ಮುಳಬಾಗಿಲು | ಸಂಚಾರ ದಟ್ಟಣೆ ನಿವಾರಣೆಗೆ ಕಠಿಣ ಕ್ರಮ: ನಿಯಮ ಉಲ್ಲಂಘಿಸಿದರೆ ದಂಡ
ಕೆ.ತ್ಯಾಗರಾಜಪ್ಪ ಕೊತ್ತೂರು
Published : 19 ಸೆಪ್ಟೆಂಬರ್ 2024, 6:07 IST
Last Updated : 19 ಸೆಪ್ಟೆಂಬರ್ 2024, 6:07 IST
ಫಾಲೋ ಮಾಡಿ
Comments
ಮುಳಬಾಗಿಲು ನಗರದ ರಸ್ತೆಯೊಂದರಲ್ಲಿ ವ್ಯವಸ್ಥಿತವಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದು
ರಸ್ತೆ ಬದಿಯ ಅಂಗಡಿಗಳ ತೆರವು
ಎಂ.ಸಿ.ರಸ್ತೆ ಬಜಾರು ಬೀದಿ ಕೆಇಬಿ ವೃತ್ತ ಬಸ್ ನಿಲ್ದಾಣದ ರಸ್ತೆ ಟಿಎಪಿಸಿಎಂಎಸ್ ರಸ್ತೆಗಳ ಬದಿಗಳಲ್ಲಿ ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಮತ್ತು ವಹಿವಾಟುಗಳನ್ನು ನಡೆಸುತ್ತಿದ್ದರು. ಇದರಿಂದಾಗಿ ಸಾರ್ವಜನಿಕರು ಮತ್ತು ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿತ್ತು. ಈ ಸಮಸ್ಯೆಯನ್ನು ತಪ್ಪಿಸಲು ಪಾದಚಾರಿ ಮಾರ್ಗಗಳಲ್ಲಿ ಇಟ್ಟುಕೊಳ್ಳಲಾಗಿದ್ದ ತರಕಾರಿ ಹಣ್ಣು ವೀಳ್ಯದೆಲೆ ಹೂವು ಸುಣ್ಣದ ಕಲ್ಲು ಸೇರಿದಂತೆ ಇನ್ನಿತರ ವ್ಯಾಪಾರಿಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಇದರಿಂದಾಗಿ ರಸ್ತೆಗಳು ವಿಶಾಲವಾದಂತೆ ಕಂಡುಬರುತ್ತಿದೆ. ಆದರೆ ಅಂಗಡಿಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಸಣ್ಣಪುಟ್ಟ ವ್ಯಾಪಾರಿಗಳು ಚಿಂತಿತರಾಗಿದ್ದಾರೆ.