<p><strong>ಕೋಲಾರ:</strong> ‘ಶ್ರೀಕೃಷ್ಣ ದುಷ್ಟ ಶಿಕ್ಷಕ ಹಾಗೂ ಶಿಷ್ಟ ರಕ್ಷಕ. ಜಗತ್ತಿನಲ್ಲಿ ಅನ್ಯಾಯ ಮಾಡುವವರನ್ನು ಶಿಕ್ಷಿಸಿ ಒಳ್ಳೆಯವರನ್ನು ಕಾಪಾಡುತ್ತಾನೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.</p>.<p>ಇಲ್ಲಿ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೃಷ್ಣ ಸ್ತ್ರೀ ವ್ಯಾಮೋಹಿಯಲ್ಲ. ಏಕೆಂದರೆ ಕೃಷ್ಣನು ತಾನಾಗಿಯೇ ಹೋಗಿ ಮದುವೆಯಾಗಲಿಲ್ಲ. ಬದಲಿಗೆ 16 ಸಾವಿರ ಗೋಪಿಕೆಯರು ಕೃಷ್ಣನೇ ತಮ್ಮ ಗಂಡನೆಂದು ಒಪ್ಪಿಕೊಂಡು ಹಿಂದೆ ಬಂದರು’ ಎಂದರು.</p>.<p>‘ಕೃಷ್ಣನು ತಾಯಿಗೆ ಮಗನಾಗಿ, ಅಣ್ಣನಿಗೆ ತಮ್ಮನಾಗಿ, ಹೆಂಡತಿಯರಿಗೆ ಒಳ್ಳೆಯ ಪತಿಯಾಗಿ, ಸ್ನೇಹಿತರಿಗೆ ಒಳ್ಳೆಯ ಸ್ನೇಹಿತನಾಗಿ ಪರಿಪೂರ್ಣ ಜೀವನ ನಡೆಸಿದ. ಆದ್ದರಿಂದ ಕೃಷ್ಣನನ್ನು ಫೋಟೋದಲ್ಲಿ ನೋಡದೆ ಮಗನಲ್ಲಿ, ಸ್ನೇಹಿತರಲ್ಲಿ, ಪತಿಯಲ್ಲಿ ಕಾಣಬೇಕು’ ಎಂದು ತಿಳಿಸಿದರು.</p>.<p>ಜಿಲ್ಲಾ ಯಾದವ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗೆ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಿದರು. ಹರಿಕಥೆ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ ವಿಶೇಷ ಉಪನ್ಯಾಸ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಯಾದವ ಸಮುದಾಯದ ಮುಖಂಡರು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ‘ಶ್ರೀಕೃಷ್ಣ ದುಷ್ಟ ಶಿಕ್ಷಕ ಹಾಗೂ ಶಿಷ್ಟ ರಕ್ಷಕ. ಜಗತ್ತಿನಲ್ಲಿ ಅನ್ಯಾಯ ಮಾಡುವವರನ್ನು ಶಿಕ್ಷಿಸಿ ಒಳ್ಳೆಯವರನ್ನು ಕಾಪಾಡುತ್ತಾನೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.</p>.<p>ಇಲ್ಲಿ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೃಷ್ಣ ಸ್ತ್ರೀ ವ್ಯಾಮೋಹಿಯಲ್ಲ. ಏಕೆಂದರೆ ಕೃಷ್ಣನು ತಾನಾಗಿಯೇ ಹೋಗಿ ಮದುವೆಯಾಗಲಿಲ್ಲ. ಬದಲಿಗೆ 16 ಸಾವಿರ ಗೋಪಿಕೆಯರು ಕೃಷ್ಣನೇ ತಮ್ಮ ಗಂಡನೆಂದು ಒಪ್ಪಿಕೊಂಡು ಹಿಂದೆ ಬಂದರು’ ಎಂದರು.</p>.<p>‘ಕೃಷ್ಣನು ತಾಯಿಗೆ ಮಗನಾಗಿ, ಅಣ್ಣನಿಗೆ ತಮ್ಮನಾಗಿ, ಹೆಂಡತಿಯರಿಗೆ ಒಳ್ಳೆಯ ಪತಿಯಾಗಿ, ಸ್ನೇಹಿತರಿಗೆ ಒಳ್ಳೆಯ ಸ್ನೇಹಿತನಾಗಿ ಪರಿಪೂರ್ಣ ಜೀವನ ನಡೆಸಿದ. ಆದ್ದರಿಂದ ಕೃಷ್ಣನನ್ನು ಫೋಟೋದಲ್ಲಿ ನೋಡದೆ ಮಗನಲ್ಲಿ, ಸ್ನೇಹಿತರಲ್ಲಿ, ಪತಿಯಲ್ಲಿ ಕಾಣಬೇಕು’ ಎಂದು ತಿಳಿಸಿದರು.</p>.<p>ಜಿಲ್ಲಾ ಯಾದವ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗೆ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಿದರು. ಹರಿಕಥೆ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ ವಿಶೇಷ ಉಪನ್ಯಾಸ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಯಾದವ ಸಮುದಾಯದ ಮುಖಂಡರು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>