ಮುಷ್ಟೂರು ಗ್ರಾಮದ ನಾಗಮಣಿ ಮತ್ತು ವಿಜಯಮ್ಮ, ಪೆದ್ದೂರು ಗ್ರಾಮದ ಸೂರ್ಯನಾರಾಯಣಪ್ಪ ಎಂಬುವರ ಮನೆಗಳು ಕುಸಿದು ಬಿದ್ದಿವೆ. ಮನೆಯಲ್ಲಿದ್ದ ದಿನಸಿ ಮತ್ತು ಇತರೆ ವಸ್ತುಗಳು ನಾಶಗೊಂಡಿವೆ. ಸೂರ್ಯನಾರಾಯಣಪ್ಪ ಅವರ ಕಾಲು ಮುರಿದಿದೆ.ಬೈರಕೂರು ಗ್ರಾಮದ ರಾಮಾಂಜಿ ಎಂಬುವರ ಮೂರು ಎಕರೆ ಬಾಳೆ ತೋಟ ಸಂಪೂರ್ಣವಾಗಿ ಕೆಳಗೆ ಬಿದ್ದಿದೆ. ಇದರಿಂದಾಗಿ ಸುಮಾರು ₹ 5 ಲಕ್ಷ ನಷ್ಟವಾಗಿದೆ ಎಂದು ರೈತ ರಾಮಾಂಜಿ ತಿಳಿಸಿದರು.