<p><strong>ಬಂಗಾರಪೇಟೆ</strong>: ಪಟ್ಟಣದ ಕೆಂಪೇಗೌಡ ವೃತ್ತದಿಂದ ಕಣಿಂಬೆಲೆ, ಬ್ಯಾಡಬೆಲೆ, ಸೂಲಿಕುಂಟೆ ಮೂಲಕ ಮಾಲೂರಿನತ್ತ ಸಾಗುವ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲದೆ ಈ ರಸ್ತೆ ಸಂಚಾರ ಪ್ರಾಣಕ್ಕೆ ಸಂಚಕಾರ ತರುವಂತಿದೆ.</p>.<p>ರಸ್ತೆಯ ಡಾಂಬಾರು ಕಿತ್ತುಬಂದಿದ್ದು, ರಸ್ತೆಯ ಉದ್ದಕ್ಕೂ ದೊಡ್ಡ ಗುಂಡಿಗಳಿವೆ. ಮಳೆಯಾದರೆ ರಸ್ತೆ ಕೆಲವೆಡೆ ಕೆಸರುಗದ್ದೆಯಾಗುತ್ತದೆ. ಬಿಸಿಲು ಕಾದರೆ ದೂಳಿನ ಮಜ್ಜನವಾಗಲಿದೆ. ಮಾಲೂರು, ಬೆಂಗಳೂರಿನತ್ತ ಸಾಗುವ ಈ ರಸ್ತೆ ಬಹುತೇಕ ಗ್ರಾಮಗಳ ಮಧ್ಯೆ ಹಾದುಹೋಗಿದೆ. ರಸ್ತೆ ಅಂಚಿನ ಮನೆಗಳಿಗೆ ನಿತ್ಯ ದೂಳಿನ ಕಿರಿಕಿರಿ ಆಗುತ್ತಿದೆ. ದೊಡ್ಡ ಅಂಕಂಡಹಳ್ಳಿ, ಕಣಿಂಬೆಲೆ ಯಳವಳ್ಳಿಗೇಟ್, ಬ್ಯಾಡಬೆಲೆ ದಿನ್ನೆ, ಸಿದ್ದನಹಳ್ಳಿ ಗೇಟ್, ಸೂಲಿಕುಂಟೆ ಗ್ರಾಮಗಳ ಮಧ್ಯೆ ರಸ್ತೆ ಹಾದುಹೋಗಿದೆ. ಈ ಗ್ರಾಮಗಳಲ್ಲಿ ನಿತ್ಯ ದೂಳಿನ ಕಿರಿಕಿರಿ ತಪ್ಪಿದ್ದಲ್ಲ.</p>.<p>ಸೂಲಿಕುಂಟೆ ಗ್ರಾಮದ ಪಕ್ಕದಲ್ಲಿ ಬೆಂಗಳೂರು-ಚೆನೈ ಕಾರಿಡಾರ್ ಎಕ್ಸಪ್ರೆಸ್ ಹೈವೇ ಕಾಮಗಾರಿ ಪ್ರಗತಿಯಲ್ಲಿದೆ. ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ನಿತ್ಯ ಇಡೀ ಗ್ರಾಮದಲ್ಲಿ ದೂಳು ಆವರಿಸುತ್ತಿದೆ. ಅಸ್ತಮಾದಂತ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದಾರೆ.<br />ಸೂಲಿಕುಂಟೆ ಗ್ರಾಮದಲ್ಲಿ ಸುಮಾರು 600 ಮನೆಗಳಿವೆ. ರೇಷ್ಮೆ, ಹೈನುಗಾರಿಕೆ, ವಾಣಿಜ್ಯ ಬೆಳೆಗಳು ಬೆಳೆದಿದ್ದಾರೆ. ಕಾರಿಡಾರ್ ರಸ್ತೆ ಕಾಮಗಾರಿ ಅವೆಲ್ಲದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.</p>.<p>ಅಂಕುಡೊಂಕು ಹಾಗೂ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಆಗ್ಗಾಗ್ಗೆ ಅಪಘಾತಗಳು ಸಂಭವಿಸುತ್ತಲೆ ಇವೆ. ದ್ವಿಚಕ್ರ ವಾಹನ ಸಂಚಾರವಂತೂ ಪ್ರಯಾಸಕರ. ಪಟ್ಟಣದಿಂದ ವಡಿಗೇರಿ ದಿನ್ನೆವರೆಗಿನ 10 ಕಿ.ಮೀ ರಸ್ತೆ ಎಂದು ದುರಸ್ತಿ ಮಾಡುತ್ತಾರೋ ಎನ್ನುವ ಪ್ರಶ್ನೆ ಈ ಭಾಗದವರನ್ನು ಕಾಡುತ್ತಿದೆ.</p>.<p>ನ.19ರಂದು ಈ ರಸ್ತೆಯ ಮಾಗೇರಿ ಗ್ರಾಮದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಹೂಡಿದ್ದರು. ದೂಳು ಹೆಚ್ಚು ಎನ್ನುವ ಕಾರಣಕ್ಕೆ 10 ಕಿಲೋ ಮೀಟರ್ ರಸ್ತೆ ಉದ್ದಕ್ಕೂ ನೀರು ಹಾಕಿದ್ದರು.