<p><strong>ಮಾಲೂರು:</strong> ಯುಗಾದಿ ಹಬ್ಬದ ದಿನಕ್ಕೆ ಟೇಕಲ್ ಹೋಬಳಿಯ ಉಳ್ಳೇರಹಳ್ಳಿ ಭೂತಮ್ಮನ ಬೆಟ್ಟದಲ್ಲಿ ಜ್ಯೋತಿ ಬೆಳಗಿಸಲು ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಬುಧವಾರ ಕಾಲುದಾರಿ ನಿರ್ಮಿಸುವ ವೇಳೆ ಬೆಂಕಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.</p>.<p>ಉಳ್ಳೇರಹಳ್ಳಿ ಗ್ರಾಮದ ನಿಕ್ಕಪ್ಪ (63) ಮೃತ ವ್ಯಕ್ತಿ. ಅವರ ಸಂಬಂಧಿ ಪ್ರಕಾಶ್ (25) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಬುಧವಾರ ನಡೆದ ಘಟನೆ ಬಗ್ಗೆ ಮಾಹಿತಿ ನೀಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿಕ್ರಿಯೆ ಪಡೆಯಲು ಕರೆಯನ್ನೂ ಸ್ವೀಕರಿಸುತ್ತಿಲ್ಲ.</p>.<p>‘ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿ ಘಟನೆ ನಡೆದಿದೆ. ದಾರಿ ಮಾಡಿಕೊಳ್ಳಲು ಜನರೇ ಬೆಂಕಿ ಹಾಕಿರುವ ಮಾಹಿತಿ ಬಂದಿದೆ. ಅರಣ್ಯ ಇಲಾಖೆಯಿಂದಲೂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ’ ಎಂದು ಡಿಸಿಎಫ್ ವಿ.ಏಡುಕೊಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬೆಟ್ಟದಲ್ಲಿ ಯುಗಾದಿ ದಿನ ಸಂಜೆ ಗ್ರಾಮಸ್ಥರು ಪ್ರತಿ ವರ್ಷ ದೀಪ ಹಚ್ಚುತ್ತಾರೆ. ಈ ಬಾರಿ ಮಾರ್ಚ್ 22ರಂದು ನಡೆಯಲಿರುವ ಹಬ್ಬಕ್ಕೆ ನಿಕ್ಕಪ್ಪ ಗಿಡ ಕಿತ್ತು, ಕಸ ತೆಗೆದು ಹಾಕಿ ಕಾಲುದಾರಿ ಮಾಡುತ್ತಿದ್ದರು. ಗ್ರಾಮದಿಂದ 1.5 ಕಿ.ಮೀ ದೂರವಿರುವ ಈ ಕಾಲುದಾರಿಯನ್ನು ಪ್ರತಿ ವರ್ಷವೂ ಅವರೇ ಸ್ವಚ್ಛಪಡಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು:</strong> ಯುಗಾದಿ ಹಬ್ಬದ ದಿನಕ್ಕೆ ಟೇಕಲ್ ಹೋಬಳಿಯ ಉಳ್ಳೇರಹಳ್ಳಿ ಭೂತಮ್ಮನ ಬೆಟ್ಟದಲ್ಲಿ ಜ್ಯೋತಿ ಬೆಳಗಿಸಲು ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಬುಧವಾರ ಕಾಲುದಾರಿ ನಿರ್ಮಿಸುವ ವೇಳೆ ಬೆಂಕಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.</p>.<p>ಉಳ್ಳೇರಹಳ್ಳಿ ಗ್ರಾಮದ ನಿಕ್ಕಪ್ಪ (63) ಮೃತ ವ್ಯಕ್ತಿ. ಅವರ ಸಂಬಂಧಿ ಪ್ರಕಾಶ್ (25) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಬುಧವಾರ ನಡೆದ ಘಟನೆ ಬಗ್ಗೆ ಮಾಹಿತಿ ನೀಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿಕ್ರಿಯೆ ಪಡೆಯಲು ಕರೆಯನ್ನೂ ಸ್ವೀಕರಿಸುತ್ತಿಲ್ಲ.</p>.<p>‘ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿ ಘಟನೆ ನಡೆದಿದೆ. ದಾರಿ ಮಾಡಿಕೊಳ್ಳಲು ಜನರೇ ಬೆಂಕಿ ಹಾಕಿರುವ ಮಾಹಿತಿ ಬಂದಿದೆ. ಅರಣ್ಯ ಇಲಾಖೆಯಿಂದಲೂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ’ ಎಂದು ಡಿಸಿಎಫ್ ವಿ.ಏಡುಕೊಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬೆಟ್ಟದಲ್ಲಿ ಯುಗಾದಿ ದಿನ ಸಂಜೆ ಗ್ರಾಮಸ್ಥರು ಪ್ರತಿ ವರ್ಷ ದೀಪ ಹಚ್ಚುತ್ತಾರೆ. ಈ ಬಾರಿ ಮಾರ್ಚ್ 22ರಂದು ನಡೆಯಲಿರುವ ಹಬ್ಬಕ್ಕೆ ನಿಕ್ಕಪ್ಪ ಗಿಡ ಕಿತ್ತು, ಕಸ ತೆಗೆದು ಹಾಕಿ ಕಾಲುದಾರಿ ಮಾಡುತ್ತಿದ್ದರು. ಗ್ರಾಮದಿಂದ 1.5 ಕಿ.ಮೀ ದೂರವಿರುವ ಈ ಕಾಲುದಾರಿಯನ್ನು ಪ್ರತಿ ವರ್ಷವೂ ಅವರೇ ಸ್ವಚ್ಛಪಡಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>