<p><strong>ಕೋಲಾರ: </strong>ಈ ಬಾರಿಯ ರೈಲು ಬಜೆಟ್ ಜಿಲ್ಲೆಗೆ ಸಿಹಿ-ಕಹಿಯ ಸಮ್ಮಿಶ್ರ ಕೊಡುಗೆ ನೀಡಿದೆ. ಬಂಗಾರಪೇಟೆಯಿಂದ ಬೆಂಗಳೂರಿಗೆ ಮತ್ತು ಕೋಲಾರದಿಂದ ಬೆಂಗಳೂರಿಗೆ -ನೂತನ ರೈಲನ್ನು ಬಜೆಟ್ ಘೋಷಿಸಿದೆ. ಮಾರಿಕುಪ್ಪಂ-ಬಂಗಾರಪೇಟೆ ನಡುವೆಯೂ ಹೊಸ ರೈಲು ಸಂಚರಿಸಲಿದೆ. ರೈಲ್ವೆ ಕೋಚ್ ಕಾರ್ಖಾನೆಯೂ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವುದು ಮತ್ತೊಂದು ವಿಶೇಷ.<br /> <br /> ಹೊಸ ರೈಲಿನ ಘೋಷಣೆ ಸಂತಸದ ವಿಚಾರವೇ ಸರಿ. ಆದರೆ, ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕೋಲಾರ-ಚಿಕ್ಕಬಳ್ಳಾಪುರ ನಡುವಿನ ಗೇಜ್ ಪರಿವರ್ತನೆ ಕಾಮಗಾರಿ ಮಾತ್ರ ಈ ಸಂತಸವನ್ನು ಅಣಕಿಸುತ್ತಿದೆ! ಕೋಲಾರ-ಚಿಕ್ಕಬಳ್ಳಾಪುರ ಮಾರ್ಗದ ನಡುವೆ ಒಂದೇ ಲೇನಿನ ಮಾರ್ಗವೇ ಇನ್ನೂ ಪೂರ್ಣಗೊಂಡಿಲ್ಲ. ಹಲವು ವರ್ಷಗಳಿಂದ ಕಾಮಗಾರಿ ಕುಂಟುತ್ತಲೇ ಇದೆ.<br /> <br /> ಬಜೆಟ್ನಲ್ಲಿ ಕೋಲಾರ-ವೈಟ್ಫೀಲ್ಡ್ ನಡುವಿನ ರೈಲು ಮಾರ್ಗಕ್ಕೆ ಹಣ ಮಂಜೂರಾಗಿದೆ. ಮಾರ್ಗದ ಸಮೀಕ್ಷೆ ಈಗಾಗಲೇ ಮುಗಿದಿದೆ. ಈ ಮಾರ್ಗವನ್ನು ಬೆಂಗಳೂರು ಮುಖ್ಯ ರೈಲು ನಿಲ್ದಾಣದವರೆಗೂ ವಿಸ್ತರಿಸಬೇಕೆಂಬುದು ಎಲ್ಲ ಪ್ರಯಾಣಿಕರ ಆಗ್ರಹ. ಹಾಗಾದರೆ ಮಾತ್ರ ಬೆಂಗಳೂರಿಗೆ ತೆರಳುವವರು ಬಂಗಾರಪೇಟೆ ಮೂಲಕವೇ ತೆರಳುವ ಅನಿವಾರ್ಯತೆ ತಪ್ಪುತ್ತದೆ.<br /> ಹೊಸ ರೈಲು: ಕೋಲಾರ-ಬೆಂಗಳೂರು ನಡುವೆ ಹೊಸ ರೈಲು ಸಂಚರಿಸಲಿದೆ ಎಂಬ ಸಂಗತಿ ಕೋಲಾರದ ಮಂದಿಯಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ. <br /> <br /> ಪ್ರಸ್ತುತ ಕೋಲಾರ ನಿಲ್ದಾಣದಿಂದ ಇರುವ ಪುಷ್ಪುಲ್ ರೈಲಿನಲ್ಲಿ ಮೂಲಸೌಕರ್ಯವೇ ಇಲ್ಲ. ಅದು ಬೆಂಗಳೂರಿನ ದಂಡು ನಿಲ್ದಾಣದವರೆಗೆ ಮಾತ್ರ ಹೋಗುತ್ತಿದೆ. ಅದನ್ನು ಮುಖ್ಯ ರೈಲು ನಿಲ್ದಾಣದವರೆಗೂ ವಿಸ್ತರಿಸಬೇಕು. ಎರಡೂವರೆ ದಶಕದಿಂದ ಕೋಲಾರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಎಚ್.