ಈ ನಡುವೆ ಲಂಚ ಪ್ರಕರಣದಲ್ಲಿ ತಹಶೀಲ್ದಾರ್ ಸಹ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಅಮಾನತುಗೊಡಿರುವ ತಹಶೀಲ್ದಾರ್ರ ಕಾರು ಚಾಲಕ ಶ್ರೀನಿವಾಸ್, ತಾಲ್ಲೂಕು ಕಚೇರಿ ಡಿ ಗ್ರೂಪ್ ಸಿಬ್ಬಂದಿ ಚಂದ್ರು ಮತ್ತು ಜಗದೀಶ್ ಅವರು, ‘ತಹಶೀಲ್ದಾರ್ರ ಅಣತಿಯಂತೆ ಮರಳು ಮತ್ತು ಕಲ್ಲು ಸಾಗಣೆ ಲಾರಿಗಳನ್ನು ತಡೆದು ಲಂಚ ವಸೂಲಿ ಮಾಡುತ್ತಿದ್ದೆವು. ಲಂಚದಲ್ಲಿ ತಹಶೀಲ್ದಾರ್ಗೂ ಪಾಲು ಕೊಡುತ್ತಿದ್ದೆವು’ ಎಂದು ಗಂಭೀರ ಆರೋಪ ಮಾಡಿದ್ದಾರೆ.