ಕೆಜಿಎಫ್: ನಗರದ ರಾಬರ್ಟ್ಸನ್ಪೇಟೆ ಬಳಿ ಮಂಗಳವಾರ ಸಂಜೆ ಬೀಸಿದ ಭಾರಿ ಬಿರುಗಾಳಿಯಿಂದ ನಗರದ ಜನತೆ ಸೈನೆಡ್ ದೂಳಿನ ಸ್ನಾನ ಅನುಭವಿಸಿದರು.
ಸಂಜೆ 4.30ರಿಂದ ಸುಮಾರು ಅರ್ಧ ಗಂಟೆ ಕಾಲ ಬೀಸಿದ ಬಿರುಗಾಳಿಯಿಂದ ಊರಿಗಾಂ, ಕೆನಡೀಸ್ ಲೈನ್, ಅಶೋಕನಗರ, ಡಾ.ಅಂಬೇಡ್ಕರ್ ರಸ್ತೆ, ಎಂ.ಜಿ.ಮಾರುಕಟ್ಟೆ ಸಂಕೀರ್ಣ ಹಾಗೂ ರಾಬರ್ಟ್ಸನ್ಪೇಟೆ ಸಂಪೂರ್ಣವಾಗಿ ದೂಳುಮಯವಾಯಿತು.
ಬಿಜಿಎಂಎಲ್ನ ಸೈನೆಡ್ ಗುಡ್ಡದ ಮೇಲ್ಭಾಗದ ತೆಳುಮಣ್ಣು ಬಿರುಗಾಳಿಯೊಂದಿಗೆ ಮಿಶ್ರವಾಗಿ ಹರಡತೊಡಗಿದಾಗ ಇಡೀ ಪ್ರದೇಶದ ಜನತೆ ಸಂಕಟ ಪಡುವಂತಾಯಿತು.