ಮುನಿಯಪ್ಪನವರು ಈ ಕಡೆಗೆ ಹೆಚ್ಚು ಗಮನ ಹರಿಸಬೇಕಿತ್ತು ಎಂಬ ಅಭಿಪ್ರಾಯ-ಆಗ್ರಹ ಕಳೆದ ವರ್ಷ ರೈಲ್ವೆ ಬಜೆಟ್ ಸಂದರ್ಭದಲ್ಲೂ ಕೇಳಿ ಬಂದಿತ್ತು.<br /> <br /> ಬೆಳಿಗ್ಗೆ 7.15ಕ್ಕೆ ಹೊರಡುವ ಈ ರೈಲು 9.45ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ. ನಂತರ ಸಂಜೆ.5.55ಕ್ಕೆ ಅಲ್ಲಿಂದ ಪಯಣ ಬೆಳೆಸಿ ರಾತ್ರಿ 8.20ಕ್ಕೆ ಕೋಲಾರಕ್ಕೆ ಬರುತ್ತಿತ್ತು. ಇತ್ತೀಚೆಗಷ್ಟೆ ಈ ರೈಲು ಮಧ್ಯಾಹ್ನದ ಅವಧಿಯಲ್ಲೂ ಕೋಲಾರ-ಬೆಂಗಳೂರು ನಡುವೆ ಸಂಚರಿಸುತ್ತಿದೆ. ಕಂಟೋನ್ಮೆಂಟ್ನಿಂದ ಬೆಳಿಗ್ಗೆ 11ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಬಂಗಾರಪೇಟೆಗೆ ಬರುತ್ತದೆ. 3 ಗಂಟೆಗೆ ಬಂಗಾರಪೇಟೆ ಬಿಟ್ಟು ಬೆಂಗಳೂರಿನ ಕಂಟೋನ್ಮೆಂಟ್ಗೆ ಸಂಜೆ 5.15ಕ್ಕೆ ಬರುತ್ತದೆ. <br /> <br /> <strong>ಪ್ರಶ್ನೆಗಳು:</strong> ಕೋಲಾರ-ಬೆಂಗಳೂರು ನಡುವೆ ಪ್ರಸ್ತುತ ಘೋಷಿಸಿರುವ ಹೊಸ ರೈಲು ಕೋಲಾರದಿಂದ ಬೆಂಗಳೂರು ಮುಖ್ಯ ರೈಲು ನಿಲ್ದಾಣದವರೆಗೂ ಸಂಚರಿಸುತ್ತದೆಯೆ? ಈ ಪ್ರಶ್ನೆಗೆ ಉತ್ತರಹೌದು ಎಂದಾದರೆ, ಪ್ರಯಾಣಿಕರಿಗೆ ಸಂತಸ ಕಟ್ಟಿಟ್ಟ ಬುತ್ತಿ. ಇಲ್ಲವಾದರೆ ಮತ್ತದೇ ನಿರಾಶೆ ಖಚಿತ.ಈಗ ಸಂಚರಿಸುತ್ತಿರುವ ರೈಲಿನ ವೇಳಾಪಟ್ಟಿ ಪ್ರಯಾಣಿಕರ ಸ್ನೇಹಿಯಾಗಿಲ್ಲ ಎಂಬ ದೂರಿದೆ. ಬೆಳಿಗ್ಗೆ 7.30ಕ್ಕೆ ಕೋಲಾರದಿಂದ ಹೊರಡುತ್ತಿದ್ದ ರೈಲು ಇನ್ನೂ 15 ನಿಮಿಷ ಮುಂಚೆಯೇ ಹೊರಡುತ್ತಿದೆ. <br /> <br /> ಈ ವೇಳಾಪಟ್ಟಿ ಬದಲಿಸುವಂತೆ ಕೋರಿ ಪ್ರಯಾಣಿಕರು ಸಲ್ಲಿಸಿದ ಮನವಿಗೆ ನಿರೀಕ್ಷಿತ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಹೊಸ ರೈಲಿನ ವೇಳಾಪಟ್ಟಿ ಪ್ರಯಾಣಿಕ ಸ್ನೇಹಿಯಾಗಿರುತ್ತದೆಯೆ ಎಂಬ ಪ್ರಶ್ನೆಯೂ ಮೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>ಈ ಬಾರಿಯ ರೈಲು ಬಜೆಟ್ ಜಿಲ್ಲೆಗೆ ಸಿಹಿ-ಕಹಿಯ ಸಮ್ಮಿಶ್ರ ಕೊಡುಗೆ ನೀಡಿದೆ. ಬಂಗಾರಪೇಟೆಯಿಂದ ಬೆಂಗಳೂರಿಗೆ ಮತ್ತು ಕೋಲಾರದಿಂದ ಬೆಂಗಳೂರಿಗೆ -ನೂತನ ರೈಲನ್ನು ಬಜೆಟ್ ಘೋಷಿಸಿದೆ. ಮಾರಿಕುಪ್ಪಂ-ಬಂಗಾರಪೇಟೆ ನಡುವೆಯೂ ಹೊಸ ರೈಲು ಸಂಚರಿಸಲಿದೆ. ರೈಲ್ವೆ ಕೋಚ್ ಕಾರ್ಖಾನೆಯೂ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವುದು ಮತ್ತೊಂದು ವಿಶೇಷ.<br /> <br /> ಹೊಸ ರೈಲಿನ ಘೋಷಣೆ ಸಂತಸದ ವಿಚಾರವೇ ಸರಿ. ಆದರೆ, ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕೋಲಾರ-ಚಿಕ್ಕಬಳ್ಳಾಪುರ ನಡುವಿನ ಗೇಜ್ ಪರಿವರ್ತನೆ ಕಾಮಗಾರಿ ಮಾತ್ರ ಈ ಸಂತಸವನ್ನು ಅಣಕಿಸುತ್ತಿದೆ! ಕೋಲಾರ-ಚಿಕ್ಕಬಳ್ಳಾಪುರ ಮಾರ್ಗದ ನಡುವೆ ಒಂದೇ ಲೇನಿನ ಮಾರ್ಗವೇ ಇನ್ನೂ ಪೂರ್ಣಗೊಂಡಿಲ್ಲ. ಹಲವು ವರ್ಷಗಳಿಂದ ಕಾಮಗಾರಿ ಕುಂಟುತ್ತಲೇ ಇದೆ.<br /> <br /> ಬಜೆಟ್ನಲ್ಲಿ ಕೋಲಾರ-ವೈಟ್ಫೀಲ್ಡ್ ನಡುವಿನ ರೈಲು ಮಾರ್ಗಕ್ಕೆ ಹಣ ಮಂಜೂರಾಗಿದೆ. ಮಾರ್ಗದ ಸಮೀಕ್ಷೆ ಈಗಾಗಲೇ ಮುಗಿದಿದೆ. ಈ ಮಾರ್ಗವನ್ನು ಬೆಂಗಳೂರು ಮುಖ್ಯ ರೈಲು ನಿಲ್ದಾಣದವರೆಗೂ ವಿಸ್ತರಿಸಬೇಕೆಂಬುದು ಎಲ್ಲ ಪ್ರಯಾಣಿಕರ ಆಗ್ರಹ. ಹಾಗಾದರೆ ಮಾತ್ರ ಬೆಂಗಳೂರಿಗೆ ತೆರಳುವವರು ಬಂಗಾರಪೇಟೆ ಮೂಲಕವೇ ತೆರಳುವ ಅನಿವಾರ್ಯತೆ ತಪ್ಪುತ್ತದೆ.<br /> ಹೊಸ ರೈಲು: ಕೋಲಾರ-ಬೆಂಗಳೂರು ನಡುವೆ ಹೊಸ ರೈಲು ಸಂಚರಿಸಲಿದೆ ಎಂಬ ಸಂಗತಿ ಕೋಲಾರದ ಮಂದಿಯಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ. <br /> <br /> ಪ್ರಸ್ತುತ ಕೋಲಾರ ನಿಲ್ದಾಣದಿಂದ ಇರುವ ಪುಷ್ಪುಲ್ ರೈಲಿನಲ್ಲಿ ಮೂಲಸೌಕರ್ಯವೇ ಇಲ್ಲ. ಅದು ಬೆಂಗಳೂರಿನ ದಂಡು ನಿಲ್ದಾಣದವರೆಗೆ ಮಾತ್ರ ಹೋಗುತ್ತಿದೆ. ಅದನ್ನು ಮುಖ್ಯ ರೈಲು ನಿಲ್ದಾಣದವರೆಗೂ ವಿಸ್ತರಿಸಬೇಕು. ಎರಡೂವರೆ ದಶಕದಿಂದ ಕೋಲಾರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಎಚ್.