</p>.<p>ಪಕ್ಕದ ಕೆರೆಗಳಿಂದ ಮಣ್ಣು ತೆಗೆದು ಟಿಪ್ಪರ್ಗಳ ಮೂಲಕ ಕಾರಿಡಾರ್ ರಸ್ತೆಗೆ ಹಾಕಲಾಗುತ್ತಿದೆ. ನಿತ್ಯ ಟಿಪ್ಪರ್ ಸಂಚಾರದಿಂದ ಇಲ್ಲಿನ ರಸ್ತೆಗಳು ಸಂಪೂರ್ಣ ಕಿತ್ತುಬಂದಿದೆ. ಕಣಿಂಬೆಲೆ ಹಾಗೂ ಸೂಲಿಕುಂಟೆ ಗ್ರಾಮಗಳ ಒಳಗೆ ರಸ್ತೆಗಳು ಹೆಚ್ಚಾಗಿ ಕಿತ್ತು ಹೋಗಿದೆ. ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ನೀಡುವ ಈ ರಸ್ತೆಯಲ್ಲಿ ನಿತ್ಯ ಸಂಪರ್ಕ ದಟ್ಟಣೆಯಿಂದ ಕೂಡಿರುತ್ತದೆ.</p>.<p>ಸೂಲಿಕುಟೆ, ಸಿದ್ದನಹಳ್ಳಿ ಪಕ್ಕ ಬೆಂಗಳೂರು-ಚೆನೈ ಎಕ್ಪ್ರೆಸ್ ಕಾರಿಡಾರ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಅದು ಮುಗಿಯುವ ತನಕ ಈ ರಸ್ತೆ ಅಭಿವೃದ್ಧಿ ಕಷ್ಟಸಾಧ್ಯ. ಸಂಬಂಧಿಸಿದ ಇಲಾಖೆ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ ಎನ್ನುವುದು ಕ್ಷೇತ್ರ ಶಾಸಕರ<br />ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ</strong>: ಪಟ್ಟಣದ ಕೆಂಪೇಗೌಡ ವೃತ್ತದಿಂದ ಕಣಿಂಬೆಲೆ, ಬ್ಯಾಡಬೆಲೆ, ಸೂಲಿಕುಂಟೆ ಮೂಲಕ ಮಾಲೂರಿನತ್ತ ಸಾಗುವ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲದೆ ಈ ರಸ್ತೆ ಸಂಚಾರ ಪ್ರಾಣಕ್ಕೆ ಸಂಚಕಾರ ತರುವಂತಿದೆ.</p>.<p>ರಸ್ತೆಯ ಡಾಂಬಾರು ಕಿತ್ತುಬಂದಿದ್ದು, ರಸ್ತೆಯ ಉದ್ದಕ್ಕೂ ದೊಡ್ಡ ಗುಂಡಿಗಳಿವೆ. ಮಳೆಯಾದರೆ ರಸ್ತೆ ಕೆಲವೆಡೆ ಕೆಸರುಗದ್ದೆಯಾಗುತ್ತದೆ. ಬಿಸಿಲು ಕಾದರೆ ದೂಳಿನ ಮಜ್ಜನವಾಗಲಿದೆ. ಮಾಲೂರು, ಬೆಂಗಳೂರಿನತ್ತ ಸಾಗುವ ಈ ರಸ್ತೆ ಬಹುತೇಕ ಗ್ರಾಮಗಳ ಮಧ್ಯೆ ಹಾದುಹೋಗಿದೆ. ರಸ್ತೆ ಅಂಚಿನ ಮನೆಗಳಿಗೆ ನಿತ್ಯ ದೂಳಿನ ಕಿರಿಕಿರಿ ಆಗುತ್ತಿದೆ. ದೊಡ್ಡ ಅಂಕಂಡಹಳ್ಳಿ, ಕಣಿಂಬೆಲೆ ಯಳವಳ್ಳಿಗೇಟ್, ಬ್ಯಾಡಬೆಲೆ ದಿನ್ನೆ, ಸಿದ್ದನಹಳ್ಳಿ ಗೇಟ್, ಸೂಲಿಕುಂಟೆ ಗ್ರಾಮಗಳ ಮಧ್ಯೆ ರಸ್ತೆ ಹಾದುಹೋಗಿದೆ. ಈ ಗ್ರಾಮಗಳಲ್ಲಿ ನಿತ್ಯ ದೂಳಿನ ಕಿರಿಕಿರಿ ತಪ್ಪಿದ್ದಲ್ಲ.</p>.<p>ಸೂಲಿಕುಂಟೆ ಗ್ರಾಮದ ಪಕ್ಕದಲ್ಲಿ ಬೆಂಗಳೂರು-ಚೆನೈ ಕಾರಿಡಾರ್ ಎಕ್ಸಪ್ರೆಸ್ ಹೈವೇ ಕಾಮಗಾರಿ ಪ್ರಗತಿಯಲ್ಲಿದೆ. ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ನಿತ್ಯ ಇಡೀ ಗ್ರಾಮದಲ್ಲಿ ದೂಳು ಆವರಿಸುತ್ತಿದೆ. ಅಸ್ತಮಾದಂತ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದಾರೆ.<br />ಸೂಲಿಕುಂಟೆ ಗ್ರಾಮದಲ್ಲಿ ಸುಮಾರು 600 ಮನೆಗಳಿವೆ. ರೇಷ್ಮೆ, ಹೈನುಗಾರಿಕೆ, ವಾಣಿಜ್ಯ ಬೆಳೆಗಳು ಬೆಳೆದಿದ್ದಾರೆ. ಕಾರಿಡಾರ್ ರಸ್ತೆ ಕಾಮಗಾರಿ ಅವೆಲ್ಲದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.</p>.<p>ಅಂಕುಡೊಂಕು ಹಾಗೂ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಆಗ್ಗಾಗ್ಗೆ ಅಪಘಾತಗಳು ಸಂಭವಿಸುತ್ತಲೆ ಇವೆ. ದ್ವಿಚಕ್ರ ವಾಹನ ಸಂಚಾರವಂತೂ ಪ್ರಯಾಸಕರ. ಪಟ್ಟಣದಿಂದ ವಡಿಗೇರಿ ದಿನ್ನೆವರೆಗಿನ 10 ಕಿ.ಮೀ ರಸ್ತೆ ಎಂದು ದುರಸ್ತಿ ಮಾಡುತ್ತಾರೋ ಎನ್ನುವ ಪ್ರಶ್ನೆ ಈ ಭಾಗದವರನ್ನು ಕಾಡುತ್ತಿದೆ.</p>.<p>ನ.19ರಂದು ಈ ರಸ್ತೆಯ ಮಾಗೇರಿ ಗ್ರಾಮದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಹೂಡಿದ್ದರು. ದೂಳು ಹೆಚ್ಚು ಎನ್ನುವ ಕಾರಣಕ್ಕೆ 10 ಕಿಲೋ ಮೀಟರ್ ರಸ್ತೆ ಉದ್ದಕ್ಕೂ ನೀರು ಹಾಕಿದ್ದರು.</p>.<p>ಪಕ್ಕದ ಕೆರೆಗಳಿಂದ ಮಣ್ಣು ತೆಗೆದು ಟಿಪ್ಪರ್ಗಳ ಮೂಲಕ ಕಾರಿಡಾರ್ ರಸ್ತೆಗೆ ಹಾಕಲಾಗುತ್ತಿದೆ. ನಿತ್ಯ ಟಿಪ್ಪರ್ ಸಂಚಾರದಿಂದ ಇಲ್ಲಿನ ರಸ್ತೆಗಳು ಸಂಪೂರ್ಣ ಕಿತ್ತುಬಂದಿದೆ. ಕಣಿಂಬೆಲೆ ಹಾಗೂ ಸೂಲಿಕುಂಟೆ ಗ್ರಾಮಗಳ ಒಳಗೆ ರಸ್ತೆಗಳು ಹೆಚ್ಚಾಗಿ ಕಿತ್ತು ಹೋಗಿದೆ. ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ನೀಡುವ ಈ ರಸ್ತೆಯಲ್ಲಿ ನಿತ್ಯ ಸಂಪರ್ಕ ದಟ್ಟಣೆಯಿಂದ ಕೂಡಿರುತ್ತದೆ.</p>.<p>ಸೂಲಿಕುಟೆ, ಸಿದ್ದನಹಳ್ಳಿ ಪಕ್ಕ ಬೆಂಗಳೂರು-ಚೆನೈ ಎಕ್ಪ್ರೆಸ್ ಕಾರಿಡಾರ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಅದು ಮುಗಿಯುವ ತನಕ ಈ ರಸ್ತೆ ಅಭಿವೃದ್ಧಿ ಕಷ್ಟಸಾಧ್ಯ. ಸಂಬಂಧಿಸಿದ ಇಲಾಖೆ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ ಎನ್ನುವುದು ಕ್ಷೇತ್ರ ಶಾಸಕರ<br />ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>