‘ಈ ಹಿಂದೆ ರಾಜ್ಯದ ಕುಮಟಾ ಸೇರಿದಂತೆ ನೆರೆಯ ಆಂಧ್ರದ ನಲ್ಲೂರಿನಲ್ಲಿ ಸೀಗಡಿ ಬೆಳೆಸುತ್ತಿದ್ದರು. ಆದರೆ, ನಮ್ಮ ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸೀಗಡಿ ಬೆಳೆಸಲು ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ಮುಂದಾಗಿದ್ದಾರೆ. ನೂರು ದಿನಗಳಲ್ಲಿ ಸುಮಾರು 5 ಸಾವಿರ ಕೆಜಿ ಸೀಗಡಿ ಬೆಳೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯಡಿ ಸೀಗಡಿ ಬೆಳೆಗಾರರಿಗೆ ಬೇಕಾಗಿರುವ ಅಗತ್ಯ ಸವಲತ್ತುಗಳನ್ನು ಇಲಾಖೆ ನೀಡಲು ಸಿದ್ಧವಾಗಿದೆ’ ಎಂದರು.