ಮುಷ್ಟೂರು ಗ್ರಾಮದ ಕುಮಾರ್ ಕುಡಿದು ರಸ್ತೆಯಲ್ಲಿ ಬರುತ್ತಿದ್ದರು. ಆಕಸ್ಮಿಕವಾಗಿ ಬೈಕ್ಗೆ ಹಾವೊಂದು ಅಡ್ಡ ಬಂದಿದೆ. ನಶೆಯಲ್ಲಿದ್ದ ಕುಮಾರ್ ಅದನ್ನು ಹಿಡಿದು ಕೊರಳಿಗೆ ಸುತ್ತಿಕೊಂಡು ಊರಿನಮಧ್ಯಭಾಗಕ್ಕೆ ಬಂದು ಒಂದು ಕೈಯಲ್ಲಿ ಮದ್ಯದ ಬಾಟಲ್ ಮತ್ತೊಂದು ಕೈಯಲ್ಲಿ ಹಾವನ್ನು ಹಿಡಿದುಕೊಂಡು ಸ್ವಲ್ಪ ಹೊತ್ತು ನಿಂತಿದ್ದರು. ನಂತರ ಬಾಟಲ್ನಲ್ಲಿದ್ದ ಮದ್ಯ ಸಂಪೂರ್ಣ ಕುಡಿದು ಹಾವನ್ನು ಎರಡೂ ಕೈಗಳಲ್ಲಿ ಹಿಡಿದು ಕಬ್ಬಿನ ಜಲ್ಲೆಯನ್ನು ಸೀಳಿದಂತೆ ಕಚ್ಚಿ ಕಚ್ಚಿ ಬಿಸಾಡಿದರು.