ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮತ್ತಿನ ನಶೆಯಲ್ಲಿ ಹಾವು ಕಚ್ಚಿದ ಭೂಪ!

Last Updated 6 ಮೇ 2020, 2:45 IST
ಅಕ್ಷರ ಗಾತ್ರ

ನಂಗಲಿ (ಕೋಲಾರ): ಕುಡಿದ ಮತ್ತಿನಲ್ಲಿದ್ದ ಯುವಕ, ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಹಾವನ್ನು ಹಿಡಿದು ಕಚ್ಚಿ ಬಿಸಾಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮುಷ್ಟೂರು ಗ್ರಾಮದ ಕುಮಾರ್ ಕುಡಿದು ರಸ್ತೆಯಲ್ಲಿ ಬರುತ್ತಿದ್ದರು. ಆಕಸ್ಮಿಕವಾಗಿ ಬೈಕ್‌ಗೆ ಹಾವೊಂದು ಅಡ್ಡ ಬಂದಿದೆ. ನಶೆಯಲ್ಲಿದ್ದ ಕುಮಾರ್‌ ಅದನ್ನು ಹಿಡಿದು ಕೊರಳಿಗೆ ಸುತ್ತಿಕೊಂಡು ಊರಿನಮಧ್ಯಭಾಗಕ್ಕೆ ಬಂದು ಒಂದು ಕೈಯಲ್ಲಿ ಮದ್ಯದ ಬಾಟಲ್ ಮತ್ತೊಂದು ಕೈಯಲ್ಲಿ ಹಾವನ್ನು ಹಿಡಿದುಕೊಂಡು ಸ್ವಲ್ಪ ಹೊತ್ತು ನಿಂತಿದ್ದರು. ನಂತರ ಬಾಟಲ್‌ನಲ್ಲಿದ್ದ ಮದ್ಯ ಸಂಪೂರ್ಣ ಕುಡಿದು ಹಾವನ್ನು ಎರಡೂ ಕೈಗಳಲ್ಲಿ ಹಿಡಿದು ಕಬ್ಬಿನ ಜಲ್ಲೆಯನ್ನು ಸೀಳಿದಂತೆ ಕಚ್ಚಿ ಕಚ್ಚಿ ಬಿಸಾಡಿದರು.

ಈ ದೃಶ್ಯವನ್ನು ಗ್ರಾಮಸ್ಥರು ಮೂಕ ಪ್ರೇಕ್ಷಕರಂತೆ ನೋಡುತ್ತ ಮೊಬೈಲ್‌ಗಳಲ್ಲಿ ವಿಡಿಯೊಮಾಡಿ, ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಸುಮಾರು ಐದು ನಿಮಿಷ ಹಾವನ್ನು ಕಚ್ಚಿ ಹಾಕಿದ ಯುವಕ ನಂತರ ಊರಿನ ಬಾಗಿಲು ಮುಚ್ಚಿದ್ದ ಒಂದು ಅಂಗಡಿ ಮುಂದೆ ಮಲಗಿ ವಿಶ್ರಾಂತಿ ಪಡೆದಿದ್ದಾರೆ. ಆರೋಗ್ಯಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT