ಚಂದ್ರಮೌಳೇಶ್ವರ ಅವರ ಸ್ಮರಣಾರ್ಥ ಮೆಕ್ಕೆ ವೃತ್ತದಲ್ಲಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ ಪ್ರತಿಭಟನಾಕಾರರು, ‘ತಹಶೀಲ್ದಾರ್ ಕೊಲೆ ಪ್ರಕರಣದಿಂದ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ತಹಶೀಲ್ದಾರ್ಗೆ ರಕ್ಷಣೆ ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪೊಲೀಸ್ ಇಲಾಖೆ ವೈಫಲ್ಯವೇ ಕೊಲೆಗೆ ಕಾರಣ’ ಎಂದು ಆರೋಪಿಸಿದರು.