<p><strong>ಗಂಗಾವತಿ</strong>: ‘ಹುಟ್ಟು ಮತ್ತು ಸಾವು, ಅದರ ನಡುವಿನ ಬದುಕು, ಯಾವುದೂ ನಮ್ಮ ಕೈಯಲ್ಲಿಲ್ಲ. ಭೂಮಿಗೆ ಬರಬೇಕಾದರೆ ಅರ್ಜಿ ಸಲ್ಲಿಸಿ ಇಂಥವರ ಮನೆಯಲ್ಲೆ ಹುಟ್ಟಬೇಕೆಂದು ತೀರ್ಮಾನಿಸುವುದಿಲ್ಲ. ಯಾವೋದು ಒಂದು ಶಕ್ತಿ ನಮ್ಮನ್ನು ಭೂಮಿಗೆ ಕಳುಹಿಸಿದೆ’ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p>.<p>ನಗರದ ಖಾಸಗಿ ಹೊಟೇಲ್ನಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರ ಶಷ್ಠಿಪೂರ್ತಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಯಾರು ಶಾಶ್ವತವಾಗಿ ಭೂಮಿ ಮೇಲಿರಲು ಸಾಧ್ಯವಿಲ್ಲ. ಜಾತ್ರೆ ಮಾಡಿ ಹೋಗಲು ಬಂದಿದ್ದೇವೆ. ಈ ಜೀವನದಲ್ಲಿ ವೈವಾಹಿಕ ವ್ಯವಸ್ಥೆ ಅದ್ಭುತ ಸಂಬಂಧ’ ಎಂದರು. </p>.<p>ಎಚ್.ಆರ್ ಶ್ರೀನಾಥ ಮಾತನಾಡಿ, ‘ನನ್ನ ಶಷ್ಠಿಪೂರ್ತಿ ಅಭಿನಂದನಾ ಸಮಾರಂಭಕ್ಕೆ ಸರ್ವ ಜನಾಂಗದವರು ಆಗಮಿಸಿ ಅಭಿನಂದಿಸಿ ಹಾರೈಸಿದ್ದು ಖುಷಿನೀಡಿದೆ. ಕ್ಷೇತ್ರದ ಜನರ ಪ್ರೀತಿಗೆ ಸದಾ ಅಭಾರಿ’ ಎಂದರು.</p>.<p>ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಶ್ರೀರಾಮುಲು, ಮಾಜಿ ಶಾಸಕರಾದ ಜಿ.ವೀರಪ್ಪ, ಪರಣ್ಣ ಮುನವಳ್ಳಿ, ಕಲ್ಮಠದ ಕೊಟ್ಟೂರೇಶ್ವರ ಸ್ವಾಮೀಜಿ ಸೇರಿದಂತೆ ಸರ್ವ ಜನಾಂಗದ ಸಮುದಾಯದವ ಪ್ರಮುಖರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ‘ಹುಟ್ಟು ಮತ್ತು ಸಾವು, ಅದರ ನಡುವಿನ ಬದುಕು, ಯಾವುದೂ ನಮ್ಮ ಕೈಯಲ್ಲಿಲ್ಲ. ಭೂಮಿಗೆ ಬರಬೇಕಾದರೆ ಅರ್ಜಿ ಸಲ್ಲಿಸಿ ಇಂಥವರ ಮನೆಯಲ್ಲೆ ಹುಟ್ಟಬೇಕೆಂದು ತೀರ್ಮಾನಿಸುವುದಿಲ್ಲ. ಯಾವೋದು ಒಂದು ಶಕ್ತಿ ನಮ್ಮನ್ನು ಭೂಮಿಗೆ ಕಳುಹಿಸಿದೆ’ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p>.<p>ನಗರದ ಖಾಸಗಿ ಹೊಟೇಲ್ನಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರ ಶಷ್ಠಿಪೂರ್ತಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಯಾರು ಶಾಶ್ವತವಾಗಿ ಭೂಮಿ ಮೇಲಿರಲು ಸಾಧ್ಯವಿಲ್ಲ. ಜಾತ್ರೆ ಮಾಡಿ ಹೋಗಲು ಬಂದಿದ್ದೇವೆ. ಈ ಜೀವನದಲ್ಲಿ ವೈವಾಹಿಕ ವ್ಯವಸ್ಥೆ ಅದ್ಭುತ ಸಂಬಂಧ’ ಎಂದರು. </p>.<p>ಎಚ್.ಆರ್ ಶ್ರೀನಾಥ ಮಾತನಾಡಿ, ‘ನನ್ನ ಶಷ್ಠಿಪೂರ್ತಿ ಅಭಿನಂದನಾ ಸಮಾರಂಭಕ್ಕೆ ಸರ್ವ ಜನಾಂಗದವರು ಆಗಮಿಸಿ ಅಭಿನಂದಿಸಿ ಹಾರೈಸಿದ್ದು ಖುಷಿನೀಡಿದೆ. ಕ್ಷೇತ್ರದ ಜನರ ಪ್ರೀತಿಗೆ ಸದಾ ಅಭಾರಿ’ ಎಂದರು.</p>.<p>ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಶ್ರೀರಾಮುಲು, ಮಾಜಿ ಶಾಸಕರಾದ ಜಿ.ವೀರಪ್ಪ, ಪರಣ್ಣ ಮುನವಳ್ಳಿ, ಕಲ್ಮಠದ ಕೊಟ್ಟೂರೇಶ್ವರ ಸ್ವಾಮೀಜಿ ಸೇರಿದಂತೆ ಸರ್ವ ಜನಾಂಗದ ಸಮುದಾಯದವ ಪ್ರಮುಖರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>