ಶಾಲೆಯಲ್ಲಿ ಕೊಠಡಿಗಳ ಸಮಸ್ಯೆಯಿದ್ದು ಎರಡು ಮೂರು ತರಗತಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸುವಂತಾಗಿದೆ. ಜತೆಗೆ ಶುದ್ಧ ಕುಡಿಯುವ ನೀರಿನ ಯಂತ್ರ ರಿಪೇರಿಯಾಗಿ ಮೂಲೆಗೆ ಬಿದ್ದಿದೆ. ಮಕ್ಕಳು ಊಟ ಮಾಡಲು ಸ್ಥಳಾವಕಾಶವೇ ಇಲ್ಲವಾಗಿದೆ. ನಗರಸಭೆಯಿಂದ ₹ 100 ನೀಡಿ ನೀರು ತರಿಸಿಕೊಳ್ಳುತ್ತೇವೆ. ತಡವಾಗಿದ್ದರೆ ಖಾಸಗಿಯವರಿಗೆ ₹600 ನೀಡಿ ನೀರನ್ನು ಕೊಂಡು ಬಳಸುವಂತಾಗಿದೆ. ನಾಗರತ್ನಮ್ಮ ಮುಖ್ಯ ಶಿಕ್ಷಕಿ === ನಾಲ್ಕು ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ ತಾಲ್ಲೂಕಿನಲ್ಲಿ ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡಲು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. 60 ಶಾಲೆಗಳು ದುರಸ್ತಿಗೆ ಒಳಗಾಗಿದ್ದರೆ ಒಟ್ಟು ತಾಲ್ಲೂಕಿನಲ್ಲಿ 116 ಕೊಠಡಿಗಳು ದುರಸ್ತಿಗೆ ಪಟ್ಟಿ ಮಾಡಲಾಗಿದೆ. ಬಾಂಗ್ಲಾ ಶಾಲೆಯ ನಾಲ್ಕು ಕೊಠಡಿಗಳನ್ನು ನೂತನವಾಗಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆ.ಆರ್.ಗಂಗರಾಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