ಕೆಜಿಎಫ್: ನಗರದ ಎಂ.ಎಲ್. ಬ್ಲಾಕ್ ಬಳಿ ಸೈನೈಡ್ ಗುಡ್ಡ ವೀಕ್ಷಿಸುತ್ತಿದ್ದ ಇಬ್ಬರು ಯುವಕರ ಮೇಲೆ ಮೂವರು ಅಪರಿಚಿತರು ದಾಳಿ ನಡೆಸಿ ಅವರ ಬಳಿ ಇದ್ದ ಮೊಬೈಲ್ ಮತ್ತು ಚಿನ್ನದ ಒಡವೆಗಳನ್ನು ದೋಚಿದ್ದಾರೆ.
ಬೆಂಗಳೂರು ಮೂಲದ ದರ್ಶನ್ ಮತ್ತು ಕಾರ್ತಿಕ್ ಎಂಬುವರು ಸೈನೈಡ್ ಗುಡ್ಡದ ಮೇಲೆ ಏರಿ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಅಪರಿಚಿತರು ಅವರನ್ನು ಅಡ್ಡಗಟ್ಟಿದ್ದಾರೆ. ದರ್ಶನ್ ಅವರ ತೋರುಬೆರಳಿಗೆ ಚಾಕುವಿನಲ್ಲಿ ತಿವಿದಿದ್ದಾರೆ.
ನಂತರ ಅವರ ಬಳಿ ಇದ್ದ ಮೂರು ಮೊಬೈಲ್, ಚಿನ್ನ, ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಇವುಗಳ ಮೊತ್ತ ಸುಮಾರು ₹ 92 ಸಾವಿರ ಆಗಿದೆ. ಊರಿಗಾಂ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.