ಕಾಮಗಾರಿಗೆ 2017ರ ಡಿಸೆಂಬರ್ನಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಕಾಮಗಾರಿಯನ್ನು 2018ರ ನವೆಂಬರ್ನಲ್ಲಿ ಮುಗಿಸಬೇಕಾಗಿತ್ತು. ಗುಜರಾತ್ ಮೂಲದವರು ರಸ್ತೆ ಅಭಿವೃದ್ಧಿ ಟೆಂಡರ್ ತೆಗೆದುಕೊಂಡಿದ್ದರು. ಗುತ್ತಿಗೆದಾರರು ₹ 18 ಕೋಟಿಯಷ್ಟು ಕಾಮಗಾರಿ ನಡೆಸಿದ್ದರೂ, ಸರ್ಕಾರ ಕೇವಲ ₹ 6 ಕೋಟಿ ಪಾವತಿ ಮಾಡಿದೆ. ಬಾಕಿ ಇರುವ ಹಣವನ್ನು ಕೂಡಲೇ ಮಂಜೂರು ಮಾಡಿ ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಚಿವರನ್ನು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಹಣ ಬಿಡುಗಡೆಯಾಗಿಲ್ಲ. ಹಣ ನೀಡದೆ ಕಾಮಗಾರಿ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ ಎಂದು ವಿವರಿಸಿದ್ದಾರೆ.