ಕುಪ್ಪಹಳ್ಳಿ ಗ್ರಾಮಕ್ಕೆ ಸಮೀಪದ ಕೋನೇಟಿ ತಮ್ಮನಹಳ್ಳಿ ಗ್ರಾಮದ ರತ್ನಮ್ಮ(30) ಮಾನಸಿಕ ಅಸ್ವಸ್ಥರಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು. ಮಕ್ಕಳೊಂದಿಗೆ ಕುಪ್ಪಹಳ್ಳಿ ಗ್ರಾಮದ ಸಮೀಪ ಹೋಗಿ, ಮಂಜುನಾಥ್ ಎಂಬುವವರ ಕೃಷಿ ಹೊಂಡಕ್ಕೆ ಮಕ್ಕಳನ್ನು ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಹಿಳೆಯ ಪತಿ ಚಿಕ್ಕರೆಡ್ಡಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.