ಪ್ರಭಾರಿ ಪ್ರಾಂಶುಪಾಲೆ ಪ್ರೊ.ಬೃಂದಾದೇವಿ ಮಾತನಾಡಿ, ‘ವಿವೇಕಾನಂದರು ಚಿಕಾಗೂ ಧಾರ್ಮಿಕ ಸಮ್ಮೇಳನದ ಸಭೆ ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ ಎಂದು ಸಂಬೋಧಿಸಿದರು. ಯಾವುದೇ ಒಂದು ಧರ್ಮವನ್ನು ಶ್ರೇಷ್ಠ ಧರ್ಮವೆಂದು ಬಿಂಬಿಸುವುದು ಅಪಾಯಕಾರಿಯಾಗಿದೆ. ಹಿಂದು ಧರ್ಮದಲ್ಲಿ ಹೆಚ್ಚಿನ ಸತ್ವತೆ ಇದೆ ಎಂಬುದನ್ನು ಪರಿಚಯಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.