ಕಾರ್ಖಾನೆಗೆ ಬೀಗ ಹಾಕದಂತೆ ತಡೆದಿರುವುದರಲ್ಲಿ ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿದರು. ಕಾರ್ಖಾನೆ ಕಲುಷಿತ ತ್ಯಾಜ್ಯ ಸೇವಿಸಿ ಸಾವನ್ನಪ್ಪಿದ ಹಸುಗಳಿಗೆ ಜಿಲ್ಲಾಧಿಕಾರಿ ಆದೇಶದಂತೆ ಸೀಮೆ ಹಸುಗಳನ್ನು ನೀಡಲು ತೀರ್ಮಾನವಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಹನುಮಂತರಾಯ, ಸೀತನಾಯಕನಹಳ್ಳಿಯ ನಾಗಾರ್ಜನ್, ಸೋಮಶೇಖರ್ ರೆಡ್ಡಿ, ಭದ್ರಾರೆಡ್ಡಿ, ರಾಜಾರೆಡ್ಡಿ, ಮಂಜುನಾಥ್ ರೆಡ್ಡಿ, ಮಲ್ಲೇಶ್ ರೆಡ್ಡಿ, ರವೀಂದ್ರ ರೆಡ್ಡಿ, ರಾಮಕ್ಕ, ಚಿಕ್ಕಸೊಣ್ಣಪ್ಪ ಮತ್ತು ಚಂದ್ರಾರೆಡ್ಡಿಗೆ ಸೀಮೆಹಸು ನೀಡಲು ತೀರ್ಮಾನಿಸಲಾಗಿದೆ ಎಂದರು.
ಪಶುವೈದ್ಯ ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸ್ ಮೂರ್ತಿ, ಸರ್ಕಲ್ ಇನ್ಸ್ಪೆಕ್ಟರ್ ಶಿವಸ್ವಾಮಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೆಡ್ಶೆಟ್ಟಹಳ್ಳಿ ರಮೇಶ್, ಗೌರವಾಧ್ಯಕ್ಷ ಚನ್ನವೀರದೇವರು, ಜಿ.ಪಂ. ಮಾಜಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಖಾನೆ ಆಡಳಿತಾಧಿಕಾರಿ ಜೋಸೆಫ್, ದಾಸು, ಸದಾನಂದ್ ಉಪಸ್ಥಿತರಿದ್ದರು.