಸಬೇಕು’ ಎಂದು ಜಿಲ್ಲಾಧಿಕಾರಿ ವಿವರಿಸಿದರು.</p>.<p class="rtejustify">‘ರೈತ ಮೃತಪಟ್ಟಿರುವುದರಿಂದ ಮಾನವೀಯತೆ ದೃಷ್ಟಿಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಚಂಗಾರೆಡ್ಡಿ ಅವರ ಕುಟುಂಬಕ್ಕೆ ₹ 72 ಸಾವಿರ ವಾಪಸ್ ಕೊಡಿಸುತ್ತೇನೆ. ರೈತರ ವಿಷಯದಲ್ಲಿ ಇಂತಹ ಅಮಾನವೀಯ ವರ್ತನೆಗೆ ಅವಕಾಶವಿಲ್ಲದಂತೆ ಆದೇಶ ಹೊರಡಿಸುತ್ತೇವೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.</p>.<p class="rtejustify">ಮೃತ ರೈತ ಚಂಗಾರೆಡ್ಡಿ ಕುಟುಂಬ ಸದಸ್ಯರು, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>