ಮುನಿಯಪ್ಪನವರು ಈ ಕಡೆಗೆ ಹೆಚ್ಚು ಗಮನ ಹರಿಸಬೇಕಿತ್ತು ಎಂಬ ಅಭಿಪ್ರಾಯ-ಆಗ್ರಹ ಕಳೆದ ವರ್ಷ ರೈಲ್ವೆ ಬಜೆಟ್ ಸಂದರ್ಭದಲ್ಲೂ ಕೇಳಿ ಬಂದಿತ್ತು.<br /> <br /> ಬೆಳಿಗ್ಗೆ 7.15ಕ್ಕೆ ಹೊರಡುವ ಈ ರೈಲು 9.45ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ. ನಂತರ ಸಂಜೆ.5.55ಕ್ಕೆ ಅಲ್ಲಿಂದ ಪಯಣ ಬೆಳೆಸಿ ರಾತ್ರಿ 8.20ಕ್ಕೆ ಕೋಲಾರಕ್ಕೆ ಬರುತ್ತಿತ್ತು. ಇತ್ತೀಚೆಗಷ್ಟೆ ಈ ರೈಲು ಮಧ್ಯಾಹ್ನದ ಅವಧಿಯಲ್ಲೂ ಕೋಲಾರ-ಬೆಂಗಳೂರು ನಡುವೆ ಸಂಚರಿಸುತ್ತಿದೆ. ಕಂಟೋನ್ಮೆಂಟ್ನಿಂದ ಬೆಳಿಗ್ಗೆ 11ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಬಂಗಾರಪೇಟೆಗೆ ಬರುತ್ತದೆ. 3 ಗಂಟೆಗೆ ಬಂಗಾರಪೇಟೆ ಬಿಟ್ಟು ಬೆಂಗಳೂರಿನ ಕಂಟೋನ್ಮೆಂಟ್ಗೆ ಸಂಜೆ 5.15ಕ್ಕೆ ಬರುತ್ತದೆ. <br /> <br /> <strong>ಪ್ರಶ್ನೆಗಳು:</strong> ಕೋಲಾರ-ಬೆಂಗಳೂರು ನಡುವೆ ಪ್ರಸ್ತುತ ಘೋಷಿಸಿರುವ ಹೊಸ ರೈಲು ಕೋಲಾರದಿಂದ ಬೆಂಗಳೂರು ಮುಖ್ಯ ರೈಲು ನಿಲ್ದಾಣದವರೆಗೂ ಸಂಚರಿಸುತ್ತದೆಯೆ? ಈ ಪ್ರಶ್ನೆಗೆ ಉತ್ತರಹೌದು ಎಂದಾದರೆ, ಪ್ರಯಾಣಿಕರಿಗೆ ಸಂತಸ ಕಟ್ಟಿಟ್ಟ ಬುತ್ತಿ. ಇಲ್ಲವಾದರೆ ಮತ್ತದೇ ನಿರಾಶೆ ಖಚಿತ.ಈಗ ಸಂಚರಿಸುತ್ತಿರುವ ರೈಲಿನ ವೇಳಾಪಟ್ಟಿ ಪ್ರಯಾಣಿಕರ ಸ್ನೇಹಿಯಾಗಿಲ್ಲ ಎಂಬ ದೂರಿದೆ. ಬೆಳಿಗ್ಗೆ 7.30ಕ್ಕೆ ಕೋಲಾರದಿಂದ ಹೊರಡುತ್ತಿದ್ದ ರೈಲು ಇನ್ನೂ 15 ನಿಮಿಷ ಮುಂಚೆಯೇ ಹೊರಡುತ್ತಿದೆ. <br /> <br /> ಈ ವೇಳಾಪಟ್ಟಿ ಬದಲಿಸುವಂತೆ ಕೋರಿ ಪ್ರಯಾಣಿಕರು ಸಲ್ಲಿಸಿದ ಮನವಿಗೆ ನಿರೀಕ್ಷಿತ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಹೊಸ ರೈಲಿನ ವೇಳಾಪಟ್ಟಿ ಪ್ರಯಾಣಿಕ ಸ್ನೇಹಿಯಾಗಿರುತ್ತದೆಯೆ ಎಂಬ ಪ್ರಶ್ನೆಯೂ ಮೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>